ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಕ್ಷಕ್ಕೆ ತಲೆಬಾಗಿ ಉಪವಾಸ ಕೈಬಿಟ್ಟೆ: ಕುಮಾರಸ್ವಾಮಿ
ಉಪವಾಸ ಸತ್ಯಾಗ್ರಹದಿಂದ ಹಿಂದಕ್ಕೆ ಸರಿದೆ ಎಂಬ ಕಳಂಕ ಬೇಡ. ಆದರೆ ನಮ್ಮ ತಾಯಿಯರವರು ಇಂದು ಬೆಳಗ್ಗೆ ಫೋನ್ ಮಾಡಿ ಉಪವಾಸ ಮಾಡಬೇಡ ಕುಮಾರ ಎಂದಿದ್ದರು. ಜತೆಗೆ, ನಾಡಿನ ಅನೇಕ ಬುದ್ಧಿಜೀವಿಗಳು ಭವಿಷ್ಯದಲ್ಲಿ ಪಕ್ಷಕ್ಕೆ ಇನ್ನೂ ಸಾಕಷ್ಟು ದುಡಿಯಬೇಕಿರುವುದರಿಂದ ಉಪವಾಸ ನಿಲ್ಲಿಸಿ ಎಂದು ಕೋರಿದರು. ಹಿರಿಯರಿಗೆ ತಲೆಬಾಗಿ ಅನಿವಾರ್ಯವಾಗಿ ಉಪವಾಸ ಕೈಬಿಟ್ಟೆ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.
ಇದೇ ವೇಳೆ, ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
Comments
English summary
Former Karnataka CM HD Kumaraswamy who had began hunger strike on Saturday has said that he stopped it due to party decision on sunday (July 10).
Story first published: Sunday, July 10, 2011, 13:15 [IST]