ಕಂಬಿಯ ಹಿಂದೆ 'ಮಾಗಡಿ ಮಂದಾರ' ಸೃಷ್ಟಿಕರ್ತ

ಘಟನೆಯ ವಿವರ : ಮಾಗಡಿ ಪಟ್ಟಣದಿಂದ ಮೂರು ಕಿಮೀ ದೂರದಲ್ಲಿರುವ ಉಡುವೇಗೆರೆಯ ಶಾಲಿನಿ(ಹೆಸರು ಬದಲಿಸಲಾಗಿದೆ) ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಶಾಲಿನಿಯ ಪಕ್ಕದ ಊರು ನೆಸೆಪಾಳ್ಯದ ರವಿ ಅಲಿಯಾಸ್ ರಂಗನಾಥ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದವನು. ರಂಗನಾಥನ ಪ್ರೀತಿಯ ಸೆಳೆತಕ್ಕೊಳಗಾದ ಶಾಲಿನಿ ಕಳೆದ 6 ತಿಂಗಳಿನಿಂದ ಪ್ರೀತಿ ಪ್ರೇಮ ಅಂತ ಕಾಲ ಕಳೆದಿದ್ದಾಳೆ. ಪ್ರೀತಿಯ ಹೆಸರಲ್ಲಿ ಸಾಕಷ್ಟು ಸಲುಗೆ ಬೆಳೆಸಿಕೊಂಡ ರವಿ ಶಾಲಿನಿಯನ್ನ ಸಾಕಷ್ಟು ಬಾರಿ ದೈಹಿಕವಾಗಿ ಬಳಸಿಕೊಂಡಿದ್ದಾನೆಂದು ಹೇಳಲಾಗಿದೆ (ರವಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದಂತೆ).
ಕಳೆದ 40 ದಿನಗಳ ಹಿಂದೆಯೇ ಶಾಲಿನಿಯ ಮನೆಯವರು ಯಾರು ಇಲ್ಲದ ಸಂದರ್ಭದಲ್ಲಿ ಶಾಲಿನಿಯ ಮನೆಯ ಹಿಂದೆಯ ತೋಟವೊಂದರಲ್ಲಿ ಶಾಲಿನಿಯನ್ನು ವಿವಸ್ತ್ರಗೊಳಿಸಿದ ರವಿ ಅಲಿಯಾಸ್ ರಂಗನಾಥ ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದಾನೆ. ನಂತರ ತನ್ನ ಸ್ನೇಹಿತರ ಮೊಬೈಲ್ಗಳಿಗೂ ಬ್ಲೂಟೂಥ್ ಮುಖಾಂತರ ವರ್ಗಾಯಿಸಿ ವಿಕೃತ ಆನಂದವನ್ನು ಅನುಭವಿಸಿದ್ದಾನೆ.
"ಮೈಸೂರು ಮಲ್ಲಿಗೆ"ಯ ರೀತಿಯಲ್ಲಿ "ಮಾಗಡಿ ಮಂದಾರ" ಹೆಸರಲ್ಲಿ ಮಾಗಡಿ, ರಾಮನಗರ, ಕುಣಿಗಲ್, ಬೆಂಗಳೂರು ಮತ್ತಿತರೆಡೆಗಳಲ್ಲಿ ಈ ದೃಶ್ಯಾವಳಿಗಳು ಮೊಬೈಲ್ನಿಂದ ಮೊಬೈಲ್ಗೆ ಹರಡಿ ಭಾರೀ ಸುದ್ದಿಯನ್ನು ಮಾಡಿದವು. ಈ ಸಂದರ್ಭದಲ್ಲಿ ಶಾಲಿನಿಯ ಹೆತ್ತವರಿಗೆ ವಿಷಯ ತಿಳಿದಾಕ್ಷಣ ಮಾಗಡಿ ಪೊಲೀಸ್ ಠಾಣೆಗೆ ಕರೆತಂದು ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ? : ಶಾಲಿನಿಯೇ ಖುದ್ದು ಪೊಲೀಸರಿಗೆ ರವಿ ಅಲಿಯಾಸ್ ರಂಗನಾಥ್ ಮತ್ತು ಮಂಜ ಎಂಬುವವನ ವಿರುದ್ಧ ದೂರು ನೀಡಿದ್ದಾಳೆ. 'ರವಿ ಮೊದಲಿಗೆ ನನಗೆ ಚಾಕು ಚೂರಿ ತೋರಿಸಿ ಯಾರಿಗೂ ಹೇಳದಂತೆ ಬೆದರಿಸಿ ಬೆತ್ತಲು ಗೊಳಿಸಿ ಮೊಬೈಲ್ನಿಂದ ಚಿತ್ರೀಕರಣ ಮಾಡಿದ್ದಾನೆ. ನಾನು ರವಿಯನ್ನು ಪ್ರೀತಿ ಮಾಡೇ ಇಲ್ಲ. ನಾನು ಅವನಿಗೆ ಫೋನ್ ಕೂಡ ಮಾಡಿಲ್ಲ. ರವಿ ಚಿತ್ರೀಕರಣ ಮಾಡಿದ್ದನ್ನು ಮಂಜ ಎಂಬುವವನು ಮೊಬೈಲ್ನಿಂದ ಮೊಬೈಲ್ಗೆ ವರ್ಗಾಯಿಸಿ ನಾನು ಮತ್ತು ನನ್ನ ಕುಟುಂಬದವರು ತಲೆ ಎತ್ತದಂತೆ ಮಾಡಿದ್ದಾರೆ" ಎಂದು ದೂರು ನೀಡಿದ್ದಾಳೆ.
ರವಿ ಹೇಳಿದ್ದು : "ನಾನು ಮತ್ತು ಶಾಲಿನಿ ಪ್ರೀತಿ ಮಾಡ್ತಿದ್ವಿ. ಗಂಟೆಗಟ್ಟಲೆ ನನ್ನ ಮೊಬೈಲ್ಗೆ ಫೋನ್ ಮಾಡಿ ಮಾತಾಡ್ತಿದ್ದಳು. ಅವಳು ಹೇಳಿದ ಹಾಗೇ ನಾನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದು ಸತ್ಯ. ನಾನು ಮಾಡಿದ ತಪ್ಪಿಗೆ ಬೇಕಾದ್ರೆ ಮದುವೆ ಆಗಲಿಕ್ಕೆ ಸಿದ್ಧವಾಗಿದ್ದೀನಿ" ಎಂದು ಪೊಲೀಸರೆದುರು ವಿಚಾರಣೆ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾನೆ.
ಮಾಲೆ ತೊಟ್ಟಿದ್ದ ರವಿ : ಮಾಡೋದೆಲ್ಲಾ ಅನಾಚಾರ ಮನೆಮುಂದೆ ಬೃಂದಾವನ ಎಂಬಂತೆ ರವಿ ಮಾಡಬಾರದ ಕೆಲಸ ಮಾಡಿ ಮಾಲೆ ತೊಟ್ಟು ಸ್ವಾಮಿ ಶರಣಂ ಅಯ್ಯಪ್ಪ ಎನ್ನುತ್ತಾ ಶಬರಮಲೆಗೆ ಹೊರಡಲು ಸಿದ್ಧನಾಗಿದ್ದ. ಅಷ್ಟರಲ್ಲಿ ರವಿಯ ಅನಾಚಾರದ ವಿಚಾರ ತಿಳಿದ ಪೊಲೀಸರು ರವಿ ಮತ್ತು ಮಂಜ ತೊಟ್ಟಿದ್ದ ಮಾಲೆಯನ್ನ ಬಿಚ್ಚಿಸಿ ಕೇಸು ದಾಖಲಿಸಿ ಕಂಬಿಎಣಿಸಲು ಕಳುಹಿಸಿಕೊಟ್ಟಿದ್ದಾರೆ. [ಎಮ್ಎಮ್ಎಸ್]
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications