ಸಂಕ್ರಾಂತಿ ಜತೆ ಬೆಂಗಳೂರು ಹಬ್ಬ 2011 ಶುರು

ಸ್ಥಳೀಯ ಕಲಾವಿದರಿಗೆ ಮನ್ನಣೆ: ಸ್ಥಳೀಯ ಜಾನಪದ ಮತ್ತು ಬುಡಕಟ್ಟು ನೃತ್ಯ ಈ ಬಾರಿಯ ಹಬ್ಬದ ಪ್ರಮುಖ ಆಕರ್ಷಣೆ. ಹೆಸರಾಂತ ಕಲಾವಿದರ ಕುಂಚದಿಂದ ಹೊರಹೊಮ್ಮಿದ ಚಿತ್ರಕಲಾ ಕೃತಿಗಳ ವೀಕ್ಷಣೆಗೆ, ಕಲಾವಿದರ ಮತ್ತು ಕಲಾಪ್ರೇಮಿಗಳ ಸಂವಾದಕ್ಕೂ ಅವಕಾಶವಿದೆ. ಅಪ್ಪರಾವ್ ಗ್ಯಾಲರಿ, ಟ್ಯಾಂಗ್ರಿನ್ ಗ್ಯಾಲರಿ, ಚೌಡಯ್ಯ ಸ್ಮಾರಕ ಭವನ, ಚಿತ್ರಕಲಾಪರಿಷತ್ ಮುಂತಾದೆಡೆ ಹಬ್ಬ ನಡೆಯಲಿದೆ.
ಕಲಾವಿದರ ದಂಡು: ದೇಶ, ವಿದೇಶದ ಖ್ಯಾತ ಕಲಾವಿದರು ಸೇರಿದಂತೆ ಸುಮಾರು 1000ಕ್ಕೂ ಅಧಿಕ ಕಲಾವಿದರಿಗೆ ಬೆಂಗಳೂರು ಹಬ್ಬ ವೇದಿಕೆ ಒದಗಿಸಲಿದೆ. ಪಂಡಿತ್ ಶಿವಕುಮಾರ್ ಶರ್ಮಾ, ಗುರುಕಿರಣ್, ಕದ್ರಿ ಗೋಪಿನಾಥ್, ಡಾ. ಪದ್ಮಾ ಸುಬ್ರಮಣ್ಯಂ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.
ನಾಟಕ ಪ್ರೇಮಿಗಳಿಗೂ ಸಂತಸದ ಸುದ್ದಿ. ಸಾಮಾಜಿಕ ಸಂದೇಶ ಸಾರುವ ಬೀದಿ ನಾಟಕಗಳು ಸೇರಿದಂತೆ ಜ.18 ರಿಂದ ಜ.21 ರವರೆಗೆ ಸಂಜೆ 7 ಕ್ಕೆ ಮಲ್ಲೇಶ್ವರದ ಸೇವಾಸದನದಲ್ಲಿ ನಾಟಕ ಪ್ರದರ್ಶನವಿರುತ್ತದೆ. ಜ.28ರಂದು ಐಟಿ ಪಾರ್ಕ್ ಗಳಲ್ಲಿ ಸಂಗೀತ ಕಾರ್ಯಕ್ರಮವಿರುತ್ತದೆ. ಜ. 29ರಂದು ಅರಮನೆ ಮೈದಾನದಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕ ಕೈಲಾಶ್ ಖೇರ್ ಪಾಲ್ಗೊಳ್ಳಲಿದ್ದಾರೆ.
ಸದಭಿರುಚಿ ಚಿತ್ರ ಪ್ರದರ್ಶನ: ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಈ ಹಬ್ಬದ ಅಂಗವಾಗಿ ಅಕಾಡೆಮಿಯು ಜ.14ರಿಂದ 16 ಹಾಗೂ 21ರಿಂದ 23 ರವರೆಗೆ ಜಯನಗರದ ಎಲ್ಐಟಿ ಉದ್ಯಾನ, ದೇವಯ್ಯಪಾರ್ಕ್ ಮತ್ತು ನೆಟ್ಟಕಲ್ಲಪ್ಪ ಸರ್ಕಲ್ ಸಮೀಪದ ಶಾಮಣ್ಣ ಪಾರ್ಕ್ನಲ್ಲಿ ಆಯ್ದ 12 ಸದಭಿರುಚಿಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು.
ಹಬ್ಬದ ಪ್ರಚಾರಕ್ಕಾಗಿ ಹಬ್ಬದ ಬಗ್ಗೆ ಸಂದೇಶಗಳು, ದೃಶ್ಯ ತುಣುಕುಗಳು ಇತ್ಯಾದಿಗಳನ್ನು ತನ್ನ ಗ್ರಾಹಕರಿಗೆ ಏರ್ಟೆಲ್ ಸಂಸ್ಥೆ ನೀಡುತ್ತಿದೆ ಎಂದು ಏರ್ ಟೆಲ್ ನ ಸ್ಥಳೀಯ ಸಿಇಒ ವೆಂಕಟೇಶ್ ವಿವರಿಸಿದರು. [ಬೆಂಗಳೂರು]
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications