ಸಚಿನ್ 'ಸೆಂಚುರಿ'ಗಾಗಿ ಲತಾ ದೀದಿ ಉಪವಾಸ ವ್ರತ
ಮುಂಬೈ, ಏಪ್ರಿಲ್ 1: ಗಾನ ಕೋಗಿಲೆ ಲತಾ ಮಂಗೇಷ್ಕರ್ ಅವರಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಅದರಲ್ಲೂ ಚಿನ್ನದಂತ ತಮ್ಮ ಸಚಿನ್ನ ತೆಂಡೂಲ್ಕರ್ ಮೇಲೆ ಬಲುಪ್ರೀತಿ. ಇಂಥ ದೀದಿ, ನಾಳೆ ಶನಿವಾರ ಭಾರತ-ಶ್ರೀಲಂಕಾ ಫೈನಲ್ ಹಣಾಹಣಿಯಲ್ಲಿ ತೆಂಡೂಲ್ಕರ್ ನೂರನೇ ಸೆಂಚುರಿ ಬಾರಿಸಲಿ, ಜತೆಗೆ ಭಾರತವೂ ಗೆಲ್ಲಲಿ ಎಂದು ಹಾರೈಸುತ್ತಾ ಉಪವಾಸ ವ್ರತದಲ್ಲಿ ತೊಡಗಲಿದ್ದಾರೆ.
ಲತಾಗೆ ಕ್ರಿಕೆಟ್ ಬಗ್ಗೆ ಎಷ್ಟು ಹುಚ್ಚೆಂದರೆ ಕಪಿಲ್ ಸಾಬ್ 83ರಲ್ಲಿ ಪ್ರುಡೆನ್ಷಿಯಲ್ ಕಪ್ ಗೆದ್ದಿದ್ದನ್ನು ಲಾರ್ಡ್ಸ್ ನಲ್ಲಿ ಕಣ್ಣಾರೆ ಕಂಡಿದ್ದರು. 'ಫೈನಲ್ ಮ್ಯಾಚ್ ಗೂ ಮುನ್ನ ಕಪಿಲ್ ಡೆವಿಲ್ಸ್ ಅನ್ನು ಹೋಟೆಲ್ ಗೆ ಕರೆಸಿಕೊಂಡು ಚಿಕ್ಕ ಪಾರ್ಟಿ ಕೊಟ್ಟು, ಶುಭ ಹಾರೈಸಿದ್ದೆ. ಕಪ್ ಗೆದ್ದ ಮೇಲೆ ಕಪಿಲ್ ನನ್ನನ್ನು ಔತಣಕ್ಕೆ ಆಹ್ವಾನಿಸಿದ್ದರು' ಎಂದು ಅಂದಿನ ಆನಂದವನ್ನು ಮೆಲುಕು ಹಾಕಿದ್ದಾರೆ. ಇದೀಗ ವಯೋಸಹಜವಾಗಿ ಮನೆಯಲ್ಲೇ ಮನೆಮಂದಿಯನ್ನೆಲ್ಲ ಗುಡ್ಡೆ ಹಾಕಿಕೊಂಡು ಸಚಿನ್ ಸೆಂಚುರಿ ಬಾರಿಸುವುದನ್ನು ನೋಡಿ ಆನಂದಿಸಲು ತವಕಿಸುತ್ತಿದ್ದಾರೆ.
ಲತಾ ಈ ಇಳಿವಯಸ್ಸಲ್ಲೂ (81) ಮೊನ್ನೆ ಬುಧವಾರವೂ ಹೀಗೆ ಉಪವಾಸ ವ್ರತ ಕೈಗೊಂಡಿದ್ದರು: 'ಸಚಿನ್ ಸೆಂಚುರಿ ಸಿಡಿಸಲಿ, ಭಾರತ ಗೆಲ್ಲಲಿ' ಎಂದು ಪ್ರಾರ್ಥಿಸಿ. ಮಾಸ್ಟರ್ ಬ್ಲಾಸ್ಟರ್ ಎಸ್ಸಾರ್ ತೆಂಡೂಲ್ಕರ್ ನನಗೆ ಮಗನ ಸಮಾನ. ಅವ ಇನ್ನೊಂದೇ ಒಂದು ಸೆಂಚುರಿ ಬಾರಿಸಲಿ. ನಾನು ಅದನ್ನು ಕಣ್ಣಾರೆ ಕಾಣಬೇಕು ಎಂದು ಅವರು ಬಯಸಿದ್ದಾರೆ. ಅದಕ್ಕೆಂದೇ ಮ್ಯಾಚ್ ದಿನ ಒಂದು ತೊಟ್ಟು ನೀರೂ ಕುಡಿಯದೆ ಕಟ್ಟುನಿಟ್ಟಿನ ಉಪವಾಸ ಮಾಡಲಿದ್ದಾರೆ.
ಭಾರತದ ಪಂದ್ಯಗಳಿರುವಾಗ ನಮ್ಮ ಮನೆಯಲ್ಲಿ ಒಬ್ಬೊಬ್ಬರೂ ಒಂದೊಂಥರಾ (ಮೂಢ) ನಂಬಿಕೆಗಳನ್ನಾಚರಿಸುತ್ತೇವೆ. ಸೆಮಿಫೈನಲ್ಸ್ ದಿನ ನಾನು, ಮೀನಾ, ಉಶಾ ಏನನ್ನೂ ತಿನ್ನಲಿಲ್ಲ. ಕುಡಿಯಲಿಲ್ಲ. ಭಾರತ ಜಯ ದಾಖಲಿಸಿದ ಬಳಿಕವಷ್ಟೇ ಊಟ ಮಾಡಿದ್ದು ಎಂದು ಹಿರಿಯಕ್ಕ ಲತಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಕಪಿಲ್ ಡೆವಿಲ್ಸ್ ಪ್ರುಡೆನ್ಷಿಯಲ್ ಕಪ್ ಗೆದ್ದು ತವರಿಗೆ ಮರಳಿದಾಗ ಲತಾ ಒಂದೂ ಪೈಸೆ ಪಡೆಯದೆ ತಂಡಕ್ಕಾಗಿ ಸಂಗೀತ ರಸಮಂಜರಿ ನಡೆಸಿಕೊಟ್ಟಿದ್ದರು. ತಂಡದ ಎಲ್ಲ ಆಟಗಾರರೂ ಲತಾ ಜತೆ ದನಿಗೂಡಿಸಿದ್ದರು. ಈ ಬಾರಿ ಸ್ವಂತ ನೆಲದಲ್ಲಿ 28 ವರ್ಷಗಳ ನಂತರ 'ಆಕ್ಷನ್ ರಿಪ್ಲೆ' ಆಗುತ್ತದಾ!?
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications