Get Updates
Get notified of breaking news, exclusive insights, and must-see stories!

ಯಡಿಯೂರಪ್ಪ ಮೇಲೆ ಬಾಂಬ್ ಎಸೆದ ಭಾರದ್ವಾಜ್

Karnataka Governor Bharadhwaj okays BS Yeddyurappa prosecution
ಬೆಂಗಳೂರು, ಆಗಸ್ಟ್ 03: ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆದಿರುವ ಘಳಿಗೆಯಲ್ಲೇ ರಾಜಭವನದಿಂದ ಹಂಸರಾಜ್ ಭಾರದ್ವಾಜ್ ಅವರು ಹಠಾತ್ತಾಗಿ ಬಾಂಬ್ ಹಾಕಿದ್ದಾರೆ.

ಹಿಂದಿನ ಲೋಕಾಯುಕ್ತರು ಸಲ್ಲಿಸಿರುವ ಅಕ್ರಮ ಗಣಿಗಾರಿಕೆ ವರದಿಯನ್ನು ಆಧರಿಸಿ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವುದಕ್ಕೆ ಅನುಮತಿ ನೀಡಿದ್ದಾರೆ. ಶಾಸಕಾಂಗ ಸಭೆ ನಡೆಯುತ್ತಿರುವ ಕ್ಯಾಪಿಟಲ್ ಹೋಟೆಲ್ ರಾಜಭವನದಿಂದ ಕಲ್ಲೆಸೆತದ ದೂರದಲ್ಲಿದೆ. ರಾಜ್ಯಪಾಲರು ಎಸೆದಿರುವ ಬಾಂಬು ಶಾಸಕಾಂಗ ಸಭೆಯಲ್ಲಿ ಭಾರಿ ಸ್ಫೋಟವುಂಟುಮಾಡುವುದು ಖಚಿತ. ಇದನ್ನು ಮನಗಂಡೇ ರಾಜ್ಯಪಾಲರು ಸರಿಯಾದ ಸಮಯಕ್ಕೆ ಬಾಂಬ್ ಎಸೆದಿದ್ದಾರೆ.

ಯಡಿಯೂರಪ್ಪ ಪರ ದೃಢವಾಗಿ ನಿಂತಿರುವ ಶಾಸಕರು, ಸಚಿವರು ಸ್ಫೋಟದಿಂದ ಛಿದ್ರಗೊಳ್ಳುವ ಸಾಧ್ಯತೆ ಇದೆ. ಹ್ಯಾಗೂ ಇಯಪ್ಪನ (ಯಡಿಯೂರಪ್ಪ) ವಿರುದ್ಧ ನಾಳೆ ಕೋರ್ಟಿನಲ್ಲಿ ಕೇಸು ನಿಂತು ಮನೆಗೆ ಹೋಗುವುದು ಗ್ಯಾರಂಟಿ. ಆದ್ದರಿಂದ ಯಡಿಯೂರಪ್ಪ ಅವನ್ನು ಬೆಂಬಲಿಸುವುದರಲ್ಲಿ 'ಅರ್ಥವಿಲ್ಲ' ಎಂದು ಅರ್ಥೈಸಿಕೊಂಡು ಯಡ್ಡಿ ಪಾಳಯ ತೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವ್ಯಾಖ್ಯಾನಿಸಲಾಗಿದೆ. ಫಲಿತಾಂಶಕ್ಕಾಗಿ ದಟ್ಸ್ ಕನ್ನಡ ನೋಡುತ್ತಿರಿ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+