ಪ್ರಿಯಕರನ ಕಣ್ಣು ಕಿತ್ತು ಬಿಟ್ಟ ಪ್ರೇಯಸಿಯ ಅಣ್ಣ

"ನನ್ನನ್ನು ಕೊಲ್ಲೊ ತನಕ ನೆಮ್ಮದಿಯಿಲ್ಲ ಅಂತ ಅವಳ ಅಣ್ಣ ಹೇಳುತ್ತಿದ್ದ. ಆತ ಕಣ್ಣಿನೊಳಗೆ ಬೆರಳು ಹಾಕಿ ಕಣ್ಣಿನ ಗುಡ್ಡೆಗಳನ್ನೇ ಕಿತ್ತು ಹಾಕಿಬಿಟ್ಟ. ಆತ ನನ್ನನ್ನು ಕೊಲ್ಲಲು ಬಯಸಿದ್ದ" ಎಂದು ಕಣ್ಣು ಕಳೆದುಕೊಂಡ ರಾಘು ಹೇಳುತ್ತಾನೆ.
26 ವಯಸ್ಸಿನ ರಾಘು ಮಂಡ್ಯದಲ್ಲಿ ಜಿವೈಎಂ ಉದ್ಯೋಗಿ. ಆತ ನಾಲ್ಕು ವರ್ಷದಿಂದ ಅನುಷಾ(23) ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆತ ಎರಡು ವರ್ಷದ ಹಿಂದೆಯೇ ಧರ್ಮಸ್ಥಳದಲ್ಲಿ ಅನುಷಾಳನ್ನು ಮದುವೆಯಾಗಿದ್ದ. ಆದರೆ ಆಕೆಯ ಕುಟುಂಬದವರು ಬಲಪ್ರಯೋಗದ ಮೂಲಕ ಇಬ್ಬರನ್ನು ದೂರವಾಗಿಸಿದ್ದರು.
ಅವಳನ್ನು ಮತ್ತೆ ತನ್ನವಳಾಗಿಸಲು ರಾಘು ಸಾಕಷ್ಟು ಪ್ರಯತ್ನ ಮಾಡಿದ್ದ. "ಆಕೆಯ ಕುಟುಂಬ ನನ್ನ ಮೇಲೆ ಸತತ ಧಾಳಿ ಮಾಡುತ್ತಿತ್ತು. ಒಮ್ಮೆ ಸುಮಾರು 30 ಜನರ ಗ್ಯಾಂಗಿನೊಂದಿಗೆ ನನ್ನ ಕೊಲೆ ಮಾಡಲು ಬಂದಿದ್ದರು. ನಾನು ಹೇಗೋ ಪರಾರಿಯಾಗಿ ಬಿಟ್ಟೆ. ಪ್ರತಿ ಅಟ್ಯಾಕ್ ಆದಾಗಲೂ ನಾನು ಪೋಲಿಸ್ ಕಂಪ್ಲೇಟ್ ನೀಡುತ್ತಿದ್ದೆ" ಎಂದು ರಾಘು ಹೇಳುತ್ತಾನೆ.
ಕೆಲವು ದಿನದ ಹಿಂದೆ ಆತನಿಗೆ ಆಕೆಯ ಮನೆಯವರಿಂದ ಅನಿರೀಕ್ಷಿತ ಕರೆ ಬಂದಿತ್ತು. "ಅನುಷಾಳಿಗೆ ಮದುವೆ ಮಾಡುತ್ತಿದ್ದೇವೆ. ಕೊನೆಯ ಬಾರಿಗೆ ಆಕೆಯನ್ನು ನೋಡಲು ನೀನು ಬಾ" ಎಂದು ಪ್ರೀತಿಯಿಂದ ಈತನನ್ನು ಮದುವೆಗೆ ಆಮಂತ್ರಿಸಿದ್ದರು.
ರಾಘು ತನ್ನ ಸ್ನೇಹಿತರಾದ ರಾಮು, ಕಿಶೋರ್ ಮತ್ತು ನಿತೇಶ್ ಜೊತೆ ಚೆನ್ನಪಟ್ನಕ್ಕೆ ಮದುವೆಗೂ ಹೋಗಿ ಪ್ರೇಯಸಿ ಮತ್ತು ಆಕೆಯ ಪತಿಗೆ ಶುಭ ಕೋರಿದ್ದಾನೆ. ಭಾರವಾದ ಹೃದಯದೊಂದಿಗೆ ಆತ ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ಹತ್ತಾರು ಜನರ ಗುಂಪು ಇವರ ಬಳಿಬಂದಿದೆ. ಆಕೆಯ ಅಣ್ಣ ಅಂಜನ ಗೌಡ ತನ್ನ ಗ್ಯಾಂಗ್ ನೊಂದಿಗೆ ಇವನ ಮೇಲೆ ಮುಗಿಬಿದ್ದಿದ್ದಾರೆ. ನಂತರ ಆಕೆಯ ಅಣ್ಣ ಬೆರಳಿನಿಂದ ಕಣ್ಣನ್ನೇ ಕಿತ್ತಾಕಿ ಬಿಟ್ಟಿದ್ದಾನೆ.
ಆತನಿಗೆ ಮತ್ತೆ ದೃಷ್ಟಿ ಬರುವ ಸಾಧ್ಯತೆಯ ಕುರಿತು ಡಾಕ್ಟರ್ ಸ್ಪಷ್ಟಪಡಿಸಿಲ್ಲ. ರಾಘುವಿನ ಸ್ನೇಹಿತರು, ಕುಟುಂಬದ ಮೂಲಕ ಮಂಡ್ಯದಲ್ಲಿ ಪೋಲಿಸ್ ಕಂಪ್ಲೇಟ್ ನೀಡಿದ್ದಾರಂತೆ. ಸಾಧ್ಯವಾದಷ್ಟು ಬೇಗ ರಾಘು ಬೆಳಕನ್ನು ನೋಡಲಿ ಎಂದು ಆತನ ಹಿತೈಷಿಗಳ ಹಾರೈಕೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications