ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್ಎಎಸ್ ಸಿಲಿಂಡರ್: ಸರ್ಕಾರ ಮೊಬೈಲ್ ಕಂಪೆನಿಯ ದಲ್ಲಾಳಿಯೇ
ಈಗ ಒಂದು ಸಿಲಿಂಡರು ಮುಗಿದು ಮತ್ತೊಂದನ್ನು ಪಡೆಯಲು ಮೊದಲಿನಂತೆ ಫೋನ್ ಮುಖಾಂತರ ಮಾಡಲು ಆಗುತ್ತಿಲ್ಲ. ಅದಕ್ಕೆ ಆನ್ಲೈನ್ ಬುಕಿಂಗ್, ಅದೂ ತಮ್ಮದೇ ಆದ ಮೊಬೈಲ್ ಮುಖಾಂತರವೇ ಮಾಡಬೇಕು. ಅದಕ್ಕೆ ಎಸ್ಎಎಸ್ ಮಾಡಬೇಕು.
ಸಾಮಾನ್ಯ ಗೃಹಿಣಿ ಅದರಲ್ಲೂ ಬಡತನದಲ್ಲಿ ಬದುಕುತ್ತಿರುವ ಇಂತಹವರ ಹತ್ತಿರ ಮೊಬೈಲ್, ಕಂಪ್ಯೂಟರ್, ಆನ್ಲೈನ್ ಇರಲು ಸಾಧ್ಯವೇ? ಇದ್ದರೂ ಅದನ್ನು ಉಪಯೋಗಿಸಲು ಅವರಿಗೆ ಗೊತ್ತಿರುತ್ತದೆಯೇ? ಇದನ್ನೆಲ್ಲಾ ನೋಡಿದಾಗ ಸರ್ಕಾರ ಪರೋಕ್ಷವಾಗಿ ಮೊಬೈಲ್ ಕಂಪೆನಿಗಳ ಏಜೆಂಟ್ ಆಗಿ ಎಲ್ಲರೂ ಮೊಬೈಲ್ ಕೊಳ್ಳುವಂತೆ, ಕಂಪ್ಯೂಟರ್, ಲ್ಯಾಪ್ಟಾಪ್ಗಳನ್ನು ಕೊಳ್ಳುವಂತೆ ಪ್ರೇರೇಪಿಸುತ್ತಿದೆಯೇ!
ಯಾವುದೇ ಟೆಕ್ನಾಲಜಿಯನ್ನು ಅಳವಡಿಸುವುದಕ್ಕೆ ಮುಂಚೆ ಅದರ ಸಾಧಕ-ಬಾಧಕವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇಂತಹ ಅಳವಡಿಕೆಗಳಿಂದ ಜನಸಾಮಾನ್ಯರ ಮೇಲಾಗುವ ಪರಿಣಾಮವನ್ನು, ಆಗುವ ಹಿಂಸೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನಾದರೂ ಮಂತ್ರಿಗಳು ನೀರಿಳಿಯದ ಗಂಟಲೊಳಗೆ ಕಡುಬು ತುರುಕಲು ಪ್ರಯತ್ನಿಸದಿರಲಿ.
Comments
English summary
Karnataka government has recently adopted Booking of LPG cylinders through mobile SMS system. But can all customers especially lower middle class offer mobile Phones and computers. Isn't government acting as agent for these companies asks Kodagina Seethamma from Bangalore.
Story first published: Monday, July 11, 2011, 9:53 [IST]