ಗಡ್ಡ ಇದ್ದವನಿಗೆ ಪರೀಕ್ಷೆ ಇಲ್ಲ!

ಈ ಮಧ್ಯೆ ಏನಾಯಿತೆಂದರೆ ಗಡ್ಡ ಬಿಟ್ಟುಕೊಂಡು ಪರೀಕ್ಷೆಗೆ ಬಂದಿದ್ದೀಯಾ. ನೀನು ಪರೀಕ್ಷೆ ಬರೆಯಬೇಡ ಮನೆಗೆ ಹೋಗು ಎಂದು ಸ್ಕೂಲಿನವರು ಮಗುವನ್ನು ವಾಪಸ್ ಅಟ್ಟಿದ್ದಾರೆ. ಕಂಗಾಲಾದ ಮಗು ಮನೆಗೆ ಹೋದರೆ ಬೈಸಿಕೊಳ್ಳಬೇಕಾಗುತ್ತದೆ ಎಂದು ರಾತ್ರಿ ತಡವಾಗಿ ಮನೆಗೆ ವಾಪಸಾಗಿದ್ದಾನೆ. ಅಂದಹಾಗೆ, ವಿಕಲಾಂಗ ಮಕ್ಕಳ ಪುನರ್ವಸತಿ ಶಾಲೆಯೇ ಇಂತಹ ಅಮಾನವೀಯತೆ ಮೆರೆದಿದೆ.
2008ರಲ್ಲಿ ಮಧ್ಯಪ್ರದೇಶದಲ್ಲಿ ಇಂತಹುದೇ ಪ್ರಕರಣ ನಡೆದಿತ್ತು. ಬಾಧಿತ ಸಲೀಂ ಎಂಬ ಯುವಕ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ. ಸಂವಿಧಾನದ 25ನೇ ಪರಿಚ್ಛೇಧದ ಅಡಿ ಗಡ್ಡ ಬಿಡುವುದು ಧಾರ್ಮಿಕ ಸ್ವಾತಂತ್ರ್ಯ ಎಂದು ಸಲೀಂ ಪರ ವಕೀಲರು ಪ್ರತಿಪಾದಿಸಿದ್ದರು. ಸಲೀಂನನ್ನು ಶಾಲೆಗೆ ಸೇರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಕಿವಿ ಹಿಂಡಿತ್ತು.












Click it and Unblock the Notifications