ರಾಮದೇವ್ ಯೋಗಕ್ಕೆ ಹೋಗಬೇಡಿ: ಕಾಂಗ್ರೆಸ್ ಫತ್ವಾ

ramdev
ನವದೆಹಲಿ, ಜೂನ್ 21: ರಾಮದೇವ್ ಉಪವಾಸ ಸತ್ಯಾಗ್ರಹಕ್ಕೆ ಭಂಗ ತಂದು ಫಜೀತಿಗೀಡಾಗಿರುವ ಕಾಂಗ್ರೆಸ್ ಪಕ್ಷವು ರಾಮದೇವ್ ಯೋಗ ಶಿಬಿರಗಳಲ್ಲಿ ಪಾಲ್ಗೊಳ್ಳಬಾರದು ಎಂದು ಪಕ್ಷದ ಸದಸ್ಯರಿಗೆ ಮಂಗಳವಾರ ಫರ್ಮಾನು ಹೊರಡಿಸಿದೆ.

ಈ ಮಧ್ಯೆ, ಜೂನ್ 30ಕ್ಕೆ ಜನ ಲೋಕಪಾಲ ಕರಡು ಮಸೂದೆ ಆಖೈರುಗೊಳಿಸಲಾಗುವುದು ಎಂದು ಯುಪಿಎ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಆ ವೇಳೆಗೆ ಸರಕಾರಿ ಸಮಿತಿ ಮತ್ತು ಪೌರ ಸಮಿತಿ ಸದಸ್ಯರ ಮಧ್ಯೆ ಒಪ್ಪತ ಏರ್ಪಡುವುದು ಸಾಧ್ಯವಾಗಿಲ್ಲ. ಆದ್ದರಿಂದ ಜನ ಲೋಕಪಾಲ ಕರಡನ್ನು ನಿಗದಿಯಂತೆ ಸಂಸತ್ತಿನಲ್ಲಿ ಮಂಡಿಸಲು ಅಸಾಧ್ಯವಾಗಲಿದೆ.

ಜತೆಗೆ ಕಾಳಧನ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿದ್ದ ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹಕ್ಕೆ ಭಂಗ ತಂದ ವಿಷಯದಲ್ಲಿ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಖಚಿತ. ಇದನ್ನು ಸಮರ್ಥವಾಗಿ ಎದುರಿಸಲು ಯುಪಿಎಗೆ ಪ್ರತಿತಂತ್ರ ರೂಪಿಸಬೇಕಾಗಿದೆ. ಈ ಮುಜುಗರದಿಂದ ಪಾರಾಗಲು ಅಧಿವೇಶನ ಆರಂಭವನ್ನು 15 ದಿನಗಳ ಕಾಲ ಮುಂದೂಡಿದೆ. ಅಂದರೆ ಸಂಸತ್ತು ಅಧಿವೇಶನವು ಈಗ ಆಗಸ್ಟ್ 1ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+