ಎಸಿ ಕಾರು ಬಿಟ್ಟು ಆಟೋ ಏರಿದ ಶಾಸಕನನ್ನು ಕಂಡಿರಾ?

ಆ ಕೆಲಸವನ್ನು ಯಾದಗಿರಿ ಶಾಸಕ ಡಾ. ಎಬಿ ಮಾಲಕರೆಡ್ಡಿ ಮಾಡಿದ್ದಾರೆ, ಅದೂ ಪತ್ರಕರ್ತರು ಬಲವಂತ ಮಾಡಿದ್ದಕ್ಕೆ. ಹೀಗೆ ಆಟೋ ಹತ್ತಿದ ಮಾಲಕರೆಡ್ಡಿ ಊರೆಲ್ಲ ಸುತ್ತಾಡಿದರು, ಯಮಸ್ವರೂಪಿ ರಸ್ತೆಗಳ ಸಾಕ್ಷಾತ್ ದರ್ಶನ ಪಡೆದರು. ಹತ್ತಿಕುಣಿ ಕ್ರಾಸ್ನಲ್ಲಿ ರಸ್ತೆಯ ತಗ್ಗೊಂದರಲ್ಲಿ ಆಟೋ ಇಳಿದಾಗ ಶಿವಶಿವ ಎಂದು ಶಂಕರನ ಸ್ಮರಣೆ ಮಾಡಿದರು.
ತಮಾಷೆಯೆಂದರೆ, ಜನರೆಡೆಗೆ ಕೈಬೀಸಿ ನಮಸ್ಕರಿಸುತ್ತಿದ್ದ ಶಾಸಕರನ್ನು ಪ್ರಪ್ರಥಮ ಬಾರಿಗೆ ಆಟೋದಲ್ಲಿ ಕಂಡ ಸಾರ್ವಜನಿಕರೇ ಕಕ್ಕಾಬಿಕ್ಕಿಯಾದರು. ದಿನವೂ ಈ ರಸ್ತೆಯಲ್ಲಿ ಸಂಚರಿಸಿದರೆ ಚೆನ್ನಾಗಿರುತ್ತದೆ ಎಂದು ಹಾರೈಸಿದರು. ಆಟೋ ಚಾಲಕರು ಈ ಹಾಳು ಬಿದ್ದ ರಸ್ತೆಗಳನ್ನೇ ನಂಬಿ ಅಟೋ ಓಡಿಸಬೇಕಿದೆ.
ನಂತರ ಮಾತನಾಡಿದ ಶಾಸಕ ಮಾಲಕರೆಡ್ಡಿ, ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದು ರಸ್ತೆಯ ಸ್ಥಿತಿಗಳ ಬಗ್ಗೆ ಅವರ ಜೊತೆ ಚರ್ಚಿಸುವುದಾಗಿ ಹೇಳಿದರು. ಅಲ್ಲದೇ ರಾಜ್ಯ ಸರ್ಕಾರ ಸರಿಯಾಗಿ ಶಾಸಕರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.












Click it and Unblock the Notifications