ಭದ್ರಾವತಿಯಲ್ಲಿ ಭಾರೀ ಮಳೆ,ಮುಳುಗಿದ ಸೇತುವೆ

ಭದ್ರಾವತಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ನಗರದ ಮಧ್ಯ ಭಾಗದಲ್ಲಿರುವ ಭದ್ರಾ ನದಿ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಈ ಮಳೆಯಲ್ಲಿ ಗೌರಿ ಗಣಪತಿ ಹಬ್ಬ ಅದು ಹೇಗೆ ಮಾಡಿದೆವೋ ದೇವರಿಗೇ ಗೊತ್ತು ಎನ್ನುತ್ತಾರೆ ಪೇಪರ್ ಟೌನ್ ನಿವಾಸಿ ಸುಧಾ ಶಿವಕುಮಾರ್.
ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನ ಪ್ರವಾಹದಿಂದಾಗಿ ಅಂಬೇಡ್ಕರ್ ಕಾಲೋನಿ, ಗುಂಡುರಾವ್ ಶೆಡ್ ಮತ್ತು ಸುಣ್ಣದ ಹಳ್ಳಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.
ಈ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ಅವರಿಗೆ ಅಗತ್ಯವಿರುವ ತುರ್ತು ಕ್ರಮಗಳನ್ನು ತಕ್ಷಣ ಕೈಗೊಳ್ಳಲಾಗುವುದು ಎಂದು ಭದ್ರಾವತಿ ತಹಶೀಲ್ದಾರ್ ತಿಳಿಸಿದ್ದಾರೆ.












Click it and Unblock the Notifications