Get Updates
Get notified of breaking news, exclusive insights, and must-see stories!

ಜೂನ್ 27ರಂದು ಧರ್ಮಸ್ಥಳದಲ್ಲಿ 800 ಪೊಲೀಸರು!

800 police to be deployed in Dharmasthala on June 27
ಧರ್ಮಸ್ಥಳ, ಜೂ. 25 : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೂನ್ 27ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಆಣೆ-ಪ್ರಮಾಣ ಮಾಡುವ ಬಗ್ಗೆ ಖಚಿತವಾಗಿ ಮಾಹಿತಿ ಇಲ್ಲವಾದರೂ ಸುಮಾರು 800 ಮಂದಿ ಪೊಲೀಸರು ಧರ್ಮಸ್ಥಳದಲ್ಲಿ ಆದಿನ ಬೀಡು ಬಿಡುವುದು ನಿಶ್ಚಿತವಂತೆ.

ಯಾಕೆಂದರೆ ಹೇಳಿ ಕೇಳಿ ರಾಜಕಾರಣಿಗಳು ಯಾವ ಕ್ಷಣದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಯಾರಿಗೆ ಗೊತ್ತು ಎನ್ನುವುದು ಒಂದು ಸಂಗತಿಯಾದರೆ, ಯಡಿಯೂರಪ್ಪ ಅವರನ್ನು ಹಿಂಬಾಲಿಸಿ ಸಚಿವ ಸಂಪುಟದ ಡಜನ್ ಮಂತ್ರಿಗಳು ಬರುವುದರಿಂದ ಯಾವ ಸಚಿವರ ಮೂಡ್ ಹೇಗಿರುತ್ತದೋ? ಎನ್ನುವ ಭೀತಿಯಿಂದ.

ಆಕಸ್ಮಿಕವಾಗಿ ಸೇರಬಹುದಾದ ಭಾರೀ ಸಂಖ್ಯೆಯ ಕುತೂಹಲಿಗರಿಂದಾಗಿ ಒಂದು ಕೈ ನೋಡಿಯೇ ಬಿಡುವ ಎನ್ನುವ ಕಾರಣಕ್ಕೆ ಇಬ್ಬರೂ ಆಣೆ-ಪ್ರಮಾಣಕ್ಕೆ ಮುಂದಾಗಿಬಿಟ್ಟರೆ, ಬೆಂಬಲಿಗರು ದಾಂಧಲೆಗೆ ಶುರುವಿಟ್ಟುಕೊಂಡರೇ? ಇಂಥ ಎಲ್ಲ ಸಾಧ್ಯತೆಗಳನ್ನು ಅಧಿಕಾರಿಮಟ್ಟದಲ್ಲಿ ಅಳೆದು-ತೂಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಲ ನಿಯೋಜಿಸಲು ನಿರ್ಧರಿಸಿದ್ದಾರಂತೆ.

ಈಗಾಗಲೇ ವರದಿಯಾಗಿರುವಂತೆ ಜೂನ್ 27ರಂದು ಯಡಿಯೂರಪ್ಪ ಅವರು ಧರ್ಮಸ್ಥಳಕ್ಕೆ ಬಂದು ಪೂಜೆ ಮಾಡಿಸುತ್ತಾರಂತೆ. ಹಾಗೆಯೇ ಕುಮಾರಸ್ವಾಮಿಯವರೂ ಕೂಡಾ ಅದೇ ದಿನ ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ತೆರಳುತ್ತಾರಂತೆ. ತಾನು ಹೇಳಬೇಕೆಂದಿದ್ದುದನ್ನು ಪತ್ರದಲ್ಲಿ ಬರೆದು ದೇವರ ಮುಂದೆ ಇಟ್ಟು ಪೂಜೆ ಮಾಡುವುದಾಗಿಯೂ ಕುಮಾರಸ್ವಾಮಿ ಹೇಳಿದ್ದಾರೆ. ಆದ್ದರಿಂದ ಜೂ. 27ರಂದು ಧರ್ಮಸ್ಥಳಕ್ಕೆ ಅವರಿಬ್ಬರೂ ಕಾಲಿಟ್ಟಮೇಲೆ ಅದೆಂಥ ನಿರ್ಧಾರ ತೆಗೆದುಕೊಳ್ಳುತಾರೋ ಆ ಮಂಜುನಾಥನಿಗೇ ಗೊತ್ತು. ಆದ್ದರಿಂದಲೇ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+