Get Updates
Get notified of breaking news, exclusive insights, and must-see stories!

ಕರ್ತವ್ಯ ನಿರತ ಜಿಲ್ಲಾಧಿಕಾರಿಯ ಸಜೀವ ದಹನ

Additional DC burnt alive in Maharashtra
ಮನಮಾದ್(ಮಹಾರಾಷ್ಟ್ರ), ಜ. 25 : ಗಣರಾಜ್ಯೋತ್ಸವದ ಮುನ್ನಾದಿನ ಮಹಾರಾಷ್ಟ್ರದ ಮನಮಾದ್ ನಲ್ಲಿ ಮಂಗಳವಾರ ಮಟಮಟ ಮಧ್ಯಾಹ್ನ ಕರ್ತವ್ಯನಿರತ ಅಧಿಕಾರಿಯೊಬ್ಬರನ್ನು ಸಜೀವವಾಗಿ ಸುಟ್ಟು ಭೀಕರವಾಗಿ ಹತ್ಯೆಗೈಯಲಾಗಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ 10 ಕಿ.ಮೀ. ದೂರದಲ್ಲಿರುವ ಮನಮಾದ್ ನಲ್ಲಿ ಈ ದುರಂತ ಸಂಭವಿಸಿದೆ. ಹತರಾಗಿರುವವರು ಮಾಲೆಗಾಂವ್ ನ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಾನೆ. ಅಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ದಂಧೆಯಲ್ಲಿ ತೊಡಗಿದ್ದ ಪಾತಕಿಗಳು ಈ ನಿರ್ಮಾನುಷ ಕೃತ್ಯವೆಸಗಿದ್ದಾರೆ.

ತಹಸೀಲ್ದಾರ್ ಭೇಟಿಗೆಂದು ಯಶವಂತ್ ಅವರು ನಂದಗಾಂವ್ ಗೆ ಹೊರಟಿದ್ದ ಸಂದರ್ಭದಲ್ಲಿ ಐಓಸಿ, ಎಚ್ ಪಿಸಿಎಲ್ ಪೆಟ್ರೋಲ್ ಬಂಕ್ ಬಳಿ ಕೆಲ ಟ್ರಕ್ ಗಳನ್ನು ನಿಲ್ಲಿಸಿದ್ದನ್ನು ವೀಕ್ಷಿಸಿದ್ದಾರೆ. ಅನುಮಾನ ಬಂದು ಕಾರಿನಿಂದ ಇಳಿದು ವಿಚಾರಣೆಗೆ ಯಶವಂತ್ ತೊಡಗಿದ್ದಾರೆ. ಆಗ ಪೆಟ್ರೋಲ್ ಕಾಳಸಂತೆಗೆ ಕುಖ್ಯಾತನಾಗಿರುವ ಪೋಪಟ್ ಶಿಂಧೆ ಮತ್ತಿತರರು ದಾಳಿ ನಡೆಸಿ ಯಶವಂತ್ ರನ್ನು ಸಜೀವವಾಗಿ ಸುಟ್ಟಹಾಕಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.

ಅತ್ಯಂತ ದಕ್ಷ ಅಧಿಕಾರಿಯೆಂದು ಹೆಸರು ಪಡೆದಿದ್ದ ಯಶವಂತ್ ಅವರ ಜೊತೆ ಒಬ್ಬ ಸಹಾಯಕ ಮತ್ತು ಸಿಬ್ಬಂದಿಯೊಬ್ಬರಿದ್ದರೆಂದು ತಿಳಿದುಬಂದಿದೆ. ಕೆಲ ಮಾಹಿತಿಯ ಪ್ರಕಾರ ಪೆಟ್ರೋಲ್ ಕಾಳಸಂತೆಯ ಬಗ್ಗೆ ಒಂದು ವಾರದ ಹಿಂದೆಯೇ ಅವರಿಗೆ ಮಾಹಿತಿ ಲಭಿಸಿತ್ತು. ಇಂಥ ದಂಧೆಗೆ ಕುಖ್ಯಾತಿ ಪಡೆದ ಆ ಪ್ರದೇಶಕ್ಕೆ ಹೋಗುವಾಗ ಪೊಲೀಸ್ ರಕ್ಷಣೆಯನ್ನು ಪಡೆಯದಿರುವುದು ಯಶವಂತ್ ಅವರಿಗೆ ಮುಳುವಾಗಿದೆ.

ಈ ಭೀಕರ ಪ್ರಕರಣದ ತನಿಖೆ ನಡೆಸಬೇಕೆಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚಹ್ವಾಣ್ ಆದೇಶಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. [ದುರಂತ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+