ಬೆಂಗಳೂರಿನಲ್ಲಿ ರೋಹನ್ ಮೂರ್ತಿ, ಲಕ್ಷ್ಮೀ ಭವ್ಯ ಆರತಕ್ಷತೆ
ರಾಜ್ಯಪಾಲ ಭಾರದ್ವಾಜ್, ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹಾಗೂ ಪ್ರೇಮಾ ಕೃಷ್ಣ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗಿರೀಶ್ ಕಾರ್ನಾಡ್, ರಾಮಚಂದ್ರ ಗುಹಾ, ನಂದನ್ ನಿಲೆಕೇಣಿ, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ದಂಪತಿ, ದ್ರಾವಿಡ್ ದಂಪತಿ, ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್ಜಿ, ಇನ್ಫೋಸಿಸ್ ಸಿಇಓ ಸಿಬುಲಾಲ್ ದಂಪತಿ, ನಿಯೋಜಿತ ಅಧ್ಯಕ್ಷ ಕೆ.ವಿ. ಕಾಮತ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು, ರಾಜಕೀಯ ಧುರೀಣರು, ದೇಶ ವಿದೇಶಗಳ ಉದ್ಯಮಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಗಣ್ಯಾತಿಗಣ್ಯರು ನೂತನ ದಂಪತಿಗೆ ಶುಭ ಹಾರೈಸಿದರು.
ಕಳೆದ ವಾರ ಚೆನ್ನೈಯಲ್ಲಿ ರೋಹನ್ ಮೂರ್ತಿ ಹಾಗೂ ಟಿವಿಎಸ್ ಕಂಪನಿ ಅಧ್ಯಕ್ಷ ವೇಣು ಶ್ರೀನಿವಾಸನ್ ಪುತ್ರಿ ಲಕ್ಷ್ಮೀ ಅವರ ವಿವಾಹ ಅದ್ದೂರಿಯಾಗಿ ನೆರವೇರಿತು. ವರ ರೋಹನ್ ಮೈಕ್ರೋಸಾಫ್ಟ್ ಫೆಲೋ ಆಗಿದ್ದು ಸದ್ಯ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ವಧು ಲಕ್ಷ್ಮೀ ಅವರು ಸುಂದರಂ ಕ್ಲೇಟನ್ ಸಂಸ್ಥೆಯ ಉಪಾಧ್ಯಕ್ಷರಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದಾರೆ.