Get Updates
Get notified of breaking news, exclusive insights, and must-see stories!

ದೆಹಲಿಯಲ್ಲೇ ಸಿಬಿಐನಿಂದ ವೈಎಸ್ ಜಗನ್ ಬಂಧನ?

YS Jagan fears detention
ನವದೆಹಲಿ, ಸೆ.5: ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಆದರೆ, ವಿಚಾರಣೆಗಾಗಿ ಜಗನ್ ಅವರನ್ನು ಬಂಧಿಸಲು ಸಿಬಿಐ ತಂಡ ಕಾದು ಕೂತಿರುವ ಸುದ್ದಿ ಹೊರಬಿದ್ದಿದೆ.

ಸದ್ಯ ದೆಹಲಿಯಲ್ಲಿರುವ ಕಡಪ ಸಂಸದ ಜಗನ್ ಅವರ ಮೇಲೆ ಚಾರ್ಚ್ ಶೀಟ್ ದಾಖಲಿಸಿದ ನಂತರ ಬಂಧಿಸುವ ಸಾಧ್ಯತೆಯಿದೆ. ಓಬಳಾಪುರಂ ಗಣಿಗಾರಿಕೆ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದಂತೆ ಜಗನ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.

ವೈಎಸ್ ಜಗನ್ ಅವರ ತಂದೆ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಸುಮಾರು 8-9 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗಡಿಭಾಗದಲ್ಲಿ ಗಣಿಗಾರಿಕೆ ನಡೆಸಲು ಬಳ್ಳಾರಿ ರೆಡ್ಡಿ ಸೋದರರಿಗೆ ಅನುಮತಿ ನೀಡಿದ್ದರು. ಇದಲ್ಲದೆ ಅನೇಕ ಕಂಪನಿಗಳಲ್ಲೂ ವೈಎಸ್ ಜಗನ್ ಹಾಗೂ ರೆಡ್ಡಿ ಸೋದರರ ಅನಧಿಕೃತ ಪಾಲುದಾರಿಕೆ ಇದೆ.

ವೈಎಸ್ ಜಗನ್ ಅವರ ಮೇಲೆ ಅಕ್ರಮ ಆಸ್ತಿ ಹೊಂದಿರುವ ಆರೋಪ ಹೊರೆಸಿ ಸಿಬಿಐ FIR ದಾಖಲಿಸಿದೆ.ಜಾರಿ ನಿರ್ದೇಶನಾಲಯ ಕೂಡಾ ಜಗನ್ ಹಿಂದೆ ಬಿದ್ದಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ತಮ್ಮ ಒಡೆತನದ ಸಾಕ್ಷಿ ಮಾಧ್ಯಮ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಜಗನ್ ರಾಜೀನಾಮೆ ನೀಡಿದ್ದಾರೆ. ಆದರೆ ಪತ್ನಿ ಭಾರತಿ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+