ಪದ್ಮನಾಭ ದೇವರಿಗೂ ನೇಪಾಳಕ್ಕೂ ಅನಂತ ನಂಟು

ಅನಂತ ಪದ್ಮನಾಭ ದೇವಸ್ಥಾನಕ್ಕೂ ನೇಪಾಳಕ್ಕೂ ಇರುವ ಸಂಬಂಧವೂ ಗೋಚರವಾಗಿದೆ.ನೇಪಾಳದ ಮುಕ್ತಿನಾಥದ ಗಂಡಕಿ ನದಿಯ ತೀರದಿಂದ ತಂದಿರುವ 12 ಸಾವಿರ ಸಾಲಿಗ್ರಾಮ ಶಿಲೆಕಲ್ಲುಗಳಿಂದಲೇ ಇಲ್ಲಿನ ಅಧಿದೇವತೆಯ ವಿಗ್ರಹ ನಿರ್ಮಿ ಸಲಾಗಿದೆ ಎಂಬುದು ದೇವಪ್ರಶ್ನೆಯ ವೇಳೆ ಗೋಚರಿಸಿದೆ.
ಅಂದಿನ ನೇಪಾಳ ರಾಜಮನೆತನದ ದೇವಸ್ಥಾನವಾಗಿದ್ದ ಪಶುಪತಿನಾಥ ದೇವಳಕ್ಕೂ ಅನಂತಪದ್ಮನಾಭ ದೇವಳ ಹಾಗೂ ತಿರುವಾಂಕೂರು ಸಂಸ್ಥಾನಕ್ಕೂ ಸಂಬಂಧವಿರುವುದು ತಿಳಿದು ಬಂದಿದೆ.
ನೇಪಾಳ-ತಿರುವನಂತಪುರ ದೇವಳದ ಬಾಂಧವ್ಯದ ಸ್ಮರಣಾರ್ಥ ಹಿಂದೆ ಅನೇಕ ಪರಂಪರಾಗತ ಸಾಂಪ್ರದಾಯಿಕ ವಿಧಿ ವಿಧಾನಗಳು ನಡೆಯುತ್ತಿದ್ದವು. ಆದರೆ, ಈಗ ಇದೆಲ್ಲವೂ ನಿಂತು ಹೋಗಿರುವುದು ದೇವರ ಕೋಪಕ್ಕೂ ಕಾರಣವಾಗಿದೆ ಎಂದು ಅಷ್ಟಮಂಗಲ ಪ್ರಶ್ನೆ ನೆರವೇರಿಸುತ್ತಿರುವ ಪ್ರಧಾನ ದೈವಜ್ಞ ರಾದ ಮಧೂರು ನಾರಾಯಣ ರಂಗಭಟ್ಟ ತಿಳಿಸಿದ್ದಾರೆ.
ಬಿ ಕೊಠಡಿ ತೆಗೆದರೆ ಆಪತ್ತು: ದೇವಳದ ಸಂಪತ್ತಿನ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಹೆಚ್ಚಿನ ಭದ್ರತೆ ಅಗತ್ಯವಿದೆ. ಆರನೇ ಬಿ ಕೊಠಡಿಯನ್ನು ತೆರೆದರೆ ಸಾರ್ವಜನಿಕರಿಗೆ ಆಪತ್ತು ಕಾದಿದೆ. ಗರ್ಭಗುಡಿಯ ತಳಭಾಗದಲ್ಲೇ ಈ ಕೊಠಡಿ ಇರುವುದರಿಂದ ಕೊಠಡಿಯನ್ನು ಹೊಕ್ಕರೆ, ಸನ್ನಿಧಿ ಅಶುದ್ಧವಾಗುತ್ತದೆ ಎಂದು ಮಧೂರು ನಾರಾಯಣ ರಂಗಭಟ್ಟ ಎಚ್ಚರಿಸಿದ್ದಾರೆ.












Click it and Unblock the Notifications