ಚಂಡೀಗಢದಲ್ಲಿ ಕಿಂಗ್ ಫಿಶರ್ ಬಸ್ ನಿಲ್ದಾಣ
ಮೊಹಾಲಿ, ಮಾ. 28: ಭಾರತ-ಪಾಕಿಸ್ತಾನ ನಡುವಣ ಮತ್ತೊಂದು ಸುತ್ತಿನ ದಾಯಾದಿ ಸಮರಕ್ಕೆ ಚಂಡೀಗಢ ಸಾಕ್ಷಿಯಾಗಲಿದೆ. ಚಂಡೀಗಢ ನಿಜಕ್ಕೂ ನೋಡಲಿಕ್ಕೆ ಎರಡು ಕಣ್ಣು ಸಾಲದು ಎನ್ನುವಂತಿದೆ. ಇಲ್ಲಿನ ಸುವಿಶಾಲ ರಸ್ತೆಗಳೇ ಆಗಲಿ, ಬಡಾವಣೆಗಳೇ ಆಗಲಿ, ಜನರ ಶಿಸ್ತುಬದ್ಧ ಜೀವನವಾಗಲಿ, ತಂಬಾಕುರಹಿತ ನಗರ ಎಂಬ ಅಗ್ಗಳಿಕೆಯಾಗಲಿ ಎಲ್ಲವೂ ಸೂಪರ್ ಸೂಪರ್. ಆದರೆ ಇಲ್ಲಿಗೆ ಜನರನ್ನು ಹೊತ್ತುತರಲು ಸರಿಯಾದ ವಿಮಾನ ನಿಲ್ದಾಣವೇ ಇಲ್ಲ.
ಸದ್ಯಕ್ಕೆ ಇಲ್ಲಿರುವುದು ಅಕ್ಷರಶಃ ಕಿತ್ತೋಗಿರೊ ವಿಮಾಣ ನಿಲ್ದಾಣ. ನಾವೂ ನೀವು ದಿನನಿತ್ಯ ಕಾಣುವ ರೈಲ್ವೆ ಸ್ಟೇಷನ್ನೋ ಅಥವಾ ಬಸ್ ಸ್ಟೇಶನ್ನೊ ಇದ್ದಂತಿದೆ. ಇನ್ನು, ಪಂದ್ಯದ ನಿಮಿತ್ತ ಇಲ್ಲಿಗೆ ದೇಶೀಯ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ವಿಮಾನಗಳಿಗೂ ಪಾರ್ಕಿಂಗ್ ಸಮಸ್ಯೆ ಕಾಡಲಿದೆ. ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿಗೆ ನೇರವಾಗಿ ಬರುವ ಮಾತೇ ಇಲ್ಲ. ಸಮೀಪದ ದೆಹಲಿ (ಅರ್ಧ ಗಂಟೆ ಹಾರಾಟ) ಅಥವಾ ಮುಂಬೈಗೆ ಆಗಮಿಸಿ ಅಲ್ಲಿಂದ ದೇಶೀಯ ವಿಮಾನದಲ್ಲಿ ಇಲ್ಲಿಗೆ ತಲುಪುಬೇಕಾದ ದುಃಸ್ಥಿತಿಯಿದೆ. ಇನ್ನು ರಾತ್ರಿ ವೇಳೆಯಂತೂ ಇಲ್ಲಿ ಯಾವುದೇ ವಿಮಾನ ಹಾರಾಟ ನಡೆಸುವಂತಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ಸೇರಿದಂತೆ ಎಲ್ಲವೂ ಭಾರತೀಯ ವಾಯುಪಡೆ ಅಧೀನದಲ್ಲಿಯೇ ಇದೆ.
ಮಾರ್ಚ್ 30ರಂದು ಭಾರತ-ಪಾಕ್ ಕದನವನ್ನು ಕಣ್ಣಾರೆ ನೋಡಿ ಆಸ್ವಾದಿಸಲು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಆಗಮಿಸಲಿದ್ದಾರೆ. ಸೊ, ಅವರನ್ನು ಹೊತ್ತುತರಲಿರುವ ವಿಮಾನವೇ ಇಲ್ಲಿಯವರೆಗೂ ಪ್ರಯಾಣ ಬೆಳೆಸಲಿರುವ ಮೊದಲ ಅಂತಾರಾಷ್ಟ್ರೀಯ ವಿಮಾನ ಅಂದರೆ ನೀವು ನಂಬಲೇಬೇಕು. ಗಣ್ಯಾತಿಗಣ್ಯರೊಂದಿಗೆ ಬೃಹತ್ ವಿಮಾನ ಇಲ್ಲಿಗೆ ಬಂದಿಳಿಯಲಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಸಮಾಧಾನದ ಸಂಗತಿಯೆಂದರೆ ಹೊಸ ಅಂತಾರಾಷ್ಟ್ರೀಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ವಿದೇಶೀ ವಿಮಾನಗಳೂ ಇಲ್ಲಿಗೆ ಬಂದು ಹೋಗಲಿವೆ. ಆದರೆ ಇಲ್ಲಿವರೆಗೂ ಅದೇ ಇರ್ಲಿಲ್ವಲ್ಲ ಎಂಬುದೇ ಚಂಡೀಗಢ ಜನರ ಅಳಲು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications