ಭಲೇ ಪಿಡಬ್ಲ್ಯೂಡಿ ಸ್ವಾಮಿ ಅಂಡ್ ಹಿಸ್ ವೈಫ್!

ಬೆಂಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಬಾಗಲಕೋಟೆ, ಬೀದರ್, ಕೋಲಾರ, ತುಮಕೂರು ಮತ್ತು ರಾಯಚೂರು ಜಿಲ್ಲೆಯಲ್ಲಿ ಶುಕ್ರವಾರ ದಾಳಿ ನಡೆಸಲಾಗಿದೆ.
ಹಿರಿಯ ಮತ್ತು ಮಧ್ಯಮ ಶ್ರೇಣಿಯ ಭ್ರಷ್ಟಾತಿಭ್ರಷ್ಟ ಅಧಿಕಾರಿಗಳು ಮತ್ತು ಶ್ರೀಮಂತ ಗುಮಾಸ್ತರು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಅಧಿಕಾರಿಗಳು ಮತ್ತು ಅವರಿಂದ ವಶಪಡಿಸಿಕೊಳ್ಳಲಾದ ಆಸ್ತಿಯ ವಿವರಗಳನ್ನು ಹೆಗಡೆ ಶುಕ್ರವಾರ ನೀಡಿದರು.
ಹಣ ಗುಳುಂ ಮಾಡಿದವರು
* ಸಿ. ಮೃತ್ಯುಂಜಯ ಸ್ವಾಮಿ, ಬೆಂಗಳೂರು - ಲೋಕೋಪಯೋಗಿ ಸೆಕ್ರೆಟರಿ.
* ರಾಘವ ಪಟಾಲಿ, ಬೆಳ್ತಂಗಡಿ, ದಕ್ಷಿಣ ಕನ್ನಡ - ಅರಣ್ಯ ಸಂರಕ್ಷಣಾಧಿಕಾರಿ.
* ವಿರೂಪಾಕ್ಷಪ್ಪ, ದಾವಣಗೆರೆ - ಲೋಕೋಪಯೋಗಿ ಎಕ್ಸಿಕ್ಯೂಟಿವ್ ಇಂಜಿನಿಯರ್.
* ಸುರೇಶ್ ನಿಂಗಪ್ಪ ಗೌಡರ್, ಹುನಗುಂದ, ಬಾಗಲಕೋಟೆ - ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್.
* ಬಸವರಾಜ್ ವರವಟ್ಟಿ, ಬೀದರ - ಮಕ್ಕಳ ಯೋಜನಾಧಿಕಾರಿ.
* ಗೋಪಾಲ್, ಕೋಲಾರ - ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್.
* ಎಲ್ ಮೈಲಾರಯ್ಯ, ತುಮಕೂರು - ಎಪಿಎಮ್ಸಿ ಗುಮಾಸ್ತ.
* ಅಬ್ದುಲ್ ಗನಿ, ರಾಯಚೂರು - ಸ್ಥಳೀಯ ಸಂಸ್ಥೆ ಸೆಕ್ರೆಟರಿ.
ಇವರಲ್ಲಿ ತಿಮಿಂಗಲೆಂದರೆ ಮೃತ್ಯುಂಜಯ ಸ್ವಾಮಿ. 1992ರಿಂದ ಅವರ ಮತ್ತು ಅವರ ಧರ್ಮಪತ್ನಿಯ ಸಂಬಳವನ್ನು ಒಟ್ಟುಗೂಡಿಸಿದರೆ 95 ಲಕ್ಷ ದಾಟುವುದಿಲ್ಲ. ಆದರೆ, ಅವರು ಮಾಡಿಟ್ಟಿರುವ ಆಸ್ತಿ ಮನೆ, ಫ್ಲಾಟ್, ವಾಣಿಜ್ಯ ಸಂಕಿರ್ಣ, ಬ್ಯಾಂಕ್ ಬ್ಯಾಲನ್ಸ್, ಬೆಳ್ಳಿ ಬಂಗಾರಗಳನ್ನು ಗುಡ್ಡೆ ಹಾಕಿದರೆ ಅದು 5.95 ಕೋಟಿ ರು. ದಾಟುತ್ತಿದೆ. ಭಲೇ ಸ್ವಾಮಿ ಅಂಡ್ ಹೀಸ್ ವೈಫ್!
ಈ ಅಕ್ರಮ ಆಸ್ತಿ ಗಳಿಸಿಕೊಂಡ ಶ್ರೀಮಂತರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಸೂಕ್ರ ಕ್ರಮ ಜುರುಗಿಸಬೇಕು ಎಂದು ಸರಕಾರಕ್ಕೆ ಶಿಫಾರಸು ಮಾಡಿರುವುದಾಗಿ ಸಂತೋಷ ಹೆಗಡೆ ಹೇಳಿದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications