ಕಂಚಿ ಶಂಕರಾಚಾರ್ಯ ಹೊಸ ಪಕ್ಷ ಉದಯ

ಗಮನಾರ್ಹವೆಂದರೆ ಕಂಚಿ ಪೀಠಾಧೀಶ ಜಯೇಂದ್ರ ಸರಸ್ವತಿ ಅವರು ಈ ಧಾರ್ಮಿಕ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ. ಪಕ್ಷವು ಸದ್ಯದಲ್ಲೇ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಆದರೆ ಪಕ್ಷವು ತನ್ನದೇ ಆದ ಪ್ರಣಾಳಿಕೆಗಳನ್ನು ಹೊಂದಿದೆ: ಧಾರ್ಮಿಕ ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ದೇವಸ್ಥಾನಗಳಲ್ಲಿ ಸರಕಾರಿ ಆಡಳಿತವನ್ನು ಹಿಂತೆಗೆತಕ್ಕೆ ಪಕ್ಷ ಸಂಪೂರ್ಣ ಬೆಂಬಲ ಸೂಚಿಸಿದೆ.
ಇತ್ತೀಚೆಗಷ್ಟೇ 'ಯೋಗ ಗುರು' ರಾಮದೇವ್ ಅವರು 'ರಾಜ್ ಗುರು' ಆಗಿದ್ದಾರೆ. ಸ್ವಾಮಿಜಿಗಳು ರಾಜಕೀಯ ಪ್ರವೇಶಿಸುವುದು ಹೊಸದೇನೂ ಅಲ್ಲ. ಕಂಚಿ ಶಂಕರಾಚಾರ್ಯ ಅವರು ಬಾಬಾ ರಾಮದೇವ್ ಅವರ ಹಾದಿಯಲ್ಲಿ ಹೆಜ್ಜೆಹಾಕುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಚೊ. ರಾಮಸ್ವಾಮಿ ಅವರು ಈ ವಿದ್ಯಮಾನವನ್ನು ವಿಶ್ಲೇಷಿಸಿದ್ದಾರೆ.












Click it and Unblock the Notifications