ನುಡಿದಂತೆ ನಡೆದ ಸಿಇಸಿ, ಆಸ್ತಿ ವಿವರ ಬಹಿರಂಗ

ಖುರೇಶಿ: ಗುರ್ ಗಾಂವ್, ಗ್ರೇಟರ್ ನೊಯ್ಡ ಹಾಗೂ ಆಗ್ರಾಗಳಲ್ಲಿ ತಲಾ ಒಂದು ನಿವೇಶನ ಹೊಂದಿದ್ದಾರೆ. ಹುಡಾ(HUDA) ಗುರ್ಗಾಂವ್ನ ಸೆಕ್ಟರ್ 17ರಲ್ಲಿ ರೂ.63,089 ಬೆಲೆ ಬಾಳುವ 500 ಚ.ಗಜ ನಿವೇಶನವನ್ನು ಖುರೇಶಿಯವರಿಗೆ 1980ರಲ್ಲಿ ಮಂಜೂರು ಮಾಡಿದ್ದು, ಈಗ ಅದರ ಬೆಲೆ ರೂ. 1.75 ಕೋಟಿಗಳಿರಬಹುದು ಎಂದು ಅಂದಾಜಿಸಲಾಗಿದೆ.
ಅವರು 2006ರಲ್ಲಿ ನಿವೃತ್ತಿ ಸೌಲಭ್ಯ, ಪ್ರಾವಿಡೆಂಟ್ ಫಂಡ್ ಹಾಗೂ ಬ್ಯಾಂಕ್ ಸಾಲದ ಮೂಲಕ ರೂ. 36 ಲಕ್ಷಗಳಿಗೆ ಗ್ರೇಟರ್ ನೊಯ್ಡಾದಲ್ಲಿ 350 ಚ.ಗಜ ನಿವೇಶನವನ್ನು ಖರೀದಿಸಿದ್ದಾರೆ. ಅಲ್ಲದೆ ತನ್ನ ಉಳಿತಾಯದಿಂದ ಆಗ್ರಾದಲ್ಲಿ ರೂ. 8 ಲಕ್ಷ ಪಾವತಿಸಿ 525 ಚ.ಗಜ ನಿವೇಶನವೊಂದನ್ನು ಕಾಯ್ದಿರಿಸಿದ್ದಾರೆ.
ಸಂಪತ್ : ಘೋಷಣೆಯಲ್ಲಿ ಹೇಳಿರುವಂತೆ ಸಂಪತ್ 1986ರಲ್ಲಿ ಹೈದರಾಬಾದ್ನ ಸಿರಿವಂತ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ರೂ. 47,009ಕ್ಕೆ 436.6 ಚ.ಮೀ. ಗೃಹ ನಿವೇಶನ ಖರೀದಿಸಿದ್ದಾರೆ. ಅದರ ಈಗಿನ ವೌಲ್ಯ ಅಂದಾಜು ರೂ. 2 ಕೋಟಿಗಳಾಗಿದ್ದು, ಅದರ ಬಾಡಿಗೆಯಾಗಿ ಪ್ರತಿವರ್ಷ ರೂ. 7.5 ಲಕ್ಷ ಅವರಿಗೆ ದೊರೆಯುತ್ತಿದೆ.
ಅಲ್ಲದೆ ಸಂಪತ್ 1991ರಲ್ಲಿ ರೂ. 68,500 ನೀಡಿ ಆಂಧ್ರಪ್ರದೇಶದ ಗುತ್ತಲಸ ಬೇಗಂಪೇಟ್ನಲ್ಲಿ ಮನೆ ಸಹಿತ 418.05 ಚ.ಮೀ. ಗೃಹ ನಿವೇಶನ ಖರೀದಿಸಿದ್ದು, ಅದರ ಚಾಲ್ತಿ ಬೆಲೆಯನ್ನು ರೂ. 95 ಲಕ್ಷಗಳೆಂದು ಅಂದಾಜಿಸಲಾಗಿದೆ. ಇದರಿಂದ ಅವರಿಗೆ ವಾರ್ಷಿಕ ರೂ. 3.60 ಲಕ್ಷ ಆದಾಯ ದೊರೆಯುತ್ತಿದೆ.ಇದಕ್ಕೆ ಹೊರತಾಗಿ ಸಂಪತ್ ಹೈದರಾಬಾದ್ನ ಯೆಲ್ಲಾರೆಡ್ಡಿಯಲ್ಲಿ ರೂ. 18 ಲಕ್ಷಗಳಿಗೆ 1957 ಚ.ಅಡಿಯ ಅಪಾರ್ಟ್ಮೆಂಟ್ ಖರೀದಿಸಿದ್ದು, ಅದರ ಈಗಿನ ಬೆಲೆ ರೂ. 40 ಲಕ್ಷಗಳೆಂದು ಹೇಳಿಕೆ ವಿವರಿಸಿದೆ.
ಬ್ರಹ್ಮ: ಕೋಕ್ರಜಾರ್ನಲ್ಲಿ ರೂ. 8 ಲಕ್ಷ ಬೆಲೆಯ 40 ಬಿಘಾ ಕೃಷಿ ಭೂಮಿ ಹಾಗೂ ಅಸ್ಸಾಂನ ಗೋಪಾಯಿಗಾಂವ್ನಲ್ಲಿ ರೂ. 5ಲಕ್ಷ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. 1989ರಲ್ಲಿ ಹೈದರಾಬಾದ್ನಲ್ಲಿ ಜುಬಿಲಿಹಿಲ್ನಲ್ಲಿ ಮನೆ ನಿರ್ಮಾಣಕ್ಕಾಗಿ ರೂ. 8 ಲಕ್ಷಗಳಿಗೆ ಸ್ಥಳವನ್ನು ಸಹಕಾರಿ ಸಂಘವೊಂದರಿಂದ ಖರೀದಿಸಿದ್ದಾರೆ. ಅದರ ಈಗಿನ ವೌಲ್ಯ ರೂ. 3.80 ಕೋಟಿ.ಅದನ್ನು ಪ್ರಕೃತ ಬಾಡಿಗೆಗೆ ನೀಡಲಾಗಿದ್ದು, ತಿಂಗಳಿಗೆ ರೂ. 1ಲಕ್ಷ ಆದಾಯ ದೊರೆಯುತ್ತಿದೆ. ಈ ಹೇಳಿಕೆಗಳಲ್ಲಿ ಮೂವರು ಆಯುಕ್ತರ ಕುಟುಂಬ ಸದಸ್ಯರು ಹೊಂದಿರುವ ಆಸ್ತಿಯ ವಿವರಗಳನ್ನು ಇನ್ನೂ ನೀಡಿಲ್ಲ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ದಾಖಲಿಸುವ ಮುನ್ನ ಸಲ್ಲಿಸಬೇಕಾಗಿರುವ ಕ್ರಿಮಿನಲ್ ದಾಖಲೆಗಳು ಹಾಗೂ ಆಸ್ತಿ ಘೋಷಣೆಯ ಫಾರ್ಮುಗಳಲ್ಲಿ ಇತ್ತೀಚೆಗೆ ಆಯೋಗವು ಪ್ರಮುಖ ಬದಲಾವಣೆ ತಂದಿದೆ. ಬದಲಾವಣೆಯಂತೆ ಅಭ್ಯರ್ಥಿ ಕೊನೆಗೆ ಖರೀದಿಸಿರುವ ಆಸ್ತಿಯ ವಿವರವನ್ನು ದಿನಾಂಕ ಹಾಗೂ ಬೆಲೆಯೊಂದಿಗೆ ನಮೂದಿಸಬೇಕು ಹಾಗೂ ತಾನು ಹೊಂದಿರುವ ಸ್ಥಿರಾಸ್ತಿಯ ಈಗಿನ ಬೆಲೆಯನ್ನು ತಿಳಿಸಬೇಕು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications