ಸುವರ್ಣ ಟಿವಿಗೆ ರಂಗನಾಥ್ ರಾಜೀನಾಮೆ ನಿರಾಕರಣೆ

ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ರಂಗ ರಾತ್ರಿ ನ್ಯೂಸ್ ನಲ್ಲಿ ಕಾಣಿಸಿಕೊಂಡಿಲ್ಲ. ರಂಗ ಅವರ ಜೊತೆಗೆ ಅವರ ಎಷ್ಟು ಸಹೋದ್ಯೋಗಿಗಳು ಅವರನ್ನು ಹಿಂಬಾಲಿಸುತ್ತಾರೆ ಎಂಬುದು ಗೊತ್ತಾಗಿಲ್ಲ. ರಂಗ ಅವರ ಬಗ್ಗೆ ಕಳೆದ ಕೆಲವು "ಸಮಯ"ದಿಂದ ಮ್ಯಾನೆಜ್ಮೆಂಟ್ಗೆ ಅಸಮಾಧಾನ ಇತ್ತು. ಸಮಯ ಚಾನಲ್ ಖರೀದಿಸಲು ರಂಗ ಮುಂದಾದಾಗಿನಿಂದ ಈ ಅಸಮಾದಾನ ಹೆಚ್ಚಾಗಿತ್ತು. ಆದರೆ ರಂಗ ಮಾತ್ರ ಪರದೆ ಮೇಲೆ ಮೆರೆಯುತ್ತಲೇ ಇದ್ದರು.
ರಂಗನಾಥ್ ಅವರು ಸುವರ್ಣ ತೊರೆಯುತ್ತಾರೆ. ಮುಂದಿನ ಅವರ ಯೋಜನೆಗಳಲ್ಲಿ ಬೇರೆ ಯಾವುದಾದರೂ ಟಿವಿಗೆ ಸೇರಿಕೊಳ್ಳುತ್ತಾರಂತೆ ಅಥವಾ ತಾವೇ ಟಿವಿ ವಾಹಿನಿಯನ್ನು ಖರೀದಿಸುತ್ತಾರಂತೆ ಎಂಬಂತಹ ಗಾಸಿಪ್ಪುಗಳು ಕನ್ನಡ ಪತ್ರಕರ್ತರ, ವಿಶೇಷವಾಗಿ ಟಿವಿಗಳಲ್ಲಿ ಕೆಲಸಮಾಡುವವರ ಅಂಗಳದಿಂದ ಎದ್ದೇಳುತ್ತಿತ್ತು. ಚಕಿತಗೊಳಿಸುವ ಸುದ್ದಿ ಎಂದರೆ ನಿನ್ನೆ ರಾತ್ರಿ ಈ ಗಾಳಿಮಾತು ಇಂಟರ್ನೆಟ್ಟಿನಲ್ಲೂ ತೂರಿಬಂತು.
"ರಾಜಿನಾಮೆ ಸುದ್ದಿ ಸುಳ್ಳು. ನಾನು ಈಗ ಸುವರ್ಣ ಕಚೇರಿಯಲ್ಲೇ ಇದ್ದೇನೆ. ಇದು ಕೇವಲ ವದಂತಿ" ಎಂದು ತಮ್ಮನ್ನು ಸಂಪರ್ಕಿಸಿದ ಒನ್ ಇಂಡಿಯ-ಕನ್ನಡದ ವರದಿಗಾರರಿಗೆ ರಂಗನಾಥ್ ಗುರುವಾರ ಮಧ್ಯಾನ್ಹದ ಊಟದ ವೇಳೆ ಸ್ಪಷ್ಟೀಕರಣ ನೀಡಿದರು. ಇಂಥ ಸುದ್ದಿಗಳು ಹರಡುವುದು ಏಕೆ? ಅದನ್ನು ಹರಡುವವರು ಯಾರು? ಅವರ ಉದ್ದೇಶವಾದರೂ ಏನು? ಎಂಬ ಪ್ರಶ್ನೆಗೆ ಒಮ್ಮೆ ನಕ್ಕು ಸುಮ್ಮನಾದ ರಂಗನಾಥ್, ಮಾತು ಮುಂದುವರಿಸಿ "ಸದ್ಯಕ್ಕಂತೂ ಇಲ್ಲಿದ್ದೇನೆ ಶಾಮ್" ಎಂದು ಮೊಬೈಲ್ ಸಂಭಾಷಣೆ ಮುಗಿಸಿದರು.
ಸುದ್ದಿ ಸ್ವಾರಸ್ಯಗಳು ಹೇಗಿರುತ್ತವೆಂದರೆ ನಿನ್ನೆಯೂ ಇಂಥದೊಂದು ವದಂತಿ ಏಷಿಯಾದ್ಯಂತ ಹರಡಿತ್ತು. ರೇಡಿಯೇಷನ್ ಎಫೆಕ್ಟ್ ಶುರುವಾಗುತ್ತಿದೆ, ಇದರಿಂದ ಭಾರಿ ಭಾರಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುವ ಎಸ್ಎಂಎಸ್ ಸುದ್ದಿಗಳು ಫೋನಿನಿಂದ ಫೋನಿಗೆ ತಲುಪಿ ಅನೇಕರಿಗೆ ಕಳವಳಕ್ಕೆ ಕಾರಣೀಭೂತವಾಗಿತ್ತು. ಆದರೆ, ಬುಧವಾರ ಮಧ್ಯಾನ್ಹ ಸ್ವತಃ ಬಿಬಿಸಿ ಸಂಸ್ಥೆಯೇ ಒಂದು ಹೇಳಿಕೆಯನ್ನು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿ ವದಂತಿಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಅದು ಹೀಗಿತ್ತು: BBC Disowns Radiation Text Message, Calls it Fake.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications