ಚಂಡೀಗಢದಲ್ಲಿ ಕಿಂಗ್ ಫಿಶರ್ ಬಸ್ ನಿಲ್ದಾಣ
ಮೊಹಾಲಿ, ಮಾ. 28: ಭಾರತ-ಪಾಕಿಸ್ತಾನ ನಡುವಣ ಮತ್ತೊಂದು ಸುತ್ತಿನ ದಾಯಾದಿ ಸಮರಕ್ಕೆ ಚಂಡೀಗಢ ಸಾಕ್ಷಿಯಾಗಲಿದೆ. ಚಂಡೀಗಢ ನಿಜಕ್ಕೂ ನೋಡಲಿಕ್ಕೆ ಎರಡು ಕಣ್ಣು ಸಾಲದು ಎನ್ನುವಂತಿದೆ. ಇಲ್ಲಿನ ಸುವಿಶಾಲ ರಸ್ತೆಗಳೇ ಆಗಲಿ, ಬಡಾವಣೆಗಳೇ ಆಗಲಿ, ಜನರ ಶಿಸ್ತುಬದ್ಧ ಜೀವನವಾಗಲಿ, ತಂಬಾಕುರಹಿತ ನಗರ ಎಂಬ ಅಗ್ಗಳಿಕೆಯಾಗಲಿ ಎಲ್ಲವೂ ಸೂಪರ್ ಸೂಪರ್. ಆದರೆ ಇಲ್ಲಿಗೆ ಜನರನ್ನು ಹೊತ್ತುತರಲು ಸರಿಯಾದ ವಿಮಾನ ನಿಲ್ದಾಣವೇ ಇಲ್ಲ.
ಸದ್ಯಕ್ಕೆ ಇಲ್ಲಿರುವುದು ಅಕ್ಷರಶಃ ಕಿತ್ತೋಗಿರೊ ವಿಮಾಣ ನಿಲ್ದಾಣ. ನಾವೂ ನೀವು ದಿನನಿತ್ಯ ಕಾಣುವ ರೈಲ್ವೆ ಸ್ಟೇಷನ್ನೋ ಅಥವಾ ಬಸ್ ಸ್ಟೇಶನ್ನೊ ಇದ್ದಂತಿದೆ. ಇನ್ನು, ಪಂದ್ಯದ ನಿಮಿತ್ತ ಇಲ್ಲಿಗೆ ದೇಶೀಯ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ವಿಮಾನಗಳಿಗೂ ಪಾರ್ಕಿಂಗ್ ಸಮಸ್ಯೆ ಕಾಡಲಿದೆ. ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿಗೆ ನೇರವಾಗಿ ಬರುವ ಮಾತೇ ಇಲ್ಲ. ಸಮೀಪದ ದೆಹಲಿ (ಅರ್ಧ ಗಂಟೆ ಹಾರಾಟ) ಅಥವಾ ಮುಂಬೈಗೆ ಆಗಮಿಸಿ ಅಲ್ಲಿಂದ ದೇಶೀಯ ವಿಮಾನದಲ್ಲಿ ಇಲ್ಲಿಗೆ ತಲುಪುಬೇಕಾದ ದುಃಸ್ಥಿತಿಯಿದೆ. ಇನ್ನು ರಾತ್ರಿ ವೇಳೆಯಂತೂ ಇಲ್ಲಿ ಯಾವುದೇ ವಿಮಾನ ಹಾರಾಟ ನಡೆಸುವಂತಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ಸೇರಿದಂತೆ ಎಲ್ಲವೂ ಭಾರತೀಯ ವಾಯುಪಡೆ ಅಧೀನದಲ್ಲಿಯೇ ಇದೆ.
ಮಾರ್ಚ್ 30ರಂದು ಭಾರತ-ಪಾಕ್ ಕದನವನ್ನು ಕಣ್ಣಾರೆ ನೋಡಿ ಆಸ್ವಾದಿಸಲು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಆಗಮಿಸಲಿದ್ದಾರೆ. ಸೊ, ಅವರನ್ನು ಹೊತ್ತುತರಲಿರುವ ವಿಮಾನವೇ ಇಲ್ಲಿಯವರೆಗೂ ಪ್ರಯಾಣ ಬೆಳೆಸಲಿರುವ ಮೊದಲ ಅಂತಾರಾಷ್ಟ್ರೀಯ ವಿಮಾನ ಅಂದರೆ ನೀವು ನಂಬಲೇಬೇಕು. ಗಣ್ಯಾತಿಗಣ್ಯರೊಂದಿಗೆ ಬೃಹತ್ ವಿಮಾನ ಇಲ್ಲಿಗೆ ಬಂದಿಳಿಯಲಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಸಮಾಧಾನದ ಸಂಗತಿಯೆಂದರೆ ಹೊಸ ಅಂತಾರಾಷ್ಟ್ರೀಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ವಿದೇಶೀ ವಿಮಾನಗಳೂ ಇಲ್ಲಿಗೆ ಬಂದು ಹೋಗಲಿವೆ. ಆದರೆ ಇಲ್ಲಿವರೆಗೂ ಅದೇ ಇರ್ಲಿಲ್ವಲ್ಲ ಎಂಬುದೇ ಚಂಡೀಗಢ ಜನರ ಅಳಲು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications