ಮೈಸೂರು: ಅಂಧರು ಹೇಳಿದಂತೆ ಕಾರು ಓಡಿಸಿದರು!

ಮೈಸೂರಿನಲ್ಲಿ ಇಂತಹ ಕಾರು ರಾಲಿ ನಡೆದಿರುವುದು ಇದೇ ಮೊದಲು. 6 ಅಡಿ ಉದ್ದದ ಸೈಕಪ್ ಪ್ಯೂರ್ ಅಗರಬತ್ತಿ ಉರಿಸುವ ಮೂಲಕ ಎನ್ಎಎಫ್ ಬಿ ಅಧ್ಯಕ್ಷ ಸಿದ್ದರಾಜು ಈ ರಾಲಿಯನ್ನು ಉದ್ಘಾಟಿಸಿದರು. ಈ ಕಾರು ರಾಲಿಯಲ್ಲಿ ನೂರಾರು ಜನರು ಭಾಗವಹಿಸಿ ಅಂಧರ ಸಮುದಾಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಜನರು ಅಂಧರ ಮಾರ್ಗದರ್ಶನದ ಮೂಲಕ ಕಾರು ಚಲಾಯಿಸಿದ್ದಾರೆ. ಈ ಅಂಧರಿಗೆ ಬ್ರೈಲ್ ಲಿಪಿಯ ಮೂಲಕ ನ್ಯಾಷನಲ್ ಸ್ಕೂಲ್ ಆಫ್ ಬ್ಲೈಂಡ್ ತರಬೇತಿ ನೀಡಿತ್ತು.
ಇದನ್ನೂ ಓದಿ: ಇನ್ಮುಂದೆ ಅಂಧರೂ ದಟ್ಸ್ ಕನ್ನಡ ಓದಬಹುದು!
ಇಲ್ಲಿ ಅಂಧರು ಬ್ರೈಲ್ ಲಿಪಿಯಲ್ಲಿರುವ ರೂಟ್ ಮ್ಯಾಪ್ ಮೂಲಕ ಚಾಲಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. "ಈ ಕಾರ್ಯಕ್ರಮಗಳು ಅಂಧರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ನೆರವಾಗಿದೆ. ತಮ್ಮ ಅಂಧತೆಯ ನಡುವೆಯು ಇವರು ಸಾಕಷ್ಟು ಸಾಧಿಸಬಲ್ಲರು ಎಂಬುದಕ್ಕೆ ಇದು ಸಣ್ಣ ನಿದರ್ಶನವಾಗಿದೆ" ಎಂದು ಕಾರ್ಯಕ್ರಮದ ಸಂಘಟಕ ಅರ್ಜುನ್ ರಂಗ ಹೇಳಿದ್ದಾರೆ.












Click it and Unblock the Notifications