Get Updates
Get notified of breaking news, exclusive insights, and must-see stories!

ಕಂಚಿ ಶಂಕರಾಚಾರ್ಯ ಹೊಸ ಪಕ್ಷ ಉದಯ

Kanchi Sankaracharya
ಚೆನ್ನೈ, ಮಾ. 24: ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ಕಂಚಿ ಶಂಕರಮಠದ ಆಶ್ರಯದಲ್ಲಿ ತಮಿಳುನಾಡು ದೇಶೀಯ ಆಣ್ಮಿಗ ಮಕ್ಕಳ್ ಕಚ್ಚಿ (ತಮಿಳುನಾಡು ರಾಷ್ಟ್ರೀಯ ಧಾರ್ಮಿಕ ಜನರ ಪಕ್ಷ ) ಪಕ್ಷಕ್ಕೆ ಬುಧವಾರ ಚಾಲನೆ ನೀಡಿದ್ದಾರೆ. ಇದೇ ವೇಳೆ ಪಕ್ಷದ ಧ್ವಜವನ್ನು ಅನಾವಣಗೊಳಿಸುತ್ತಾ ಅವರು 'ಇದು ಕೇವಲ ಒಂದು ಪಕ್ಷವಲ್ಲ. ಬದಲಿಗೆ ಧಾರ್ಮಿಕ ಭಕ್ತಿ ಆಚರಣೆ, ನಮ್ಮನ್ನು ಆವರಿಸಿರುವ ದುಷ್ಟ ಶಕ್ತಿಗಳಿಂದ ದೂರವಾಗಲು, ಸ್ವಚ್ಛಂದ ಜೀವನ ನಿರ್ವಹಿಸುವುದಕ್ಕೆ ಇದು ಪ್ರೇರಣೆ ನೀಡಲಿದೆ' ಎಂದು ಪಕ್ಷದ ಧ್ಯೇಯೋದ್ಧೇಶಗಳನ್ನು ಸ್ಪಷ್ಟಪಡಿಸಿದರು.

ಗಮನಾರ್ಹವೆಂದರೆ ಕಂಚಿ ಪೀಠಾಧೀಶ ಜಯೇಂದ್ರ ಸರಸ್ವತಿ ಅವರು ಈ ಧಾರ್ಮಿಕ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ. ಪಕ್ಷವು ಸದ್ಯದಲ್ಲೇ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಆದರೆ ಪಕ್ಷವು ತನ್ನದೇ ಆದ ಪ್ರಣಾಳಿಕೆಗಳನ್ನು ಹೊಂದಿದೆ: ಧಾರ್ಮಿಕ ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ದೇವಸ್ಥಾನಗಳಲ್ಲಿ ಸರಕಾರಿ ಆಡಳಿತವನ್ನು ಹಿಂತೆಗೆತಕ್ಕೆ ಪಕ್ಷ ಸಂಪೂರ್ಣ ಬೆಂಬಲ ಸೂಚಿಸಿದೆ.

ಇತ್ತೀಚೆಗಷ್ಟೇ 'ಯೋಗ ಗುರು' ರಾಮದೇವ್ ಅವರು 'ರಾಜ್ ಗುರು' ಆಗಿದ್ದಾರೆ. ಸ್ವಾಮಿಜಿಗಳು ರಾಜಕೀಯ ಪ್ರವೇಶಿಸುವುದು ಹೊಸದೇನೂ ಅಲ್ಲ. ಕಂಚಿ ಶಂಕರಾಚಾರ್ಯ ಅವರು ಬಾಬಾ ರಾಮದೇವ್ ಅವರ ಹಾದಿಯಲ್ಲಿ ಹೆಜ್ಜೆಹಾಕುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಚೊ. ರಾಮಸ್ವಾಮಿ ಅವರು ಈ ವಿದ್ಯಮಾನವನ್ನು ವಿಶ್ಲೇಷಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+