ಶಿರಡಿ, ಸತ್ಯ ನಂತರ ಪ್ರೇಮ ಸಾಯಿಬಾಬಾ

96 ವಸಂತಗಳನ್ನು ಕಳೆದ ನಂತರ ಇಹಲೋಕ ತ್ಯಜಿಸುತ್ತೇನೆ. ನಂತರ ಕರ್ನಾಟಕದ ಮಂಡ್ಯಜಿಲ್ಲೆಯ ಗುಣಪರ್ತಿಯಲ್ಲಿ ಪ್ರೇಮ ಸಾಯಿಯಾಗಿ ನಿಮ್ಮ ಮುಂದೆ ಬರುತ್ತೇನೆ. 2023ರ ತನಕ ನನಗಾಗಿ ಕಾಯುತ್ತಿರಿ ಎಂದು ಸ್ವತಃ ಸಾಯಿಬಾಬಾ ಒಮ್ಮೆ ಹೇಳಿದ್ದರು.
ಬಾಬಾ ಇಚ್ಛಾಮರಣಿಯೇ?: ಹೌದು ಎನ್ನುತ್ತದೆ ಭಕ್ತ ಸಮೂಹ. ನನಗೆ ಬೇಕೆನಿಸಿದಾಗ ಈ ದೇಹ ತ್ಯಾಗ ಮಾಡುತ್ತೇನೆ. ಆದರೂ 96 ವರ್ಷ ಯಾವುದೇ ಮಾರಣಾಂತಿಕ ಕಾಯಿಲೆ ನನ್ನನ್ನು ಬಾಧಿಸದು, 96 ವರ್ಷ ನಿಮ್ಮೊಡನಿರುತ್ತೇನೆ ಎಂದಿದ್ದರು ಆದರೆ, 86 ವರ್ಷಕ್ಕೆ ಅವತಾರ ಮುಗಿಸಿರುವುದು ಸ್ವಲ್ಪ ಗೊಂದಲ ಉಂಟಾಗಿದೆ. ಮಾನವರನ್ನು ಬಾಧಿಸುವ ಕಾಯಿಲೆಯನ್ನು ತಮ್ಮ ದೇಹದಲ್ಲಿ ಆವರಿಸಿಕೊಂಡು ಬಾಬಾ ಯೋಗ ನಿದ್ರೆಗೆ ತೆರಳಿದ್ದಾರೆ. ಅವರೇ ಹೇಳಿದಂತೆ ಆತ್ಮಕ್ಕೆ ಸಾವಿಲ್ಲ. ಬಾಬಾ ಭಕ್ತರನ್ನು ಕೈಬಿಡುವುದಿಲ್ಲ. ಮತ್ತೆ ಅವತರಿಸುತ್ತಾರೆ ಎಂದು ಭಕ್ತರು ನಂಬಿದ್ದಾರೆ.
ಮಂಡ್ಯ ಕಡೆ ಎಲ್ಲರ ಕಣ್ಣು: ಮಂಡ್ಯದ ಪುಟ್ಟ ಗ್ರಾಮ ಗುಣಪರ್ತಿ ಮೇಲೆ ಎಲ್ಲರ ಕುತೂಹಲದ ನೋಟ ನೆಟ್ಟಿದೆ. ಶಿರಡಿ ಸಾಯಿಬಾಬಾ ಪರಂಪರೆಯ ಕೊನೆಯ ಅವತಾರವಾದ ಪ್ರೇಮ ಸಾಯಿಬಾಬಾ 2023ರ ಹೊತ್ತಿಗೆ ಪ್ರಕಟವಾಗುತ್ತೇನೆ ಎಂದು ಬಾಬಾ ಹೇಳಿದ್ದರು. ಪ್ರೇಮ ಸಾಯಿಬಾಬಾರ ತಾಯಿಯಾಗಿ ಕಸ್ತೂರಿ ಎಂಬ ಹೆಣ್ಣು ಮಗಳು ಕಾಣಿಸಿಕೊಳ್ಳಲಿದ್ದಾರೆ ಎಂದು 2008ರಲ್ಲಿ ಬಾಬಾ ಅಶ್ರಮದಿಂದ ಸುದ್ದಿ ಹೊರ ಬಿದ್ದಿತ್ತು. ಜಾನ್ ಹಿಸ್ಲಾಪ್ ಎಂಬ ಸಾಯಿಬಾಬಾ ಭಕ್ತ ಪ್ರೇಮ ಸಾಯಿಬಾಬಾ ಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು.
ಬಾಬಾರ ಪವಾಡಗಳನ್ನು ನಂಬುವ ಭಕ್ತರಿಗೆ, ಅವರ ಸಾಮಾಜಿಕ ಸೇವೆಯನ್ನು ಮೆಚ್ಚುವ ಜನರಿಗೆ, ಮಾನಸಿಕ ಬೆಂಬಲ ಲಾಭ ಪಡೆಯುತ್ತಿದ್ದ ಕ್ರಿಕೆಟ್ಟಿಗರಿಗೆ, ಆಧುನಿಕ ಭಗೀರಥನಂತೆ ಕಂಡ ಬರದ ನಾಡಿನ ಜನರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಬಾಬಾ ಎಂಬ ವಿಸ್ಮಯ ಜೀವ ಎಂದಿಗೂ ಶಾಶ್ವತ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications