ಅಂಬಾನಿ ಕ್ರಿಕೆಟ್ ಕ್ರೇಜ್ ಬೆಲೆ 5 ಕೋಟಿ ರು!
ಮುಂಬೈ, ಮಾ. 29: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏ.2ರಂದು ನಡೆಯಲಿರುವ ವಿಶ್ವಕಪ್ 2011 ಅಂತಿಮ ಹಣಾಹಣಿಯ ಪ್ರತಿಕ್ಷಣದ ರಸಾನುಭೂತಿ ಪಡೆಯಲು ಭಾರತದ ಅತಿ ದೊಡ್ಡ ಶ್ರೀಮಂತ ರಿಲೆಯನ್ಸ್ ಸಂಸ್ಥೆ ಮುಖ್ಯತಥ ಮುಖೇಶ್ ಅಂಬಾನಿ ಭಾರಿ ಸಿದ್ಧತೆ ನಡೆಸಿದ್ದಾರೆ. ವಾಂಖೆಡೆ ಸ್ಟೇಡಿಯಂನ ಮೂರು ಕಾರ್ಪೊರೇಟ್ ಬಾಕ್ಸ್ ಗಳ ಮೇಲೆ ಸುಮಾರು 5 ಕೋಟಿ ರು ತೆತ್ತು, ತಮ್ಮ ಕ್ರಿಕೆಟ್ ಪ್ರೇಮಿ ಪತ್ನಿ ನೀತು ಸೇರಿದಂತೆ ಸಕುಟುಂಬ ಸಪರಿವಾರ ಸಮೇತ ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಣಿಯಾಗುತ್ತಿದ್ದಾರೆ.
ಮುಂಬೈ ಕ್ರಿಕೆಟ್ ಸಂಸ್ಥೆ(MCA)ಯ ಪೆವಿಲಿಯನ್ ನ ದಕ್ಷಿಣ ಭಾಗದ ಮೂರು ಕಾರ್ಪೊರೇಟ್ ಬಾಕ್ಸ್ ಗಳನ್ನು ಅಂಬಾನಿ ಪಡೆದಿದ್ದಾರೆ. ಪ್ರತಿ ಬಾಕ್ಸ್ ನಲ್ಲೂ 15 ರಿಂದ 16 ಸೀಟುಗಳಿದ್ದು, ಪ್ರತಿ ಸೀಟಿಗೆ 10 ಲಕ್ಷರು ತಗುಲಲಿದೆ. ಫೈನಲ್ ಪಂದ್ಯದ ಟಿಕೆಟ್ ಕನಿಷ್ಠ ದರವೇ 1,500 ರು. ಈ ಎಸಿ ಕಾರ್ಪೊರೇಟ್ ಬಾಕ್ಸ್ ನಲ್ಲಿ ಎಲ್ಲವೂ ಇದೆ.
ಎಲ್ ಸಿಡಿ ಟಿವಿಗಳು, ವಿಡಿಯೋ ಮ್ಯಾಟ್ರಿಕ್ಸ್ ನೇರ ಸ್ಕೋರ್ ಕಾರ್ಡ್, ವೈಯಕ್ತಿಕವಾಗಿ ಆತಿಥ್ಯ, ಪುಷ್ಕಳ ಭೋಜನ, ಬೇಕಾದ ಪಾನೀಯ ಸೇವೆ ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ಜನರ ಮಧ್ಯದಲ್ಲಿದ್ದರೂ ಆರಾಮದಾಯಕವಾಗಿ ಕ್ರಿಕೆಟ್ ವೀಕ್ಷಿಸುವ ಅನುಭವ ಲಭ್ಯವಾಗಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಸುಮಾರು 57 ಕಾರ್ಪೊರೇಟ್ ಬಾಕ್ಸ್ ಗಳಿವೆ. ಅಂಬಾನಿಗಳಿಗೆ ಮೂರು ಬಾಕ್ಸ್ ಗಳನ್ನು ನೀಡಲಾಗಿದೆ. ಉದ್ಯಮಿಗಳು, ಸಿನಿ ತಾರೆಯರಿಂದ ಭಾರಿ ಬೇಡಿಕೆ ಬಂದಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಲಾಲ್ ಚಂದ್ ರಾಜ್ ಪುಟ್ ಹೇಳಿದ್ದಾರೆ.
ವಾಂಖೆಡೆಯಲ್ಲಿ ಸುಮಾರು 33,000 ಸೀಟುಗಳಿದೆ. ಕೇವಲ 4 ಸಾವಿರ ಟಿಕೆಟುಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಬೆಂಗಳೂರು ಹಾಗೂ ನಾಗಪುರದಲ್ಲಿ ಟಿಕೆಟ್ ಖರೀದಿಸಲು ಬಂದ ಕ್ರಿಕೆಟ್ ಅಭಿಮಾನಿಗಳು ಪೊಲೀಸರ ಲಾಠಿ ರುಚಿ ತಿಂದಿದ್ದರು. ಈ ಕಾರಣದಿಂದ ಕೌಂಟರ್ ನಲ್ಲಿ ಟಿಕೆಟ್ ಮಾರಾಟಕ್ಕೆ ಐಸಿಸಿ ನಿರ್ಬಂಧ ಹೇರಿದೆ.ಹೊರಗಡೆ ಖಾಕಿಗಳ ದರ್ಬಾರು, ಪೆವಿಲಿಯನ್ ನಲ್ಲಿ ಗಣ್ಯರ ಉಪಸ್ಥಿತಿ, ಮೈದಾನದಲ್ಲಿ ರೋಚಕ ಹಣಾಹಣಿಗೆ ವಾಂಖೆಡೆ ಸಾಕ್ಷಿಯಾಗಲಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications