Get Updates
Get notified of breaking news, exclusive insights, and must-see stories!

ಅಶೋಕ್ ಸಾರಿಗೆ ಖಾತೆಗೆ ಬಿತ್ತೇ ಬ್ರೇಕ್

R. Ashok loose Portfolio
ಬೆಂಗಳೂರು, ಮಾ. 25: ಗೃಹ ಸಚಿವರೂ ಆಗಿರುವ ಆರ್. ಅಶೋಕ್-ಗೆ ಸಾರಿಗೆ ಖಾತೆಯಿಂದ 'ಟಿಕೆಟ್' ಸಿಗುವ ಸಾಧ್ಯತೆಯಿದೆ. ಕೃಪೆ: ರಾಜ್ಯ ಬಿಜೆಪಿ ಪಕ್ಷದಲ್ಲಿನ ಭಿನ್ನಮತ. ಅಶೋಕ್ ಸಾರಥ್ಯದ ಕೆಎಸ್ಸಾರ್ಟಿಸಿ ಇಲಾಖೆಯು ಉತ್ತಮ ಚಾಲಕರಿಗೆ ಚಿನ್ನದ ಪದಕ ವಿತರಿಸುವ ಸಮಾರಂಭವನ್ನು ಗುರುವಾರ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ಸಾಕ್ಷಾತ್ ಅಶೋಕ್ ಎದುರೇ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ತೀರ್ಮಾನ ಪ್ರಕಟಿಸಿದ್ದಾರೆ.

ಸಾರಿಗೆ ಇಲಾಖೆ ಕುರಿತು ಮಾತನಾಡುತ್ತಿದ್ದ ಮುಖ್ಯಮಂತ್ರಿಯ ಗಮನ ದಿಢೀರನೆ, ವೇದಿಕೆಯಲ್ಲಿದ್ದ ಅಶೋಕ್ ಅವರತ್ತ ತಿರುಗಿತು. 'ಅಶೋಕ್ ಸಾರಿಗೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರಿಗೂ ಒಂದು ಗೋಲ್ಡ್ ಮೆಡಲ್ ನೀಡಬೇಕಿತ್ತು. ಜತೆಗೆ, ಅವರು ಒಪ್ಪಿದರೆ ಇಂದೇ ಇಲಾಖೆಯಿಂದ ಬೀಳ್ಕೊಡುಗೆಯನ್ನೂ ನೀಡಬಹುದಿತ್ತು' ಎಂದು ಅಶೋಕ್ ಅವರತ್ತ ಬಾಂಬ್ ಎಸೆದರು.

ತಮ್ಮ ಈ ಮಾತಿಗೆ ಇನ್ನಷ್ಟು ವಿವರಣೆಯನ್ನೂ ನೀಡಿದ ಯಡಿಯೂರಪ್ಪ, ಸಾರಿಗೆ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರನ್ನು ಇಲ್ಲಿಯೇ ಉಳಿಸಲಾಗದು. ಮೇಲಾಗಿ ಅಶೋಕ್-ಗೆ ಗೃಹ ಸಚಿವ ಸ್ಥಾನದ ಹೊಣೆಯನ್ನೂ ವಹಿಸಿದ್ದೇವೆ ಎಂಬ ಮಾರ್ಮಿಕ ಮಾತನ್ನಾಡಿದರು. ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೆ ಬ್ರೇಕ್ ಹಾಕಲು ಕಳೆದ ತಮ್ಮ ನಿವಾಸದಲ್ಲಿ ಕರೆದಿದ್ದ ಸಚಿವರು, ಶಾಸಕರ ಸಭೆಗೆ ಆರ್. ಅಶೋಕ್ ಹಾಜರಾಗಿರಲಿಲ್ಲ. ಆ ಸಂದರ್ಭದಲ್ಲಿ ಅಶೋಕ್ ವಿರುದ್ದ ಮುಖ್ಯಮಂತ್ರಿಯವರು ತಮ್ಮ ಅಸಮಾಧಾನ ಹೊರಹಾಕಿದ್ದರು. 'ಕಷ್ಟದಲ್ಲಿ ನೆರವಿಗೆ ಬರುತ್ತಾರೆ ಎಂದು ಎರಡು ಪ್ರಮುಖ ಖಾತೆಗಳನ್ನು ನೀಡಿದರೂ, ಸರಿಯಾದ ಸಮಯದಲ್ಲಿ ಕೈಕೊಟ್ಟರು' ಎಂದು ಆಪ್ತರ ಮುಂದೆ ಅಲವತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್ ಎದುರೇ ಯಡಿಯೂರಪ್ಪ ಈ ಘೋಷಣೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+