ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡ್ಡಿ ಭೂಹಗರಣ: ಅರ್ಜಿ ತಳ್ಳಿಹಾಕಿದ ಸುಪ್ರಿಂ ಕೋರ್ಟ್
ನ್ಯಾಯಮೂರ್ತಿ ವಿ. ಎಸ್. ಸರ್ಪುಕರ್ ಮತ್ತು ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರ ವಿಭಾಗೀಯ ಪೀಠವು ಅರ್ಜಿದಾರರಾದ ಅಡ್ವೊಕೇಟ್ ಸಿರಾಜಿನ್ ಬಾಷಾ ಅವರಿಗೆ ಈ ಪ್ರಕರಣವನ್ನು ಹೈಕೋರ್ಟಿನಲ್ಲೇ 6 ವಾರದೊಳಗೆ ತೀರ್ಮಾನಿಸಿಕೊಳ್ಳಿರಿ ಎಂದಿದೆ. ಯಡ್ಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಭೂಹಗರಣ ಪ್ರಕರಣದಲ್ಲಿ ತೊಡಗಿರುವುಕ್ಕಾಗಿ ಕರ್ನಾಟಕ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರು ಇವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದರು.
ಭ್ರಷ್ಟಾಚಾರ ಕಾಯಿದೆಯ ಅಡಿಯಲ್ಲಿ ಬಾಷಾ ಸೇರಿದಂತೆ ಇಬ್ಬರು ನ್ಯಾಯವಾದಿಗಳು ಈ ಪ್ರಕರಣವನ್ನು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ ಇದನ್ನು ಯಡಿಯೂರಪ್ಪ ಕುಟುಂಬದ ಸದಸ್ಯರೊಬ್ಬರು ಹೈಕೋರ್ಟಿನಲ್ಲಿ ಪ್ರಶ್ನಿಸಿ ಸ್ಟೇ ಆರ್ಡರ್ ತಂದಿದ್ದರು. ಇದರಿಂದಾಗಿ ಬಾಷಾ ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಈಗ ಈ ಪ್ರಕರಣವನ್ನು ಹೈಕೋರ್ಟಿನಲ್ಲಿಯೇ ವಿಚಾರಣೆ ನಡೆಸಿ ಎಂದು ಬಾಷಾ ಅರ್ಜಿಯನ್ನು ತಳ್ಳಿ ಹಾಕಿದೆ.
Comments
English summary
The Supreme Court today rejected a petition challenging the Karnataka High Court's order staying criminal proceedings against Chief Minister B.S. Yeddyurappa and family in an alleged land grab case, but asked the lower court to take up the matter again.
Story first published: Friday, April 29, 2011, 17:25 [IST]