ಕೈಲಾಗದ ಕಟ್ಟಾ ಸುಬ್ರಹ್ಮಣ್ಯ ಮಾಧ್ಯಮಗಳ ಮೇಲೆ ಎಗರಾಡಿದ

ಏಕೆಂದರೆ, ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ (ಆ.22) ಮುಂದೂಡಿದೆ. ಗುರುವಾರ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿ. ಜಗನ್ನಾಥನ್ ಅವರು, ವಿಚಾರಣೆಯನ್ನು ಮುಂದೂಡಿದರು.
ವಿಚಾರಣೆ ವೇಳೆ ಮಾಧ್ಯಮಗಳ ಮೇಲೆ ಆರೋಪ: 'ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಜಗದೀಶನಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶರು ಜಾಮೀನು ನೀಡದೇ ಇರಲು ಮಾಧ್ಯಮಗಳೇ ಕಾರಣ. ಇವರ ವಿರುದ್ಧ ಮಾಧ್ಯಮಗಳು ರಂಜಿತ ವರದಿಗಳನ್ನು ಬಿತ್ತರಿಸಿದ ಪರಿಣಾಮವಾಗಿ ಇವರಿಗೆ ಜಾಮೀನು ದೊರೆಯಲಿಲ್ಲ' ಎಂದು ಅವರ ವಕೀಲ ಸಿವಿ ನಾಗೇಶ್ ಮಾಧ್ಯಮಗಳ ಮೇಲೆ ಹರಿಹಾಯ್ದರು.
ಅದಕ್ಕೆ ನ್ಯಾಯಮೂರ್ತಿಗಳು, 'ನೀವು ಈ ರೀತಿಯಾಗಿ ಯಾವುದೇ ಒಬ್ಬ ನ್ಯಾಯಾಧೀಶರ ಮೇಲೆ ನೇರ ವಾಗ್ದಾಳಿ ಮಾಡುವುದು ಸರಿಯಲ್ಲ. ನ್ಯಾಯಾಧೀಶರ ಆದೇಶ ಸರಿಯಿಲ್ಲ ಎಂದು ಹೇಳುವುದಷ್ಟೇ ನಿಮ್ಮ ಕೆಲಸ. ಆದರೆ ಮಾಧ್ಯಮಗಳಿಂದ ಪ್ರೇರಿತವಾಗಿದ್ದಾರೆ ಎನ್ನುವುದು ಸರಿಯಲ್ಲ. ಮಾಧ್ಯಮಗಳ ಮೇಲೆ ನಿಮಗೆ ಕೋಪ ಇದ್ದರೆ, ಅವುಗಳತ್ತ ನೀವು ಗಮನ ಹರಿಸಬೇಡಿ ಅಷ್ಟೇ' ಎಂದರು.
ಈ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿರುವ ಹಿರಿಯ ವಕೀಲ ಎಂಟಿ ನಾಣಯ್ಯ ಅವರು ವಾದಿಸಿ, 'ನಡುರಾತ್ರಿ ಕಟ್ಟಾ ಅವರನ್ನು ಬಂಧಿಸಲಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಈ ಅಪ್ಪ-ಮಗ ಕೋಟಿಗಟ್ಟಲೆ ಹಣದ ಅವ್ಯವಹಾರ ನಡೆಸಿದ್ದಾರೆ. ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಅವರಿಂದ ಬಲವಂತವಾಗಿ ಸಹಿ ಹಾಕಿಸಿಕೊಳ್ಳಲಾಗಿದೆ. ಈ ಕುರಿತು ನಮ್ಮಲ್ಲಿ ಸಂಪೂರ್ಣ ದಾಖಲೆಗಳು ಇವೆ' ಎಂದರು.











Click it and Unblock the Notifications