ರಾಮದೇವ್ ಯೋಗಕ್ಕೆ ಹೋಗಬೇಡಿ: ಕಾಂಗ್ರೆಸ್ ಫತ್ವಾ

ಈ ಮಧ್ಯೆ, ಜೂನ್ 30ಕ್ಕೆ ಜನ ಲೋಕಪಾಲ ಕರಡು ಮಸೂದೆ ಆಖೈರುಗೊಳಿಸಲಾಗುವುದು ಎಂದು ಯುಪಿಎ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಆ ವೇಳೆಗೆ ಸರಕಾರಿ ಸಮಿತಿ ಮತ್ತು ಪೌರ ಸಮಿತಿ ಸದಸ್ಯರ ಮಧ್ಯೆ ಒಪ್ಪತ ಏರ್ಪಡುವುದು ಸಾಧ್ಯವಾಗಿಲ್ಲ. ಆದ್ದರಿಂದ ಜನ ಲೋಕಪಾಲ ಕರಡನ್ನು ನಿಗದಿಯಂತೆ ಸಂಸತ್ತಿನಲ್ಲಿ ಮಂಡಿಸಲು ಅಸಾಧ್ಯವಾಗಲಿದೆ.
ಜತೆಗೆ ಕಾಳಧನ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿದ್ದ ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹಕ್ಕೆ ಭಂಗ ತಂದ ವಿಷಯದಲ್ಲಿ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಖಚಿತ. ಇದನ್ನು ಸಮರ್ಥವಾಗಿ ಎದುರಿಸಲು ಯುಪಿಎಗೆ ಪ್ರತಿತಂತ್ರ ರೂಪಿಸಬೇಕಾಗಿದೆ. ಈ ಮುಜುಗರದಿಂದ ಪಾರಾಗಲು ಅಧಿವೇಶನ ಆರಂಭವನ್ನು 15 ದಿನಗಳ ಕಾಲ ಮುಂದೂಡಿದೆ. ಅಂದರೆ ಸಂಸತ್ತು ಅಧಿವೇಶನವು ಈಗ ಆಗಸ್ಟ್ 1ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿದೆ.












Click it and Unblock the Notifications