ಟಿ20: ಇಂಡಿಯಾ ಫೇವರೀಟ್, ದ್ರಾವಿಡ್ ಮೇಲೆ ಕಣ್ಣು

ಏಕದಿನ ವಿಶ್ವಕಪ್ ಚಾಂಪಿಯನ್ ತಂಡವು ಟೆಸ್ಟ್ ಸರಣಿಯಲ್ಲಿನ 4-0 ವೈಟ್ವಾಶ್ಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಅಭ್ಯಾಸ ಪಂದ್ಯಗಳಲ್ಲೂ ಗೆಲುವು ಸಾಧಿಸಿ ವಿಶ್ವಾಸವನ್ನು ಗಳಿಸಿದೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಚಿನಕುರಳಿ ಆಟ ತಂಡಕ್ಕೆ ಹೆಚ್ಚಿನ ಸ್ಪೂರ್ತಿ ನೀಡಿದೆ. ಎಡಗೈ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಫಾರ್ಮ್ ನಲ್ಲಿರುವುದರಿಂದ ಆರಂಭಿಕ ಆಟಗಾರ ಸ್ಥಾನಕ್ಕೆ ಹೆಚ್ಚಿನ ಬಲ ಸಿಗುತ್ತದೆ.
ದ್ರಾವಿಡ್ ಮೇಲೆ ಕಣ್ಣು: ಯುವಕರ ತಂಡಕ್ಕೆ ರಾಹುಲ್ ದ್ರಾವಿಡ್ ಹಾಗೂ ಸಚಿನ್ ಆಟ ನೆರವಾಗಲಿದೆ. ಕಳೆದ 3 ವರ್ಷಗಳಿಂದ ಟ್ವೆಂಟಿ-20 ಪಂದ್ಯವನ್ನು ಆಡದ ದ್ರಾವಿಡ್, ಟ್ವಿಂಟಿ 20 ಪಂದ್ಯಕ್ಕೆ ಹೊಂದಿಕೊಂಡು ಆಡುವ ನಿರೀಕ್ಷೆಯಿದೆ.
ಗಾಯಾಳು ಗೌತಮ್ ಗಂಭೀರ್ ಸರಣಿಯಿಂದ ಹೊರಬಿದ್ದಿರುವುದರಿಂದ ಹಿರಿಯ ಆಟಗಾರರು ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ.
ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ನ ಟ್ವೆಂಟಿ-20 ತಂಡವನ್ನು ಮುನ್ನಡೆಸಲಿದ್ದಾರೆ. ಆತಿಥೇಯರ ಬೌಲಿಂಗ್ ವಿಭಾಗದಲ್ಲಿ ಟಿಮ್ ಬ್ರೆಸ್ನಾನ್, ಸ್ಟೀವ್ ಫಿನ್, ಗ್ರೇಮ್ ಸ್ವಾನ್ ಹಾಗೂ ಏಕದಿನ ಸ್ಪೆಷಲಿಸ್ಟ್ ಜಾಡೆ ಡೆರ್ನ್ಬ್ಯಾಚ್ ಆಡುವ ಸಾಧ್ಯತೆಯಿದೆ.
ಆರಂಭಿಕ ಬ್ಯಾಟ್ಸ್ಮನ್ ಕ್ರೆಗ್ ಕೀಸ್ವೆಟರ್, ಇಯಾನ್ ಮೋರ್ಗನ್ ಹಾಗೂ ಕೇವಿನ್ ಪೀಟರ್ಸನ್ ಸಹಿತ ಅಗ್ರ ಆರು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಅಪಾಯಕಾರಿಗಳಾಗಿದ್ದಾರೆ. ಜೋಸ್ ಬಟ್ಲರ್, ಬೆನ್ಸ್ಟೋಕ್ಸ್ ಹಾಗೂ ಅಲೆಕ್ಸ್ ಹ್ಯಾಲ್ಸ್ ಕೂಡಾ ಉತ್ತಮ ಫಾರ್ಮ್ ನಲ್ಲಿದ್ದಾರೆ.
ಇತ್ತ ಪ್ರವೀಣ್ಕುಮಾರ್, ಆರ್ಪಿ ಸಿಂಗ್ ಕುಮಾರ್ಗೆ ಕನ್ನಡಿಗ ವಿನಯ್ಕುಮಾರ್ ಸಾಥ್ ನೀಡುವ ಸಾಧ್ಯತೆಯಿದೆ. ಅಮಿತ್ಮಿಶ್ರಾ ಅಥವಾ ಅಶ್ವಿನ್ ಸ್ಥಾನ ಪಡೆಯಬಹುದು. ಅರೋನ್ ಈ ಪಂದ್ಯದಲ್ಲಿ ಆಡುವುದು ಅನುಮಾನ.
ತಂಡಗಳು: ಭಾರತ: ಸಚಿನ್ ತೆಂಡುಲ್ಕರ್, ಪಾರ್ಥಿವ್ ಪಟೇಲ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ, ಪ್ರವೀಣ್ ಕುಮಾರ್, ಆರ್ಪಿ ಸಿಂಗ್, ಮುನಾಫ್ ಪಟೇಲ್, ವಿನಯ್ಕುಮಾರ್, ಅಮಿತ್ ಮಿಶ್ರಾ ಹಾಗೂ ಆರ್. ಅಶ್ವಿನ್.
ಇಂಗ್ಲೆಂಡ್: ಸ್ಟುವರ್ಟ್ ಬ್ರಾಡ್ (ನಾಯಕ), ರವಿ ಬೋಪಾರ, ಟಿಮ್ ಬ್ರೆಸ್ನಾನ್, ಜೋಸ್ ಬಟ್ಲರ್, ಜಾಡೆ ಡೆರ್ನ್ಬ್ಯಾಚ್, ಸ್ಟೀವ್ ಫಿನ್, ಅಲೆಕ್ಸ್ ಹೇಲ್ಸ್, ಕ್ರೆಗ್ ಕೀಸ್ವೆಟರ್(ವಿಕೆಟ್ಕೀಪರ್), ಇಯಾನ್ ಮೋರ್ಗನ್, ಸಮಿತ್ ಪಟೇಲ್, ಕೇವಿನ್ ಪೀಟರ್ಸನ್, ಬೆನ್ ಸ್ಟೋಕ್ಸ್, ಗ್ರೇಮ್ ಸ್ವಾನ್.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications