ಮಗಳ ಕೊಂದು ನೇಣಿಗೆ ಶರಣಾದ ಇನ್ಫೋಸಿಸ್ ಟೆಕ್ಕಿ

ಸಂತೋಷ್ 6 ವರ್ಷಗಳ ಹಿಂದೆ ಸುಷ್ಮಾ ಎಂಬವರನ್ನು ಮದುವೆಯಾಗಿ ಸಂತೋಷದಿಂದಲೇ ಇದ್ದ. ಆಕೆಯೂ ಸಾಫ್ಟ್ ವೇರ್ ಉದ್ಯೋಗಿ. ಇಬ್ಬರಿಗೂ ಕೈತುಂಬಾ ಕೆಲಸ. ಆದರೆ ಏನು ಮಾಡುವುದು ಕಾಸಿಗೆ ತಕ್ಕಂತೆ ಮೈತುಂಬಾ ಕೆಲಸವೂ ಇತ್ತು. ತುರಿಸಿಕೊಳ್ಳಲೂ ಇಬ್ಬರಿಗೂ ಪುರೊಸೊತ್ತಿರಲಿಲ್ಲ. ಜತೆಗೆ ಸಂತೋಷ್ ಸ್ವಲ್ಪ ಮುಂಗೋಪಿ.
ಕೆಲಸದ ಒತ್ತಡದಿಂದ ಖಿನ್ನತೆ ಬಳುವಳಿಯಾಗಿತ್ತು. ಕಚೇರಿ ವಹಿಸುತ್ತಿದ್ದ ಕೆಲಸದ ಬಗ್ಗೆಯೇ ಸದಾ ಚಿಂತಿಸುತ್ತಿದ್ದ. ಕಂಪನಿ ವಹಿಸಿಕೊಟ್ಟಿದ್ದ ಕೆಲಸವನ್ನು ಸಕಾಲದಲ್ಲಿ ನಿಭಾಯಿಸಲಾಗದೆ ಅಧೀರನಾಗಿದ್ದ. ಪ್ರಾಜೆಕ್ಟ್ ವರ್ಕ್ ಪೂರ್ಣಗೊಳಿಸಲಾಗದೆ ಸಂತೋಷ್ ಚಡಪಡಿಸುತ್ತಿದ್ದ. ಈ ವಿಷಯವಾಗಿ ಕಂಪನಿಯ ಮ್ಯಾನೇಜರ್ ಕ್ಯಾತೆ ತೆಗೆದಿದ್ದ. ಕೋಪಗೊಂಡ ಸಂತೋಷ್ ಮೇ 16ರಂದು ರಾಜೀನಾಮೆ ನೀಡಿದ್ದ.
ಆದರೆ ಮಾರನೆಯ ದಿನವೇ ಕಚೇರಿಗೆ ತೆರಳಿ ರಾಜೀನಾಮೆ ವಾಪಸು ಪಡೆಯುವುದಾಗಿ ಮ್ಯಾನೇಜರ್ ಮುಂದೆ ಗೋಗರೆದ. ಆದರೆ ಮಹಾನುಭಾವ ಮ್ಯಾನೇಜರ್ ಇದಕ್ಕೆ ಸೊಪ್ಪುಹಾಕಲಿಲ್ಲ. ಸರಿ. ಸೀದಾ ನೆಗೆ ಬಂದವನೆ ಮಂಳವಾರ ರಾತ್ರಿ ಮಗಳ ಕುತ್ತಿಗೆಗೆ ಟವಲ್ ಬಿಗಿದು ಬಳಿಕ ತಾನೂ ಫ್ಯಾನಿಗೆ ನೇಣು ಹಾಕಿಕೊಂಡು ಇಹಲೋಕದ ವ್ಯಾಪಾರದಿಂದ ಮುಕ್ತಿ ಪಡೆದ.
ಅದಕ್ಕೂ ಮುನ್ನ ಪತ್ನಿ ಮಲಗಿದ ನಂತರ ಮಗುವನ್ನು ಬೇರೆ ಕೊಠಡಿಗೆ ಕರೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ 3 ಗಂಟೆಗೆ ಎಚ್ಚರಗೊಂಡ ಸುಷ್ಮಾ, ಮಗು ಮತ್ತು ಪತಿ ಕಾಣದಿದ್ದರಿಂದ ಹುಡುಕಾಟ ಆರಂಭಿಸಿದ್ದಾರೆ. ಪಕ್ಕದ ಕೋಣೆಯಲ್ಲಿ ಚಿಲಕ ಹಾಕಿಕೊಂಡು ಸಂತೋಷ್ ನೇಣಿಗೆ ಗೋಣು ಕೊಟ್ಟಿರುವುದು ಸುಷ್ಮಾ ಅರಿವಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಡಾ. ಹರ್ಷ ಗುಪ್ತ, ಪರಪ್ಪನ ಅಗ್ರಹಾರ ಠಾಣೆಯ ಇನ್ಸ್ ಪೆಕ್ಟರ್ ವಿ.ಕೆ. ವಾಸುದೇವ್ ಆಗಮಿಸಿ ಪರಿಶೀಲನೆ ನಡೆಸಿದರು.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications