ಟಿ ಬೇಗೂರು ರೈತರ ಸ್ಪಂದನೆಯಿಂದ ಪುಳಕಿತರಾದ ಅಣ್ಣಾ

ಇನ್ನೊಬ್ಬ ಸಮಾಜ ಚಿಂತಕ ಮತ್ತು ಜನ ಲೋಕಪಾಲ ಮಸೂದೆ ಸಮಿತಿಯಲ್ಲಿರುವ ಸ್ವಾಮಿ ಅಗ್ನಿವೇಶ್ ಜೊತೆ ಬಂದಿರುವ ಅಣ್ಣಾ ಹಜಾರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ನೆಲಮಂಗಲಕ್ಕೆ ಸಾಗಿದರು. ರೈತರ ಸ್ಪಂದನೆಯಿಂದ ಪುಳಕಿತರಾಗಿರುವ ಅಣ್ಣಾ ಹಜಾರೆ ಮಸೂದೆ ಮಂಡನೆಯಾಗುವವರೆಗೆ ವಿಶ್ರಮಿಸುವುದಿಲ್ಲ, ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟ ನಿರಂತರ ಎಂದು ಹೇಳಿದ್ದಾರೆ.
ಅಣ್ಣಾ ಹೋರಾಟಕ್ಕಾಗಿ ಹಣದ ಜೊತೆಗೆ ಜನಬಲವೂ ಸೇರಿಕೊಳ್ಳುತ್ತಿದೆ. ಅಣ್ಣಾ ಬೆಂಗಳೂರಿನಲ್ಲಿ ಮೇ 28ರ ಶನಿವಾರದಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಟೋ ಚಾಲಕರು, ಕಾರ್ಮಿಕರು ಸೇರಿದಂತೆ ಭ್ರಷ್ಟಾಚಾರ ವಿರೋಧಿಸುವ ಬೆಂಗಳೂರಿಗರು ನಾಳೆಯ ಕಾರ್ಯಕ್ರಮದ ಆಯೋಜನೆಗಾಗಿ ಈಗಾಗಲೆ 60 ಸಾವಿರ ರು.ಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ. ಸಾಕು ಎಂಬ ಸಂಸ್ಥೆ ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.
ಲೈಂಗಿಕ ಕಾರ್ಯಕರ್ತರಿಗೆ ಅಣ್ಣಾ ಬೆಂಬಲ : ಹೋರಾಟ ಯಾವುದಾದರೇನು, ನ್ಯಾಯವಾಗಿದ್ದರೆ ಸಾಕು ಮತ್ತು ನ್ಯಾಯಕ್ಕಾಗಿದ್ದರೆ ಸಾಕು ಎಂದು ನಂಬಿರುವ ಅಣ್ಣಾ ಹಜಾರೆ ಲೈಂಗಿಕ ಕಾರ್ಯಕರ್ತರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರೇಡಿಯೋ ಒಂದರಲ್ಲಿ ಲೈಂಗಿಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅಣ್ಣಾ ಜೀವನಕ್ಕಾಗಿ ನೀವು ನಡೆಸುತ್ತಿರುವ ಹೋರಾಟ ಯಾವತ್ತಿಗೂ ನಿಲ್ಲಿಸಬೇಡಿ ಎಂದು ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಅಣ್ಣಾ ಹಜಾರೆಯವರು ಲೋಕಪಾಲ ಮಸೂದೆ ಮಂಡನೆಗಾಗಿ ಆಮರಣಾಂತ ಉಪವಾಸ ಕುಳಿತಿದ್ದಾಗ ಮಹಾರಾಷ್ಟ್ರದ ಔರಾಂಗಾಬಾದ್ ನ ಕೆಲ ಲೈಂಗಿಕ ಕಾರ್ಯಕರ್ತರು ತಮ್ಮ ಬೆಂಬಲ ವ್ಯಕ್ತಪಡಿಸಿ ಅವರೊಂದಿಗೆ ಉಪವಾಸ ಕುಳಿತಿದ್ದರು. ಆಗ ಅವರಿಗೆ ನೀಡಿದ್ದ ವಾಗ್ದಾನ ಉಳಿಸಿಕೊಂಡಿರುವ ಹಜಾರೆ ಔರಂಗಾಬಾದ್ ಲೈಂಗಿಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಅವರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.












Click it and Unblock the Notifications