ಕಂಬಿಯ ಹಿಂದೆ 'ಮಾಗಡಿ ಮಂದಾರ' ಸೃಷ್ಟಿಕರ್ತ

ಘಟನೆಯ ವಿವರ : ಮಾಗಡಿ ಪಟ್ಟಣದಿಂದ ಮೂರು ಕಿಮೀ ದೂರದಲ್ಲಿರುವ ಉಡುವೇಗೆರೆಯ ಶಾಲಿನಿ(ಹೆಸರು ಬದಲಿಸಲಾಗಿದೆ) ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಶಾಲಿನಿಯ ಪಕ್ಕದ ಊರು ನೆಸೆಪಾಳ್ಯದ ರವಿ ಅಲಿಯಾಸ್ ರಂಗನಾಥ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದವನು. ರಂಗನಾಥನ ಪ್ರೀತಿಯ ಸೆಳೆತಕ್ಕೊಳಗಾದ ಶಾಲಿನಿ ಕಳೆದ 6 ತಿಂಗಳಿನಿಂದ ಪ್ರೀತಿ ಪ್ರೇಮ ಅಂತ ಕಾಲ ಕಳೆದಿದ್ದಾಳೆ. ಪ್ರೀತಿಯ ಹೆಸರಲ್ಲಿ ಸಾಕಷ್ಟು ಸಲುಗೆ ಬೆಳೆಸಿಕೊಂಡ ರವಿ ಶಾಲಿನಿಯನ್ನ ಸಾಕಷ್ಟು ಬಾರಿ ದೈಹಿಕವಾಗಿ ಬಳಸಿಕೊಂಡಿದ್ದಾನೆಂದು ಹೇಳಲಾಗಿದೆ (ರವಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದಂತೆ).
ಕಳೆದ 40 ದಿನಗಳ ಹಿಂದೆಯೇ ಶಾಲಿನಿಯ ಮನೆಯವರು ಯಾರು ಇಲ್ಲದ ಸಂದರ್ಭದಲ್ಲಿ ಶಾಲಿನಿಯ ಮನೆಯ ಹಿಂದೆಯ ತೋಟವೊಂದರಲ್ಲಿ ಶಾಲಿನಿಯನ್ನು ವಿವಸ್ತ್ರಗೊಳಿಸಿದ ರವಿ ಅಲಿಯಾಸ್ ರಂಗನಾಥ ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದಾನೆ. ನಂತರ ತನ್ನ ಸ್ನೇಹಿತರ ಮೊಬೈಲ್ಗಳಿಗೂ ಬ್ಲೂಟೂಥ್ ಮುಖಾಂತರ ವರ್ಗಾಯಿಸಿ ವಿಕೃತ ಆನಂದವನ್ನು ಅನುಭವಿಸಿದ್ದಾನೆ.
"ಮೈಸೂರು ಮಲ್ಲಿಗೆ"ಯ ರೀತಿಯಲ್ಲಿ "ಮಾಗಡಿ ಮಂದಾರ" ಹೆಸರಲ್ಲಿ ಮಾಗಡಿ, ರಾಮನಗರ, ಕುಣಿಗಲ್, ಬೆಂಗಳೂರು ಮತ್ತಿತರೆಡೆಗಳಲ್ಲಿ ಈ ದೃಶ್ಯಾವಳಿಗಳು ಮೊಬೈಲ್ನಿಂದ ಮೊಬೈಲ್ಗೆ ಹರಡಿ ಭಾರೀ ಸುದ್ದಿಯನ್ನು ಮಾಡಿದವು. ಈ ಸಂದರ್ಭದಲ್ಲಿ ಶಾಲಿನಿಯ ಹೆತ್ತವರಿಗೆ ವಿಷಯ ತಿಳಿದಾಕ್ಷಣ ಮಾಗಡಿ ಪೊಲೀಸ್ ಠಾಣೆಗೆ ಕರೆತಂದು ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ? : ಶಾಲಿನಿಯೇ ಖುದ್ದು ಪೊಲೀಸರಿಗೆ ರವಿ ಅಲಿಯಾಸ್ ರಂಗನಾಥ್ ಮತ್ತು ಮಂಜ ಎಂಬುವವನ ವಿರುದ್ಧ ದೂರು ನೀಡಿದ್ದಾಳೆ. 'ರವಿ ಮೊದಲಿಗೆ ನನಗೆ ಚಾಕು ಚೂರಿ ತೋರಿಸಿ ಯಾರಿಗೂ ಹೇಳದಂತೆ ಬೆದರಿಸಿ ಬೆತ್ತಲು ಗೊಳಿಸಿ ಮೊಬೈಲ್ನಿಂದ ಚಿತ್ರೀಕರಣ ಮಾಡಿದ್ದಾನೆ. ನಾನು ರವಿಯನ್ನು ಪ್ರೀತಿ ಮಾಡೇ ಇಲ್ಲ. ನಾನು ಅವನಿಗೆ ಫೋನ್ ಕೂಡ ಮಾಡಿಲ್ಲ. ರವಿ ಚಿತ್ರೀಕರಣ ಮಾಡಿದ್ದನ್ನು ಮಂಜ ಎಂಬುವವನು ಮೊಬೈಲ್ನಿಂದ ಮೊಬೈಲ್ಗೆ ವರ್ಗಾಯಿಸಿ ನಾನು ಮತ್ತು ನನ್ನ ಕುಟುಂಬದವರು ತಲೆ ಎತ್ತದಂತೆ ಮಾಡಿದ್ದಾರೆ" ಎಂದು ದೂರು ನೀಡಿದ್ದಾಳೆ.
ರವಿ ಹೇಳಿದ್ದು : "ನಾನು ಮತ್ತು ಶಾಲಿನಿ ಪ್ರೀತಿ ಮಾಡ್ತಿದ್ವಿ. ಗಂಟೆಗಟ್ಟಲೆ ನನ್ನ ಮೊಬೈಲ್ಗೆ ಫೋನ್ ಮಾಡಿ ಮಾತಾಡ್ತಿದ್ದಳು. ಅವಳು ಹೇಳಿದ ಹಾಗೇ ನಾನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದು ಸತ್ಯ. ನಾನು ಮಾಡಿದ ತಪ್ಪಿಗೆ ಬೇಕಾದ್ರೆ ಮದುವೆ ಆಗಲಿಕ್ಕೆ ಸಿದ್ಧವಾಗಿದ್ದೀನಿ" ಎಂದು ಪೊಲೀಸರೆದುರು ವಿಚಾರಣೆ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾನೆ.
ಮಾಲೆ ತೊಟ್ಟಿದ್ದ ರವಿ : ಮಾಡೋದೆಲ್ಲಾ ಅನಾಚಾರ ಮನೆಮುಂದೆ ಬೃಂದಾವನ ಎಂಬಂತೆ ರವಿ ಮಾಡಬಾರದ ಕೆಲಸ ಮಾಡಿ ಮಾಲೆ ತೊಟ್ಟು ಸ್ವಾಮಿ ಶರಣಂ ಅಯ್ಯಪ್ಪ ಎನ್ನುತ್ತಾ ಶಬರಮಲೆಗೆ ಹೊರಡಲು ಸಿದ್ಧನಾಗಿದ್ದ. ಅಷ್ಟರಲ್ಲಿ ರವಿಯ ಅನಾಚಾರದ ವಿಚಾರ ತಿಳಿದ ಪೊಲೀಸರು ರವಿ ಮತ್ತು ಮಂಜ ತೊಟ್ಟಿದ್ದ ಮಾಲೆಯನ್ನ ಬಿಚ್ಚಿಸಿ ಕೇಸು ದಾಖಲಿಸಿ ಕಂಬಿಎಣಿಸಲು ಕಳುಹಿಸಿಕೊಟ್ಟಿದ್ದಾರೆ. [ಎಮ್ಎಮ್ಎಸ್]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications