ಪೂಂಜಾಲಕಟ್ಟೆ ವಿದ್ಯಾರ್ಥಿನಿ ಕೊಂದ ಬಜರಂಗಿ ಬಲೆಗೆ

ಜು 11ರಂದು ಪ್ರಜ್ಞಾಳ ತಾಯಿ ಗೀತಾ ನೀಡಿದ ದೂರಿನಿಂದ ಮುಚ್ಚಿ ಹೋಗುವ ಹಂತದಲ್ಲಿದ್ದ ವಿದ್ಯಾರ್ಥಿನಿ ಪ್ರಜ್ಞಾಲತಾ ಆತ್ಮಹತ್ಯೆ ಪ್ರಕರಣ ಮರುಜೀವ ಪಡೆದಿತ್ತು. ಪ್ರಜ್ಞಾಳ ಪ್ರಿಯಕರ ಪುನೀತ ಪ್ರಜ್ಞಾಲತಾಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಒಡ್ಡಿದ್ದಾನೆ. ಇದರಿಂದ ನೊಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ದೂರಿನಲ್ಲಿ ವಿವರಿಸಲಾಗಿದೆ.
ಕಳೆದ ಜನವರಿಯಲ್ಲಿ ಪ್ರಜ್ಞಾಲತಾಳನ್ನು ಬಲವಂತವಾಗಿ ಕರೆದೊಯ್ದು ಮಂಗಳೂರಿನ ದೇವಸ್ಥಾನವೊಂದರಲ್ಲಿ ಪುನೀತ್ ತಾಳಿ ಕಟ್ಟಿದ್ದನು.ಅದೇ ರೀತಿಯ ಕಾಲೇಜಿನ ಅರ್ಧ ಡಜನ್ ಹುಡುಗಿಯರಿಗೆ ತಾಳಿ ಕಟ್ಟಿರುವ ಪುನೀತನ ಕಪಟ ಪ್ರೇಮ ನಾಟಕ ಕೊನೆಗೂ ಅಂತ್ಯವಾಗುತ್ತಿದೆ. ಇವನ ಕಾಟಕ್ಕೆ ಹೆದರಿದ ವಿದ್ಯಾರ್ಥಿನಿಯರು ನೆಮ್ಮದಿಯ ನೆಟ್ಟುಸಿರು ಬಿಡುವಂತಾಗಿದೆ. ಬಾರೆಬೈಲ್ ವಿದ್ಯಾರ್ಥಿನಿ ಸರಿತಾ ಪ್ರಕರಣದ ಬಗ್ಗೆ ಹೆಚ್ಚು ಬೊಬ್ಬೆ ಹಾಕಿದ ವಿದ್ಯಾರ್ಥಿ ಸಂಘಟನೆಗಳು ಈ ಪ್ರಕರಣ ಯಾವುದೇ ಸದ್ದು ಮಾಡದಿರುವುದು ಪ್ರಶ್ನಾರ್ಹವಾಗಿದೆ.












Click it and Unblock the Notifications