ಗೌಡರ ಗೂಡು ಸೇರಿಕೊಂಡ 4+1 ವಲಸೆ ಹಕ್ಕಿಗಳು

ನೂತನ ಸಂಪುಟ ದರ್ಜೆ ಸಚಿವರಾಗಿ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ, ಆನಂದ್ ಆಸ್ನೋಟಿಕರ್, ಸಿ.ಪಿ ಯೋಗೀಶ್ವರ್, ನರಸಿಂಹ ನಾಯಕ(ರಾಜೂ ಗೌಡ) ಹಾಗೂ ವರ್ತೂರು ಪ್ರಕಾಶ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಬೆಳಗ್ಗೆ ದಿಢೀರ್ ಎಂದು ದೆಹಲಿಗೆ ತೆರಳಿದ್ದ ಸಿಎಂ ಸದಾನಂದ ಗೌಡರು, ಹೈಕಮಾಂಡ್ ಆದೇಶದಂತೆ ಸಂಪುಟಕ್ಕೆ ಐವರನ್ನು ಮಾತ್ರ ಆರಿಸಿದ್ದಾರೆ. ನೂತನ ಸಚಿವರಲ್ಲಿ ನಾಲ್ವರು ವಲಸಿಗರಾಗಿದ್ದಾರೆ. ಅಪರೇಷನ್ ಕಮಲದ ಫಲವಾಗಿ ಬಿಜೆಪಿಯಲ್ಲಿ ಹುಟ್ಟಿದವರು ಬಾಲಚಂದ್ರ ಜಾರಕಿಹೊಳಿ, ಆನಂದ್ ಆಸ್ನೋಟಿಕರ್, ಸಿ.ಪಿ ಯೋಗೀಶ್ವರ್ ಹಾಗೂ ವರ್ತೂರು ಪ್ರಕಾಶ್. ರಾಜೂಗೌಡ ಮೂಲ ಬಿಜೆಪಿಯ ನಿಷ್ಠಾವಂತ ಶಾಸಕ.
ಬಾಲಚಂದ ಜಾರಕಿಹೊಳಿ-ಅರಬಾವಿ ಕ್ಷೇತ್ರ
ಆನಂದ ಆಸ್ನೋಟಿಕರ್-ಕಾರವಾರ ಕ್ಷೇತ್ರ
ಸಿ.ಪಿ ಯೋಗೀಶ್ವರ್-ಚನ್ನಪಟ್ಟಣ ಕ್ಷೇತ್ರ
ನರಸಿಂಹ ನಾಯಕ- ಶೋರಾಪುರ ಕ್ಷೇತ್ರ
ವರ್ತೂರು ಪ್ರಕಾಶ್-ಕೋಲಾರ(ಪಕ್ಷೇತರ ಅಭ್ಯರ್ಥಿ)
ಇಂದಿನ ಸಚಿವ ಸಂಪುಟ ವಿಸ್ತರಣೆಯಿಂದ ಸದಾನಂದ ಗೌಡರನ್ನು ಸೇರಿಸಿಕೊಂಡರೆ ಸಂಪುಟ ಗಾತ್ರ 27ಕ್ಕೇರುತ್ತದೆ. ಇನ್ನೂ 7 ಸ್ಥಾನಗಳು ಬಾಕಿ ಇದೆ. ಜೀವರಾಜ್, ಸಿಟಿ ರವಿ, ಬಿ. ಸುರೇಶ್ ಗೌಡ, ಬೇಳೂರು ಗೋಪಾಲಕೃಷ್ಣ, ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್, ಎಸ್ ಕೆ ಬೆಳ್ಳುಬ್ಬಿ ಇನ್ನೂ ಸಚಿವ ಸ್ಥಾನದ ಆಸೆಯನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.
ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಯಾವುದೇ ಚಕಾರ ಎತ್ತಿಲ್ಲ. ಹೈಕಮಾಂಡ್ ಕೂಡಾ ಸ್ಪಷ್ಟ ಸೂಚನೆ ನೀಡಿಲ್ಲ,












Click it and Unblock the Notifications