ಕೇಂದ್ರ ಬಜೆಟ್ಟಿನಲ್ಲಿ ಈ ಬಾರಿ ಮಹಿಳೆಯರಿಗೆ ಸುಣ್ಣ

ಪ್ರತಿ ವರ್ಷ ಮಹಿಳೆಯರಿಗೆ, ಪುರುಷರಿಗಿಂತ ಒಂದು ಕೈ ಮೇಲೆಯೇ ಎಂಬಂತೆ ತೆರಿಗೆ ಮಿತಿಯನ್ನು ಏರಿಸಿ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿತ್ತು ಕೇಂದ್ರ ಸರಕಾರ. ಈ ಬಾರಿಯೂ ತೆರಿಗೆ ಮಿತಿಯನ್ನು ಏರಿಸಲಾಗುತ್ತದೆ ಎಂದು ಕಾದಿದ್ದ ಮಹಿಳೆಯರಿಗೆ ಆಘಾತ ಕಾದಿತ್ತು. ಆದಾಯ ತೆರಿಗೆ ಮಿತಿಯನ್ನು 1.9 ಲಕ್ಷ ರು.ಗೆ ನಿಗದಿಪಡಿಸಿದ್ದಾರೆ.
ಪುರುಷ ವಲಯದಲ್ಲಿ ಕೂಡ ಆದಾಯ ತೆರಿಗೆ ಮಿತಿಯನ್ನು 1.6 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ನಮಗೂ ಬೇಡ, ನಿಮಗೂ ಬೇಡ ಎಂದು ಎರಡರ ನಡುವಿನ ಅಂಕಿ 1.8 ಲಕ್ಷ ರು.ಗೆ ನಿಗದಿಪಡಿಸಿದ್ದಾರೆ. ಇದರಿಂದ ಕನಿಷ್ಠ 2 ಸಾವಿರ ರು.ಯಷ್ಟು ಆದಾಯದಲ್ಲಿ ಉಳಿತಾಯ ಮಾಡಲು ಪುರುಷರಿಗೆ ಅವಕಾಶ ಕಲ್ಪಿಸಿದ್ದಾರೆ ಪ್ರಣಬ್.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಜಯನಗರ ಎರಡನೇ ಬ್ಲಾಕ್ ನ ಕಚೇರಿಯೊಂದರಲ್ಲಿ ಕೆಲಸದಲ್ಲಿರುವ ರೂಪಾ ಅವರು, ಇದು ತೀರಾ ಅನ್ಯಾಯ. ಪುರುಷರು ಮತ್ತು ಮಹಿಳೆಯರ ನಡುವಿನ ಆದಾಯ ತೆರಿಗೆ ಮಿತಿಯ ಅನುಪಾತ ಸರಿಸಮನಾಗಿರಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರುಷರಿಗೆ 20 ಸಾವಿರ ರು. ಏರಿಸಿದಂತೆ ಮಹಿಳೆಯರಿಗೂ 20 ಸಾವಿರ ರು.ನಷ್ಟು ಏರಿಸಬೇಕಾಗಿತ್ತು ಎಂಬುದು ಅವರ ಅಭಿಪ್ರಾಯ.
ಆದರೆ, ಸಾಫ್ಟ್ ಇಂಜಿನಿಯರಾಗಿ ಕೆಲಸದಲ್ಲಿರುವ ಮಂಜುನಾಥ್ ನಾಯ್ಕ್ ಅವರ ಅಭಿಪ್ರಾಯವೇ ಬೇರೆ. ಎಲ್ಲದರಲ್ಲೂ ಸರಿಸಮ ಇರಬೇಕೆಂದು ಬಯಸುವ ಮಹಿಳೆಯರಿಗೆ ಆದಾಯ ತೆರಿಗೆ ಮಿತಿಯಲ್ಲಿ ಏಕೆ ಹೆಚ್ಚಿಸಬೇಕು. ಅವರ ಆದಾಯ ತೆರಿಗೆ ಮಿತಿಯನ್ನೂ 1.9 ಲಕ್ಷ ರು.ನಿಂದ 1.8 ಲಕ್ಷ ರು.ಗೆ ಇಳಿಸಬೇಕು ಎಂಬುದು ಅವರ ಖಚಿತ ನುಡಿ.
ಇದಲ್ಲದೆ ಮತ್ತೊಂದು ಪೇಚಿನ ಸಂಗತಿಯೆಂದರೆ, ಬ್ರಾಂಡೆಡ್ ಚಿನ್ನಾಭರಣಗಳು ತುಟ್ಟಿಯಾಗುತ್ತಿರುವುದು. ಮಹಿಳೆಯ ಅಚ್ಚುಮೆಚ್ಚಿನ ಚಿನ್ನ ಈಗಾಗಲೆ ಆಕಾಶಕ್ಕೆ ಮುಖಮಾಡಿ ನಿಂತಿದೆ. ಹೆಣ್ಣುಗಳನ್ನು ಹೆತ್ತ ಪಾಲಕರ ಗೋಳಾಟವಂತೂ ಕೇಳುವುದೇ ಬೇಡ. ಪರಿಸ್ಥಿತಿ ಹೀಗಿರುವಾಗ, ಗಾಯದ ಮೇಲೆ ಬರೆ ಎಂಬಂತೆ ಮಹಿಳೆಯರ ಆದಾಯ ತೆರಿಗೆ ಮಿತಿಯನ್ನೂ ಏರಿಸದಿರುವುದು.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications