ವಿಕಿಪೀಡಿಯ ಮುಕ್ತ ಚಿತ್ರ ಖಜಾನೆಗಾಗಿ ನಡಿಗೆ

ಏನಿದು ಫೋಟೋ ವಾಕ್ : ವಿಕಿಪೀಡಿಯದ ಮುಕ್ತ ಚಿತ್ರಕೋಶ ಸಂಗ್ರಹ ತಾಣ ವಿಕಿ ಕಾಮನ್ಸ್ ನಲ್ಲಿ ಚಿತ್ರಗಳನ್ನು ತುಂಬಿಸಿ ಮುಕ್ತವಾಗಿ ಬಳಕೆಗೆ ನೀಡುವುದು ಇದರ ಪ್ರಮುಖ ಉದ್ದೇಶ. ಇಂದು ಬೆಳಗ್ಗೆ ಸುಮಾರು 8.15ಕ್ಕೆ ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್ ನಿಂದ ಆರಂಭವಾದ ನಡಿಗೆ ಎರಡೂವರೆ ತಾಸಿನ ನಂತರ ಶೇಷಾದ್ರಿ ರಸ್ತೆಯಲ್ಲಿರುವ ಫ್ರೀಡಂ ಪಾರ್ಕ್ ಬಳಿ ಅಂತ್ಯವಾಯಿತು. ಮಾರ್ಗ ಮಧ್ಯದಲ್ಲಿ ಸಿಗುವ ಪ್ರಮುಖ ಪುರಾತನ, ಪಾರಂಪಾರಿಕ ಕಟ್ಟಡಗಳನ್ನು ಕೆಮೆರಾಗಳಲ್ಲಿ ಸೆರೆ ಹಿಡಿಯಲಾಯಿತು.
ಇಂದು ಸೆರೆ ಸಿಕ್ಕ ಚಿತ್ರಗಳು: ಟೌನ್ ಹಾಲ್, ಕಿತ್ತೂರು ಚೆನ್ನಮ್ಮ ಪ್ರತಿಮೆ, ಮೈ ಶುಗರ್ ಬಿಲ್ಡಿಂಗ್, ಕೆನೆರಾ ಬ್ಯಾಂಕ್, ಯೂನಿಟಿ ಬಿಲ್ಡಿಂಗ್, ಎಲ್ ಐಸಿ ಕಟ್ಟಡ, ಬಿಬಿಎಂಪಿಯ ಮೂರು ಕಟ್ಟಡಗಳು, ಕೆಂಪೇಗೌಡರ ಪ್ರತಿಮೆ, ಹಡ್ಸನ್ ಪ್ರಾರ್ಥನಾ ಮಂದಿರ, ಕಬ್ಬನ್ ಪಾರ್ಕ್, ಸೆಂಟ್ರಲ್ ಲೈಬ್ರರಿ, ಯುವಿಸಿಇ, ಎಸ್ ಜೆಪಿ.. .ಇತ್ಯಾದಿ
ಇದರಲ್ಲೇನಿದೆ ವಿಶೇಷ: ಇಂದು ಪಾಲ್ಗೊಂಡವರಲ್ಲಿ ಬಹುತೇಕ ಮಂದಿ ಐಟಿ ಕ್ಷೇತ್ರದ ವೃತ್ತಿಪರರು. ಫೋಟೋಗ್ರಾಫಿಯನ್ನು ಹವ್ಯಾಸ ಮಾಡಿಕೊಂಡವರೇ ಹೆಚ್ಚು. ಜನಕ್ಕೆ ಹೊಸ ಬಗೆಯಲ್ಲಿ ಏನಾದರೂ ನೆರವು ನೀಡಬೇಕು ಅದರಲ್ಲೂ ತಮಗೆ ತಿಳಿದಿರುವ ಕ್ಷೇತ್ರದ ಮೂಲಕ(ವೆಬ್ ವರ್ಲ್ಡ್ ಎಂದು ಓದಿಕೊಳ್ಳಬಹುದು) ನೀಡುವುದಾದರೆ ಇನ್ನೂ ಒಳ್ಳೆಯದು ಎಂಬ ಮನಸ್ಥಿತಿ ಇದ್ದವರೇ ಹೆಚ್ಚು. ಭಾನುವಾರ ಈ ಗುಂಪು ಬೆಂಗಳೂರಿನಲ್ಲು ಸುತ್ತಾಡಿ ತೆಗೆದ ಚಿತ್ರಗಳು ವಿಕಿ ಪುಟಗಳಲ್ಲಿ ಲಭ್ಯ. ಕಾಮನ್ಸ್ ನಲ್ಲಿನ ಫೋಟೋಗಳನ್ನು ಬಳಸಲು ಛಾಯಾಚಿತ್ರಕಾರರ ಅನುಮತಿ ಆಗತ್ಯ. ವಿಕಿಯಲ್ಲಿ ಫೋಟೋ ಹಾಕಿರುವ ಸದಸ್ಯರು ಸೂಚಿಸಿದಂತೆ ಕೃಪೆ ನೀಡಿ ಫೋಟೋಗಳನ್ನು ಬಳಸಬಹುದು. ಮಾಹಿತಿ ಪ್ರಿಯ ಕನ್ನಡ ಜನಸ್ತೋಮದ ಉಪಯೋಗಕ್ಕಾಗಿ ಸಮಾನ ಮನಸ್ಕರು ಮಾಡುತ್ತಿರುವ ಈ ಹಂಚಿಕೆ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ
ಬೇರೆ ದೇಶಗಳಲ್ಲಿ ವಿಕಿ ಕಾಮನ್ಸ್ ವಾಕ್ ನಲ್ಲಿ ಸಾವಿರಾರು ಜನ ಸೇರುವುದುಂಟು. ನಮ್ಮಲ್ಲಿ ಸುಮಾರು 15 ಜನ ಸೇರಿದ್ದೇವೆ ಎಂಬುದೇ ಸಂತೋಷ. ವೆಬ್ ಪ್ರಪಂಚದಲ್ಲಿ ಕನ್ನಡಕ್ಕೆ ಮಾನ್ಯತೆ ಇಲ್ಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ ಆದರೆ, ವಿಕಿಪೀಡಿಯ ಬಳಸಿ ಕನ್ನಡದ ಲೇಖನಗಳ ಸಂಖ್ಯೆ ಹೆಚ್ಚಿಸಿದರೆ ಕನ್ನಡದ ಶಕ್ತಿ ಎಲ್ಲರಿಗೂ ತಿಳಿಯುತ್ತದೆ ಎಂದು ವಿಕಿಪೀಡಿಯ ಬೆಂಗಳೂರು ಸಮುದಾಯದ ಆಯೋಜಕ ಹರಿ ಪ್ರಸಾದ್ ನಾಡಿಗ್ ಹೇಳಿದರು.
ಮುಂದಿನ ಫೋಟೋ ವಾಕ್ ಸ್ಥಳ ಬಸವನಗುಡಿ. ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಅದಕ್ಕೂ ಮುನ್ನ ಜ. 15ರ ವಿಕಿಪೀಡಿಯದ 10ನೇ ವಾರ್ಷಿಕೋತ್ಸವದಲ್ಲಿ ಆಸಕ್ತರು ಪಾಲ್ಗೊಳ್ಳಬಹುದು. ಅಭಿಪ್ರಾಯ ಹಂಚಿಕೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ದಟ್ಸ್ ಕನ್ನಡ ತಾಣವನ್ನು ನೋಡುತ್ತಿರಿ. [ಬೆಂಗಳೂರು]
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications