ಅಣ್ಣಾ ಬೆಂಬಲಕ್ಕೆ ಬಂದವರು ಮೈಕಿಗಾಗಿ ಸೆಣಸಿದರು
ಮಂಗಳೂರು,
ಆ. 16 : ದೆಹಲಿಯಲ್ಲಿ ಅಣ್ಣಾ ಹಜಾರೆ ಕೇಂದ್ರ ಸರ್ಕಾರದ ವಿರುದ್ದ ಸಮರ ಸಾರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಂತೆಯೇ ಮಂಗಳೂರಲ್ಲಿ ಅಣ್ಣಾ ಅವರಿಗೆ ಬೆಂಬಲ ಸೂಚಿಸಲು ಮುಂದಾದ ಎರಡು ಬಣಗಳು ಮೈಕಿಗಾಗಿ ಹೋರಾಟ' ಮಾಡಿದ ಘಟನೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯಿತು. id="toptextpromo">ಭ್ರಷ್ಟಾಚಾರ
ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು. ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳಲ್ಲೂ ತವಕ. ಆದರೆ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕೊಟ್ಟರೆ ಸಾಕು ಎನ್ನುವುದು ವಾದ. ಆದರೆ ಮತ್ತೊಂದು ಗುಂಪು ಲೋಕಪಾಲ ಮಸೂದೆ ಬಗ್ಗೆ ಬೇರೆಯೇ ಸಂಗತಿಗಳಿವೆ, ಅವುಗಳನ್ನು ಬಹಿರಂಗಪಡಿಸಲು ಅವಕಾಶ ಕೊಡಬೇಕು ಎನ್ನುವ ಪಟ್ಟು. id='are-slot-1' class='oiad oi-axt oiadv'> id='top-searched-articles'>ಅಂತಿಮವಾಗಿ
ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಎರಡೂ ಬಣಗಳ ಮೈಕಿಗಾಗಿ ಗುದ್ದಾಡಲು ಮುಂದಾದುದದನ್ನು ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು. ಅಂತೂ ಅಣ್ಣಾ ಅವರಿಗೆ ಎರಡೂ ಗುಂಪುಗಳ ಬೆಂಬಲ ಸಿಕ್ಕಿತು.











Click it and Unblock the Notifications