ಪ್ರಿಯಕರನ ಕಣ್ಣು ಕಿತ್ತು ಬಿಟ್ಟ ಪ್ರೇಯಸಿಯ ಅಣ್ಣ

"ನನ್ನನ್ನು ಕೊಲ್ಲೊ ತನಕ ನೆಮ್ಮದಿಯಿಲ್ಲ ಅಂತ ಅವಳ ಅಣ್ಣ ಹೇಳುತ್ತಿದ್ದ. ಆತ ಕಣ್ಣಿನೊಳಗೆ ಬೆರಳು ಹಾಕಿ ಕಣ್ಣಿನ ಗುಡ್ಡೆಗಳನ್ನೇ ಕಿತ್ತು ಹಾಕಿಬಿಟ್ಟ. ಆತ ನನ್ನನ್ನು ಕೊಲ್ಲಲು ಬಯಸಿದ್ದ" ಎಂದು ಕಣ್ಣು ಕಳೆದುಕೊಂಡ ರಾಘು ಹೇಳುತ್ತಾನೆ.
26 ವಯಸ್ಸಿನ ರಾಘು ಮಂಡ್ಯದಲ್ಲಿ ಜಿವೈಎಂ ಉದ್ಯೋಗಿ. ಆತ ನಾಲ್ಕು ವರ್ಷದಿಂದ ಅನುಷಾ(23) ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆತ ಎರಡು ವರ್ಷದ ಹಿಂದೆಯೇ ಧರ್ಮಸ್ಥಳದಲ್ಲಿ ಅನುಷಾಳನ್ನು ಮದುವೆಯಾಗಿದ್ದ. ಆದರೆ ಆಕೆಯ ಕುಟುಂಬದವರು ಬಲಪ್ರಯೋಗದ ಮೂಲಕ ಇಬ್ಬರನ್ನು ದೂರವಾಗಿಸಿದ್ದರು.
ಅವಳನ್ನು ಮತ್ತೆ ತನ್ನವಳಾಗಿಸಲು ರಾಘು ಸಾಕಷ್ಟು ಪ್ರಯತ್ನ ಮಾಡಿದ್ದ. "ಆಕೆಯ ಕುಟುಂಬ ನನ್ನ ಮೇಲೆ ಸತತ ಧಾಳಿ ಮಾಡುತ್ತಿತ್ತು. ಒಮ್ಮೆ ಸುಮಾರು 30 ಜನರ ಗ್ಯಾಂಗಿನೊಂದಿಗೆ ನನ್ನ ಕೊಲೆ ಮಾಡಲು ಬಂದಿದ್ದರು. ನಾನು ಹೇಗೋ ಪರಾರಿಯಾಗಿ ಬಿಟ್ಟೆ. ಪ್ರತಿ ಅಟ್ಯಾಕ್ ಆದಾಗಲೂ ನಾನು ಪೋಲಿಸ್ ಕಂಪ್ಲೇಟ್ ನೀಡುತ್ತಿದ್ದೆ" ಎಂದು ರಾಘು ಹೇಳುತ್ತಾನೆ.
ಕೆಲವು ದಿನದ ಹಿಂದೆ ಆತನಿಗೆ ಆಕೆಯ ಮನೆಯವರಿಂದ ಅನಿರೀಕ್ಷಿತ ಕರೆ ಬಂದಿತ್ತು. "ಅನುಷಾಳಿಗೆ ಮದುವೆ ಮಾಡುತ್ತಿದ್ದೇವೆ. ಕೊನೆಯ ಬಾರಿಗೆ ಆಕೆಯನ್ನು ನೋಡಲು ನೀನು ಬಾ" ಎಂದು ಪ್ರೀತಿಯಿಂದ ಈತನನ್ನು ಮದುವೆಗೆ ಆಮಂತ್ರಿಸಿದ್ದರು.
ರಾಘು ತನ್ನ ಸ್ನೇಹಿತರಾದ ರಾಮು, ಕಿಶೋರ್ ಮತ್ತು ನಿತೇಶ್ ಜೊತೆ ಚೆನ್ನಪಟ್ನಕ್ಕೆ ಮದುವೆಗೂ ಹೋಗಿ ಪ್ರೇಯಸಿ ಮತ್ತು ಆಕೆಯ ಪತಿಗೆ ಶುಭ ಕೋರಿದ್ದಾನೆ. ಭಾರವಾದ ಹೃದಯದೊಂದಿಗೆ ಆತ ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ಹತ್ತಾರು ಜನರ ಗುಂಪು ಇವರ ಬಳಿಬಂದಿದೆ. ಆಕೆಯ ಅಣ್ಣ ಅಂಜನ ಗೌಡ ತನ್ನ ಗ್ಯಾಂಗ್ ನೊಂದಿಗೆ ಇವನ ಮೇಲೆ ಮುಗಿಬಿದ್ದಿದ್ದಾರೆ. ನಂತರ ಆಕೆಯ ಅಣ್ಣ ಬೆರಳಿನಿಂದ ಕಣ್ಣನ್ನೇ ಕಿತ್ತಾಕಿ ಬಿಟ್ಟಿದ್ದಾನೆ.
ಆತನಿಗೆ ಮತ್ತೆ ದೃಷ್ಟಿ ಬರುವ ಸಾಧ್ಯತೆಯ ಕುರಿತು ಡಾಕ್ಟರ್ ಸ್ಪಷ್ಟಪಡಿಸಿಲ್ಲ. ರಾಘುವಿನ ಸ್ನೇಹಿತರು, ಕುಟುಂಬದ ಮೂಲಕ ಮಂಡ್ಯದಲ್ಲಿ ಪೋಲಿಸ್ ಕಂಪ್ಲೇಟ್ ನೀಡಿದ್ದಾರಂತೆ. ಸಾಧ್ಯವಾದಷ್ಟು ಬೇಗ ರಾಘು ಬೆಳಕನ್ನು ನೋಡಲಿ ಎಂದು ಆತನ ಹಿತೈಷಿಗಳ ಹಾರೈಕೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications