ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭದ್ರಾವತಿಯಲ್ಲಿ ಭಾರೀ ಮಳೆ,ಮುಳುಗಿದ ಸೇತುವೆ
ಭದ್ರಾವತಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ನಗರದ ಮಧ್ಯ ಭಾಗದಲ್ಲಿರುವ ಭದ್ರಾ ನದಿ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಈ ಮಳೆಯಲ್ಲಿ ಗೌರಿ ಗಣಪತಿ ಹಬ್ಬ ಅದು ಹೇಗೆ ಮಾಡಿದೆವೋ ದೇವರಿಗೇ ಗೊತ್ತು ಎನ್ನುತ್ತಾರೆ ಪೇಪರ್ ಟೌನ್ ನಿವಾಸಿ ಸುಧಾ ಶಿವಕುಮಾರ್.
ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನ ಪ್ರವಾಹದಿಂದಾಗಿ ಅಂಬೇಡ್ಕರ್ ಕಾಲೋನಿ, ಗುಂಡುರಾವ್ ಶೆಡ್ ಮತ್ತು ಸುಣ್ಣದ ಹಳ್ಳಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.
ಈ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ಅವರಿಗೆ ಅಗತ್ಯವಿರುವ ತುರ್ತು ಕ್ರಮಗಳನ್ನು ತಕ್ಷಣ ಕೈಗೊಳ್ಳಲಾಗುವುದು ಎಂದು ಭದ್ರಾವತಿ ತಹಶೀಲ್ದಾರ್ ತಿಳಿಸಿದ್ದಾರೆ.
Comments
English summary
Heavy rain lashes Bhadravati and in Shivamogga. The new bridge in Bhadravati inundated. Evacuation of people living in low lying areas has began on a war footing- Tahashildar
Story first published: Saturday, September 3, 2011, 13:52 [IST]