ತಲೆಮರೆಸಿಕೊಂಡ ಆರೋಪಿ ಜಮೀರ್ ಬಂಧನ ಸನ್ನಿಹಿತ

ಚಾಮರಾಜಪೇಟೆ ಶಾಸಕ ಹಾಗೂ ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್, 3ನೇ ಬ್ಲಾಕ್ನ ನಂ. 607ರ ನಿವಾಸಿಯಾದ ಬಿ.ಝಡ್. ಜಮೀರ್ ಅಹಮದ್ ಖಾನ್, ಅವರ ಬೆಂಬಲಿಗ ಹಾಗೂ ಇತ್ತೀಚೆಗೆ ಕೊಲೆಯಾದ ಪಾಲಿಕೆ ಸದಸ್ಯ ದಿವಾನ್ ಅಲಿ ಸೇರಿ ಒಟ್ಟು 13 ಮಂದಿ ಈ ದರೋಡೆ ನಡೆಸಿದ್ದರು.
ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಆರೋಪಪಟ್ಟಿಯಲ್ಲಿ ಜಮೀರ್ರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ನಮೂದಿಸಿರುವುದರಿಂದ ನ್ಯಾಯಾಲಯ ತಕ್ಷಣ ವಾರಂಟ್ ಜಾರಿಗೊಳಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಜಮೀರ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಕ್ಷಣಕ್ಕೆ ವಾಸ್ತವ್ಯ ಹೂಡುವುದು ಅನಿವಾರ್ಯವಾಗಲಿದೆ.
ಏನಿದು ಪ್ರಕರಣ: ಅಕ್ಕಿ ವ್ಯಾಪಾರಿ ಜಿಯಾವುಲ್ಲಾ ಖಾನ್ ಗೋರಿ ಎಂಬವರು ಅ. 10ರಂದು ಚನ್ನಪಟ್ಟಣದಿಂದ ಬೆಂಗಳೂರಿಗೆ ಇನೋವಾ ಕಾರಿನಲ್ಲಿ ಬರುತ್ತಿದ್ದರು. ಮತ್ತೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸಿದ ಆರೋಪಿಗಳು ಕೆಂಗೇರಿ ಬಳಿಯ ಜಯರಾಮ್ದಾಸ್ ಕೈಗಾರಿಕೆ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಜಿಯಾವುಲ್ಲಾ ಅವರನ್ನು ಬೆದರಿಸಿದ್ದ ಆರೋಪಿಗಳು 50 ಲಕ್ಷ ರು. ದರೋಡೆ ಮಾಡಿ ಪರಾರಿಯಾಗಿದ್ದರು.
ಜಿಯಾವುಲ್ಲಾ ಕೆಲವು ಆರೋಪಿಗಳನ್ನು ಗುರುತಿಸಿದ್ದರು. ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ದರೋಡೆಯ ಹಿಂದೆ ಜಮೀರ್ ಮತ್ತು ದಿವಾನ್ ಅಲಿಯ ಪಾತ್ರ ಇರುವುದನ್ನು ಬಂಧಿತರು ಪೊಲೀಸರಿಗೆ ಬಹಿರಂಗಪಡಿಸಿದ್ದರು. ಆರೋಪಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಿರುವುದು ಗೊತ್ತಾಗುತ್ತಿದ್ದಂತೆ ನ್ಯಾಯಾಲಯದಿಂದ ಅಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ದರೋಡೆ ಬಳಿಕ ಆರೋಪಿಗಳು ಜಮೀರ್ಗೆ ಫೋನ್ ಮಾಡಿ 'ವಹಿಸಿದ್ದ ಕೆಲಸ ಸಕ್ಸಸ್ ಆಗಿದೆ' ಎಂದು ಹೇಳಿದ್ದರು. ಜತೆಗೆ ಇನ್ನೂ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೇರೆಯೇ ಹಿನ್ನೆಲೆ ! : ಮೂಲಗಳ ಪ್ರಕಾರ ಪ್ರಕರಣದ ಹಿನ್ನೆಲೆಯೇ ಬೇರೆ ಇದೆ. ಘಟನೆ ನಡೆದಿದ್ದು ಬಿಜೆಪಿ ಸರಕಾರದ ವಿರುದ್ಧ ಬಂಡೆದ್ದ ಶಾಸಕರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಗೋವಾದ ಹೋಟೆಲ್ನಲ್ಲಿ ಇರಿಸಿದ್ದ ಸಂದರ್ಭದಲ್ಲಿ. ಆಗ ಅಧಿಕಾರ ಉಳಿಸಿಕೊಳ್ಳಲು ಸರಕಾರ ಆಪರೇಷನ್ ಕಮಲಕ್ಕೆ ಕೈಹಾಕಿತ್ತು. ಇದಕ್ಕೆ ಮೊದಲ ಬಲಿ ಚನ್ನಪಟ್ಟಣದ ಶಾಸಕ ಎಂ.ಸಿ. ಅಶ್ವತ್ಥ್. ಸಚಿವರೊಬ್ಬರು ಇದಕ್ಕಾಗಿ 2.5 ಕೋಟಿ ರು. ಕಪ್ಪು ಹಣವನ್ನು ಕಳಿಸಿಕೊಟ್ಟಿದ್ದರು.
ಈ ಹಣವನ್ನು ಅಶ್ವತ್ಥ್ ಅವರ ಆಪ್ತ ಜಿಯಾವುಲ್ಲಾ ಇನೋವಾದಲ್ಲಿ ತೆಗೆದುಕೊಂಡು ವಿಜಯನಗರದಲ್ಲಿರುವ ಮನೆಗೆ ಬರುತ್ತಿರುವ ಮಾಹಿತಿಯನ್ನು ಫರೀದ್ ಖಾನ್, ಶಾಸಕ ಜಮೀರ್ಗೆ ರವಾನಿಸಿದ್ದ. ಜಮೀರ್ ಮೊಬೈಲ್ ಮೂಲಕ ಅಲಿಗೆ ಕರೆ ಮಾಡಿ ರೂಪಿಸಿದ ಸಂಚಿನಿಂದ 2.5 ಕೋಟಿ ರು. ಅಪಹರಿಸಲಾಗಿತ್ತು. ಆದರೆ ದೂರಿನಲ್ಲಿ ಇದ್ಯಾವ ಅಂಶವೂ ಇಲ್ಲ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications