Get Updates
Get notified of breaking news, exclusive insights, and must-see stories!

ಶಿಕಾರಿಪುರದಲ್ಲಿ ನರಹಂತಕ ಹುಲಿಗೆ ಒಬ್ಬ ಬಲಿ

Tiger Attack : 1 killed, 2 injured in shimoga (file photo)
ಶಿವಮೊಗ್ಗ, ಮೇ.1: ಇಷ್ಟು ದಿನ ಗ್ರಾಮಗಳಲ್ಲಿ ಚಿರತೆ, ಕರಡಿ, ತೋಳ ಹಾಗೂ ನರಿಗಳ ದಾಳಿಯನ್ನು ಕಂಡಿದ್ದಜನ ಇದೇ ಮೊದಲ ಬಾರಿಗೆ ಹುಲಿ ದಾಳಿಯನ್ನು ಕಂಡು ದಂಗುಬಡಿದವರಂತಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಹಾಗೂ ಗಾಮಾ ಗ್ರಾಮಗಳಲ್ಲಿ ಹುಲಿ ದಾಳಿ ಮಾಡಿ ಒಬ್ಬರನ್ನು ಬಲಿತೆಗೆದುಕೊಂಡಿದೆ. ಇನ್ನಿಬ್ಬರನ್ನು ತೀವ್ರವಾಗಿ ಗಾಯಗೊಳಿಸಿದೆ.

ಈಸೂರಿನ ಮುನೀರ್ ಸಾಬ್(35) ಎಂಬುವವರೇ ಹುಲಿ ದಾಳಿಗೆ ಬಲಿಯಾದ ನತದೃಷ್ಟ.ಬಾಲಕರಾದ ರಘು ಹಾಗೂ ನಾಗರಾಜ್ ಎಂಬಿಬ್ಬರು ಹುಲಿ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈಸೂರು ಹಾಗೂ ಗಾಮಾ ಹಳ್ಳಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹುಲಿಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.

ಹುಲಿಯನ್ನು ಬಲೆಗೆ ಕೆಡವಲು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಕೈಜೋಡಿಸಿದ್ದಾರೆ. ಆದರೆ ಹುಲಿರಾಯ ಮಾತ್ರ ಬಲಗೆ ಬೀಳದೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಇದೇ ಮೊದಲ ಬಾರಿಗೆ ಹುಲಿ ಗ್ರಾಮಸ್ಥರಿಗೆ ಮುಖಾಮುಖಿಯಾಗುವ ಮೂಲಕ ಈಸೂರು ಗ್ರಾಮಸ್ಥರನ್ನು ಭಯಬೀತಗೊಳಿಸಿದೆ.

ಹುಲಿ ದಾಳಿಯಿಂದ ಗಾಯಗೊಂಡವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಸೂರಿನ ಬಾಳೆತೋಟದವೊಂದರಲ್ಲಿ ಹುಲಿರಾಯ ಸೇರಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಶಿಕಾರಿಪುರದಲ್ಲಿ ಹುಲಿ ಭೇಟೆ ಸತತವಾಗಿ ನಡೆಯುತ್ತಿದೆ. ಆದರೆ ಹುಲಿ ಮಾತ್ರ ಬಲೆಗೆ ಬೀಳುತ್ತಿಲ್ಲ. ಕಾರ್ಯಚಾರಣೆ ಮುಂದುವರಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+