ಬಳ್ಳಾರಿಯಲ್ಲಿ ಮಣ್ಣಿನ ಫ್ರಿಜ್ ಭರ್ಜರಿ ಮಾರಾಟ

ಉತ್ತರ ಕರ್ನಾಟಕದ ಉರಿ ಬಿಸಿಲ ನಾಡಿನ ಜನರ ದಾಹವನ್ನು ತಣಿಸಲೆಂಬಂತೆ ಹೊರ ರಾಜ್ಯಗಳ ತಣ್ಣೀರ ಹೂಜಿಗಳು ಬೀದಿಬದಿಯಲ್ಲಿ ಬಂದು ಕುಳಿತಿವೆ. ನಮ್ಮ ಕುಂಬಾರಣ್ಣ ಮಾಡುವ ಗಡಿಗೆಗಳಿಗೆ ಈ ಆಕರ್ಷಕ ಹೂಜಿಗಳು ಭಾರೀ ಪೈಪೋಟಿ ಒಡ್ಡುತ್ತಿವೆ. ಈ ಹೂಜಿಗಳು ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಮನೆ ಮನೆಗಳಲ್ಲೂ ಕಾಣಸಿಗುತ್ತಿದ್ದು, ನೀರು ತ್ವರಿತವಾಗಿ ತಣ್ಣಗಾಗುವುದು ಇವುಗಳ ವೈಶಿಷ್ಟ್ಯ.
ಸ್ಥಳೀಯವಾಗಿ ಕುಂಬಾರಣ್ಣ ತಯಾರುಮಾಡುವ ಗಡಿಗೆ (ಮಡಕೆ)ಗಳಿಗೆ ಕೇವಲ ಜೇಡಿ ಮಣ್ಣನ್ನು ಮಾತ್ರ ಬಳಕೆ ಮಾಡಲಾಗುತ್ತದೆ. ಆದರೆ, ಈ ಹೊರ ರಾಜ್ಯಗಳ ಹೂಜಿಗಳ ತಯಾರಿಕೆಗೆ ಜೇಡಿ ಮಣ್ಣು ಸೇರಿ ಮೂರು ರೀತಿಯ ಮಣ್ಣುಗಳನ್ನು ಬಳಕೆ ಮಾಡಲಾಗುತ್ತದೆ. ಈ ಮೂರು ಮಣ್ಣುಗಳಲ್ಲಿ ಒಂದು ರೀತಿಯ ಮಣ್ಣು ನೀರನ್ನು ತ್ವರಿತವಾಗಿ ತಣ್ಣಗಾಗಿಸುತ್ತದೆ.
ಅಷ್ಟೇ ಅಲ್ಲ, ನಮ್ಮ ಕುಂಬಾರಣ್ಣನ ಗಡಿಗೆಗಳಲ್ಲಿ ಆಕರ್ಷಣೆ ಕಡಿಮೆ. ಕೌಶಲ್ಯವೂ ಅಪರೂಪ. ಜೇಡಿ ಮಣ್ಣು ಸುಟ್ಟಾಗ ಕಪ್ಪಾಗಿ, ಕೆಲವೊಮ್ಮೆ ಕಚ್ಚು ಕಚ್ಚಾಗಿ ಇರುತ್ತವೆ. ಕುಂಬಾರಣ್ಣನ ಗಡಿಗೆ, ಹೂಜಿ, ಮಡಕೆಗಳು ಎಷ್ಟೇ ಉತ್ತಮವಾಗಿದ್ದರೂ ಕೂಡ ಬಡತನವನ್ನೇ ಸೂಚಿಸುತ್ತವೆ. ಆದರೆ, ಹೊರ ರಾಜ್ಯಗಳ ಈ ಹೂಜಿ, ಗಡಿಕೆ ಮತ್ತು ಮಡಕೆಗಳು ಶ್ರೀಮಂತಿಕೆಯನ್ನು ಸಂಕೇತಿಸುತ್ತಿವೆ.
ಇವುಗಳ ಮೇಲಿನ ಚಿತ್ತಾರಗಳು ಕುಸರಿ ಕಲೆಯನ್ನು, ನೈಪುಣ್ಯವನ್ನು ತೋರಿ, ಸಾಮಾನ್ಯ ಗಡಿಗೆಗಳಿಗಿಂತಲೂ ಹೆಚ್ಚಿನ ಬೆಲೆ ಪಡೆಯುತ್ತವೆ. ಕಾರಣ ನಮ್ಮ ರಸ್ತೆಗಳಲ್ಲಿ ದಾರಿಹೋಕರೆಲ್ಲರ ಗಮನ ಸೆಳೆಯುತ್ತವೆ. ನೀರು ಸರಾಗವಾಗಿ ಇಳಿಯಲಿಕ್ಕಾಗಿ ಟ್ಯಾಪ್ (ಕೊಳಾಯಿ) ಅಳವಡಿಸಿರುವ ಹೊರ ರಾಜ್ಯದ ತಯಾರಕ, ನೀರು ಪಡೆದು ಕುಡಿಯುವಲ್ಲಿ ನೈರ್ಮಲ್ಯತೆ, ಸ್ವಚ್ಛತೆ ಕಾಪಾಡಲು ಪ್ರಯತ್ನಿಸಿದ್ದಾರೆ. ನಮ್ಮೂರ ಕುಂಬಾರಣ್ಣನ ತಯಾರಿಕೆಯಲ್ಲಿ ಪ್ರಸ್ತುತ ಇವುಗಳ ಅಂಶ ಕಾಣುತ್ತಿಲ್ಲ.
ಹೊರ ರಾಜ್ಯಗಳ ಗಡಿಗೆ, ಹೂಜಿ, ಮಡಕೆಗಳನ್ನು ತಯಾರಿಸುವ ಕುಟುಂಬಗಳ ಸದಸ್ಯರಾದ ರಾಮ್ಲಾಲ್ ಜೀ (45) "ಬೇಸಿಕೆ ಹತ್ತಿರಕ್ಕೆ ಬರುತ್ತಿದ್ದಂತೆಯೇ ನಮ್ಮ ಕುಟುಂಬಗಳು ವಿವಿಧ ರಾಜ್ಯಗಳಿಗೆ ವಲಸೆ ಬಂದು ರಸ್ತೆಗಳ ಬದಿಯಲ್ಲಿ, ದಾರಿಹೋಕರ ಕಣ್ಣಿಗೆ ಸುಲಭವಾಗಿ ಬೀಳುವಂತೆ ಇರಿಸಿ ಮಾರಾಟ ಮಾಡುತ್ತೇವೆ. ಒಳ್ಳೆಯ ದುಡಿಮೆ. ನಮ್ಮ ಆದಾಯ ಬಿಸಿಲನ್ನೇ ಅವಲಂಬಿಸಿರುತ್ತದೆ. ಆದರೆ, ಇವುಗಳನ್ನು ಸಾಗಿಸುವುದು, ಸಂರಕ್ಷಿಸುವುದೇ ನಮ್ಮ ದೊಡ್ಡ ಸವಾಲು" ಎನ್ನುತ್ತಾರೆ.
ನಮ್ಮಲ್ಲಿ ಇವುಗಳನ್ನು ಕೆಲವೆಡೆ ಯಂತ್ರಗಳು ಸಿದ್ಧಪಡಿಸುತ್ತವೆ. ಇನ್ನೂ ಕೆಲವೆಡೆ ದೊಡ್ಡ ಪ್ರಮಾಣದಲ್ಲಿ ಕೂಲಿಗಳು, ಯಂತ್ರಗಳು ಒಟ್ಟಾಗಿ ಸೇರಿ ತಯಾರಿಸುತ್ತೇವೆ. ವರ್ಷದ 6 - 7 ತಿಂಗಳು ಉತ್ಪಾದನೆಯಲ್ಲಿ ತೊಡಗುತ್ತೇವೆ. ಬೇಸಿಗೆಯಲ್ಲಿ ಮಾರಾಟ ಮಾಡುತ್ತೇವೆ. ಸಾಮಾನ್ಯ ಸಂದರ್ಭಗಳಲ್ಲಿ ಶ್ರೀಮಂತಿಕೆಯನ್ನು ಸೂಚಿಸುವ ಮಣ್ಣಿನ ಅಲಂಕಾರಿಕ ವಸ್ತು, ಆಟಿಕೆ, ಇನ್ನಿತರೆಗಳನ್ನು ಸಿದ್ಧಪಡಿಸುತ್ತೇವೆ. ಆ ಮಾರುಕಟ್ಟೆಯೇ ಪ್ರತ್ಯೇಕ, ಈ ನೀರಿನ ಮಾರುಕಟ್ಟೆಯೇ ಪ್ರತ್ಯೇಕ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗ್ರಾಹಕ ಜಿ. ಸುರೇಶ್, ಎಲ್ಲಿಂದಲೋ ಬಂದು ಹೂಜಿಗಳನ್ನು ಮಾರಿ ಬದುಕುತ್ತಾರೆ. ನಮ್ಮ ಕುಂಬಾರರೂ ಕೂಡ ವೃತ್ತಿಯಲ್ಲಿ ನೈಪುಣ್ಯತೆ, ಕೌಶಲ್ಯತೆ ಸಾಧಿಸಿದಲ್ಲಿ ಅವರ ಬದುಕು ಸುಧಾರಣೆ ಆಗಲಿದೆ. ಇಲ್ಲಿ ಹಣ ಮುಖ್ಯ ಅಲ್ಲ. ಪ್ರತಿಯೊಬ್ಬರ ಬದುಕು, ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕು ಎನ್ನುವುದು ಗುರಿ ಆಗಬೇಕು' ಎಂದು ವಾದ ಮಂಡಿಸುತ್ತಾರೆ.
ಒಟ್ಟಾರೆ 40 - 44 ಡಿಗ್ರಿ ಸೆಲ್ಸಿಯಸ್ ತಾಪ ತಲುಪುವ ಉತ್ತರ ಕರ್ನಾಟಕದ ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಬೀದರ್ ಸೇರಿ ಇನ್ನಿತರೆ ಜಿಲ್ಲೆಗಳಲ್ಲಿ ಈ ಹೊರನಾಡ ತಣ್ಣೀರ ಹೂಜಿಗಳು ಜನರ ತಾಪವನ್ನು ಕಡಿಮೆ ಮಾಡುತ್ತಿವೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications