ಯಡ್ಡಿ ಭೂಹಗರಣ: ಅರ್ಜಿ ತಳ್ಳಿಹಾಕಿದ ಸುಪ್ರಿಂ ಕೋರ್ಟ್

ನ್ಯಾಯಮೂರ್ತಿ ವಿ. ಎಸ್. ಸರ್ಪುಕರ್ ಮತ್ತು ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರ ವಿಭಾಗೀಯ ಪೀಠವು ಅರ್ಜಿದಾರರಾದ ಅಡ್ವೊಕೇಟ್ ಸಿರಾಜಿನ್ ಬಾಷಾ ಅವರಿಗೆ ಈ ಪ್ರಕರಣವನ್ನು ಹೈಕೋರ್ಟಿನಲ್ಲೇ 6 ವಾರದೊಳಗೆ ತೀರ್ಮಾನಿಸಿಕೊಳ್ಳಿರಿ ಎಂದಿದೆ. ಯಡ್ಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಭೂಹಗರಣ ಪ್ರಕರಣದಲ್ಲಿ ತೊಡಗಿರುವುಕ್ಕಾಗಿ ಕರ್ನಾಟಕ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರು ಇವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದರು.
ಭ್ರಷ್ಟಾಚಾರ ಕಾಯಿದೆಯ ಅಡಿಯಲ್ಲಿ ಬಾಷಾ ಸೇರಿದಂತೆ ಇಬ್ಬರು ನ್ಯಾಯವಾದಿಗಳು ಈ ಪ್ರಕರಣವನ್ನು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ ಇದನ್ನು ಯಡಿಯೂರಪ್ಪ ಕುಟುಂಬದ ಸದಸ್ಯರೊಬ್ಬರು ಹೈಕೋರ್ಟಿನಲ್ಲಿ ಪ್ರಶ್ನಿಸಿ ಸ್ಟೇ ಆರ್ಡರ್ ತಂದಿದ್ದರು. ಇದರಿಂದಾಗಿ ಬಾಷಾ ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಈಗ ಈ ಪ್ರಕರಣವನ್ನು ಹೈಕೋರ್ಟಿನಲ್ಲಿಯೇ ವಿಚಾರಣೆ ನಡೆಸಿ ಎಂದು ಬಾಷಾ ಅರ್ಜಿಯನ್ನು ತಳ್ಳಿ ಹಾಕಿದೆ.












Click it and Unblock the Notifications