ವಾಸ್ತು ದೋಷ ನಿವಾರಣೆಗೆ ರೆಡ್ಡಿ ಮನೆ ಗೇಟ್ ಬಲಿ

ಅತ್ಯಂತ ವಿಶಾಲವಾದ ಪ್ರಾಂಗಣದ ಪೂರ್ವದಿಕ್ಕಿಗೆ ತಲಬಾಗಿಲನ್ನು ಹೊಂದಿರುವ ರೆಡ್ಡಿಯ ಮನೆಯಲ್ಲಿ ವಾಸ್ತು ಅಕ್ಷರಶಃ ಪಾಲನೆ ಆಗುತ್ತಿದೆ. ಮನೆಯ ಒಟ್ಟು ಆವರಣಕ್ಕೆ 2 ಗೇಟುಗಳಿವೆ. ಇವುಗಳಲ್ಲಿ ಒಂದು ರೆಡ್ಡಿ ವಾಸವಿರುವ ಮನೆಯ ಒಳ - ಹೊರಗಡೆಗೆ ತಿರುಗಾಡಲು ಇರುವ ಮುಖ್ಯದ್ವಾರ. ಇನ್ನೊಂದು ಕುಟೀರ ಪ್ರವೇಶಕ್ಕಾಗಿ ಆವರಣದ ಇನ್ನೊಂದು ಕೊನೆಯ ಈಶಾನ್ಯಕ್ಕೆ ಮತ್ತೊಂದು ಗೇಟಿದೆ.
ಜನಾರ್ದನ ರೆಡ್ಡಿ ಮನೆಗೆ ನೈರುತ್ಯದಲ್ಲಿ ನಿಸರ್ಗದತ್ತವಾದ ಕಲ್ಲಿನಗುಡ್ಡವಿದೆ. ಮನೆಯ ನೈರುತ್ಯಕ್ಕೆ ಎತ್ತರಕ್ಕೆಕ್ಕೆ ಕೋಣೆಯನ್ನು ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರು, ಬಿಜೆಪಿಯ ಸಾಮಾನ್ಯ ಪದಾಧಿಕಾರಿಗಳು - ಮುಖಂಡರು, ಅಧಿಕಾರಿಗಳು ರೆಡ್ಡಿಯನ್ನು ಭೇಟಿ ಮಾಡಲಿಕ್ಕಾಗಿರುವ ಪ್ರತ್ಯೇಕ ಐಷಾರಾಮಿ ಹವಾನಿಯಂತ್ರಿತ ಟೀಕ್ವುಡ್ನ ಕುಟೀರ ಪ್ರವೇಶಕ್ಕಾಗಿ ಆವರಣದ ಮುಂದಿನ ಸ್ಥಳದ ಕೊನೆಯ ಭಾಗದಲ್ಲಿ ಪ್ರತ್ಯೇಕ ಗೇಟ್ ಇದೆ.
ಸಿಬಿಐ ದಾಳಿಯ ನಂತರ ಕಂಗೆಟ್ಟಿರುವ ಅವರ ಆಪ್ತರು - ಕುಟುಂಬದ ಸದಸ್ಯರು ರೆಡ್ಡಿ ಮನೆಯ ವಾಸ್ತುದೋಷ ನಿವಾರಣೆಗಾಗಿ ಪಂಡಿತರನ್ನು ಆಹ್ವಾನಿಸಿ ಈಶಾನ್ಯಗೇಟ್ ಮಾತ್ರವೇ ಉಳಿಸಿಕೊಂಡು ರಾಜಮಾರ್ಗದ ಮುಖ್ಯದ್ವಾರ ಮುಚ್ಚುವ ಸಲಹೆ ಪಡೆದ್ದಾರೆ. ಈ ಸಲಹೆ ಕೂಡಲೇ ಚಾಲ್ತಿಗೆ ಬಂದಿದೆ. ಶನಿವಾರ ಬೆಳಗ್ಗೆಯಿಂದಲೇ ಗೇಟ್ ಮುಚ್ಚುವ ಕಾಮಗಾರಿ 10ಕ್ಕೂ ಹೆಚ್ಚಿನ ಕೂಲಿಗಳಿಂದ ವೇಗವಾಗಿ ನಡೆದಿದೆ. ಮಣ್ಣಿನ ಕೆಂಪು ಇಟ್ಟಿಗೆ, ಸಿಮೆಂಟು ಹಾಕಿ 5-6 ಅಡಿ ಎತ್ತರದಲ್ಲಿ ಗೋಡೆ ನಿರ್ಮಾಣ ಆಗುತ್ತಿದೆ. ಈಶಾನ್ಯದ ಗೇಟ್ನೇ ಇನ್ನುಮುಂದೆ ಮುಖ್ಯಗೇಟ್.












Click it and Unblock the Notifications