Get Updates
Get notified of breaking news, exclusive insights, and must-see stories!

ತಲೆಮರೆಸಿಕೊಂಡ ಆರೋಪಿ ಜಮೀರ್ ಬಂಧನ ಸನ್ನಿಹಿತ

zameer ahmed
ಬೆಂಗಳೂರು, ಫೆ. 10: ಕೆಂಗೇರಿ ಸಮೀಪ 2010ರ ಅಕ್ಟೋಬರ್‌ನಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಜೆಡಿಎಸ್‌ನ ಹಾಲಿ ಶಾಸಕ ಜಮೀರ್ ಅಹಮದ್ ಖಾನ್‌ರನ್ನು 13ನೇ ಆರೋಪಿ ಎಂದು ಪರಿಗಣಿಸಿರುವ ಪೊಲೀಸರು, 3ನೇ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ 45ಕ್ಕೂ ಹೆಚ್ಚು ಸಾಕ್ಷ್ಯಗಳು ಲಭ್ಯವಾಗಿವೆ. ಐಪಿಸಿ ಸೆಕ್ಷನ್ 395, 120ಬಿ ಮತ್ತು 109 ಅನುಸಾರ ಅವರನ್ನು ಆರೋಪಿ ಎಂದು ಪರಿಗಣಿಸಲಾಗಿದೆ.

ಚಾಮರಾಜಪೇಟೆ ಶಾಸಕ ಹಾಗೂ ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್, 3ನೇ ಬ್ಲಾಕ್‌ನ ನಂ. 607ರ ನಿವಾಸಿಯಾದ ಬಿ.ಝಡ್. ಜಮೀರ್ ಅಹಮದ್ ಖಾನ್, ಅವರ ಬೆಂಬಲಿಗ ಹಾಗೂ ಇತ್ತೀಚೆಗೆ ಕೊಲೆಯಾದ ಪಾಲಿಕೆ ಸದಸ್ಯ ದಿವಾನ್ ಅಲಿ ಸೇರಿ ಒಟ್ಟು 13 ಮಂದಿ ಈ ದರೋಡೆ ನಡೆಸಿದ್ದರು.

ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಆರೋಪಪಟ್ಟಿಯಲ್ಲಿ ಜಮೀರ್‌ರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ನಮೂದಿಸಿರುವುದರಿಂದ ನ್ಯಾಯಾಲಯ ತಕ್ಷಣ ವಾರಂಟ್ ಜಾರಿಗೊಳಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಜಮೀರ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಕ್ಷಣಕ್ಕೆ ವಾಸ್ತವ್ಯ ಹೂಡುವುದು ಅನಿವಾರ್ಯವಾಗಲಿದೆ.

ಏನಿದು ಪ್ರಕರಣ: ಅಕ್ಕಿ ವ್ಯಾಪಾರಿ ಜಿಯಾವುಲ್ಲಾ ಖಾನ್ ಗೋರಿ ಎಂಬವರು ಅ. 10ರಂದು ಚನ್ನಪಟ್ಟಣದಿಂದ ಬೆಂಗಳೂರಿಗೆ ಇನೋವಾ ಕಾರಿನಲ್ಲಿ ಬರುತ್ತಿದ್ದರು. ಮತ್ತೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸಿದ ಆರೋಪಿಗಳು ಕೆಂಗೇರಿ ಬಳಿಯ ಜಯರಾಮ್‌ದಾಸ್ ಕೈಗಾರಿಕೆ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಜಿಯಾವುಲ್ಲಾ ಅವರನ್ನು ಬೆದರಿಸಿದ್ದ ಆರೋಪಿಗಳು 50 ಲಕ್ಷ ರು. ದರೋಡೆ ಮಾಡಿ ಪರಾರಿಯಾಗಿದ್ದರು.

ಜಿಯಾವುಲ್ಲಾ ಕೆಲವು ಆರೋಪಿಗಳನ್ನು ಗುರುತಿಸಿದ್ದರು. ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ದರೋಡೆಯ ಹಿಂದೆ ಜಮೀರ್ ಮತ್ತು ದಿವಾನ್ ಅಲಿಯ ಪಾತ್ರ ಇರುವುದನ್ನು ಬಂಧಿತರು ಪೊಲೀಸರಿಗೆ ಬಹಿರಂಗಪಡಿಸಿದ್ದರು. ಆರೋಪಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಿರುವುದು ಗೊತ್ತಾಗುತ್ತಿದ್ದಂತೆ ನ್ಯಾಯಾಲಯದಿಂದ ಅಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ದರೋಡೆ ಬಳಿಕ ಆರೋಪಿಗಳು ಜಮೀರ್‌ಗೆ ಫೋನ್ ಮಾಡಿ 'ವಹಿಸಿದ್ದ ಕೆಲಸ ಸಕ್ಸಸ್ ಆಗಿದೆ' ಎಂದು ಹೇಳಿದ್ದರು. ಜತೆಗೆ ಇನ್ನೂ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇರೆಯೇ ಹಿನ್ನೆಲೆ ! :
ಮೂಲಗಳ ಪ್ರಕಾರ ಪ್ರಕರಣದ ಹಿನ್ನೆಲೆಯೇ ಬೇರೆ ಇದೆ. ಘಟನೆ ನಡೆದಿದ್ದು ಬಿಜೆಪಿ ಸರಕಾರದ ವಿರುದ್ಧ ಬಂಡೆದ್ದ ಶಾಸಕರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಗೋವಾದ ಹೋಟೆಲ್‌ನಲ್ಲಿ ಇರಿಸಿದ್ದ ಸಂದರ್ಭದಲ್ಲಿ. ಆಗ ಅಧಿಕಾರ ಉಳಿಸಿಕೊಳ್ಳಲು ಸರಕಾರ ಆಪರೇಷನ್ ಕಮಲಕ್ಕೆ ಕೈಹಾಕಿತ್ತು. ಇದಕ್ಕೆ ಮೊದಲ ಬಲಿ ಚನ್ನಪಟ್ಟಣದ ಶಾಸಕ ಎಂ.ಸಿ. ಅಶ್ವತ್ಥ್. ಸಚಿವರೊಬ್ಬರು ಇದಕ್ಕಾಗಿ 2.5 ಕೋಟಿ ರು. ಕಪ್ಪು ಹಣವನ್ನು ಕಳಿಸಿಕೊಟ್ಟಿದ್ದರು.

ಈ ಹಣವನ್ನು ಅಶ್ವತ್ಥ್ ಅವರ ಆಪ್ತ ಜಿಯಾವುಲ್ಲಾ ಇನೋವಾದಲ್ಲಿ ತೆಗೆದುಕೊಂಡು ವಿಜಯನಗರದಲ್ಲಿರುವ ಮನೆಗೆ ಬರುತ್ತಿರುವ ಮಾಹಿತಿಯನ್ನು ಫರೀದ್ ಖಾನ್, ಶಾಸಕ ಜಮೀರ್‌ಗೆ ರವಾನಿಸಿದ್ದ. ಜಮೀರ್ ಮೊಬೈಲ್ ಮೂಲಕ ಅಲಿಗೆ ಕರೆ ಮಾಡಿ ರೂಪಿಸಿದ ಸಂಚಿನಿಂದ 2.5 ಕೋಟಿ ರು. ಅಪಹರಿಸಲಾಗಿತ್ತು. ಆದರೆ ದೂರಿನಲ್ಲಿ ಇದ್ಯಾವ ಅಂಶವೂ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+