ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತರ ನೇಮಕ ವಿರೋಧಿಸಿದ ನರೆಂದ್ರ ಮೋದಿ

By Srinath
|
Google Oneindia Kannada News

gujrat-lokayukta-governor-cm-modi-tussle
ಅಹ್ಮದಾಬಾದ್, ಆ. 28: ಗುಜರಾತ್‌ನ ನೂತನ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಆರ್.ಎ. ಮೆಹ್ತಾರನ್ನು ತನ್ನ ವಿಶೇಷ ಅಧಿಕಾರ ಬಳಸಿ ರಾಜ್ಯಪಾಲೆ ಡಾ. ಕಮಲಾ ನೇಮಿಸಿರುವುದನ್ನು ಮುಖ್ಯಮಂತ್ರಿ ಮೋದಿಗೆ ಆಕ್ರೋಶವನ್ನುಂಟು ಮಾಡಿದೆ ಎನ್ನಲಾಗಿದೆ. ಇದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದ ರಾಜ್ಯಪಾಲರ ನಡುವೆ ಹೊಸ ಬಿಕ್ಕಟ್ಟು ಸೃಷ್ಟಿಸಿದೆ.

ಮೋದಿ ಸರಕಾರದ ವಿರುದ್ಧ ರೂ. 1 ಲಕ್ಷ ಕೋಟಿ ಮೊತ್ತದ ಬೃಹತ್ ಭ್ರಷ್ಟಾಚಾರದ ಹಗರಣಗಳ ಆರೋಪವನ್ನು ಕಾಂಗ್ರೆಸ್ ಹೊರಿಸಿದೆ. ಇಂತಹ ಸಂದರ್ಭ ರಾಜ್ಯದಲ್ಲಿ ನೂತನ ಲೋಕಾಯುಕ್ತರನ್ನು ನೇಮಕ ಗೊಳಿಸಿರುವುದು ಗಮನಾರ್ಹ ವಿಷಯವಾಗಿದೆ. ಜತೆಗೆ, ಅಣ್ಣಾ ಹಜಾರೆ ಉಪವಾಸ ವ್ರತ ಬೆಂಬಲಿಸುತ್ತಿರುವ ಬಿಜೆಪಿ ಪಕ್ಷವು ತಾನು ಅಧಿಕಾರದಲ್ಲಿರುವ ಗುಜರಾತ್‌ನಲ್ಲೇ ಲೋಕಾಯುಕ್ತ ನೇಮಕ ಮಾಡದಿರುವುದು ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಲೋಕಾಯಯುಕ್ತರಾಗಿ 2003ರಲ್ಲಿ ನ್ಯಾಯಮೂರ್ತಿ ಎಸ್‌ಎಂ ಸೋನಿ ಅವರ ಅಧಿಕಾರಾವಧಿ ಮುಗಿದ ಬಳಿಕ, ಏಳು ವರ್ಷಗಳಿಂದ ಗುಜರಾತ್‌ನಲ್ಲಿ ಲೋಕಾಯುಕ್ತರ ಸ್ಥಾನ ಖಾಲಿಯಾಗಿತ್ತು. ರಾಜ್ಯ ಸರಕಾರವು ಇದಕ್ಕೂ ಮೊದಲು ನ್ಯಾಯಮೂರ್ತಿ ಎಸ್‌ಡಿ ದವೆ ಹೆಸರನ್ನು ಲೋಕಾಯುಕ್ತ ಹುದ್ದೆಗೆ ನಿರಾಕರಿಸಿತ್ತು.

ಆದಾಗ್ಯೂ, ಇದೀಗ ನೂತನ ರಾಜ್ಯಪಾಲರ ನೇಮಕಾತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ನರೇಂದ್ರ ಮೋದಿ, ಗುಜರಾತ್ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂಬುದಾಗಿ ವರದಿಯೊಂದು ತಿಳಿಸಿದೆ. ಮೆಹ್ತಾರನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿ ಸುತ್ತೋಲೆಯನ್ನು ಜಾರಿಗೊಳಿಸಲು ರಾಜ್ಯಪಾಲೆ ಲೋಕಾಯುಕ್ತ ಕಾಯ್ದೆಯನ್ವಯ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡಿದ್ದಾರೆ.

ವಿಷಯಕ್ಕೆ ಸಂಬಂಧಿಸಿ ಚರ್ಚೆಗೆ ವಿರೋಧ ಪಕ್ಷ ಮುಂದೆ ಬರುತ್ತಿಲ್ಲ ಎಂದು ಗುಜರಾತ್‌ನ ಆಡಳಿತ ಪಕ್ಷ ಆಪಾದಿಸಿದ್ದರೆ, ಲೋಕಾಯುಕ್ತರ ನೇಮಕದಲ್ಲಿ ಸರಕಾರಕ್ಕೆ ಯಾವುದೇ ಕೆಲಸವಿಲ್ಲ. ಅವರನ್ನು ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು ಅಥವಾ ವಿರೋಧ ಪಕ್ಷದ ನಾಯಕರು ನೇಮಕ ಮಾಡುತ್ತಾರೆ ಎಂದು ವಿರೋಧ ಪಕ್ಷ ಹೇಳಿಕೊಂಡಿತ್ತು.

English summary
Gujrat gets new Lokayukta at last, But a tussle is in the offing between Gujrat governor Dr Kamla and CM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X