ಹಿಂದು ಭಯೋತ್ಪಾದನೆ ನಿಜ; ಆರ್ಎಸ್ಎಸ್ ಮುಖಂಡ

ಆಸೀಮಾನಂದರ ತಪ್ಪೊಪ್ಪಿಗೆಯಿಂದ ಹಿಂದು ಉಗ್ರರ ಜಾಲ ಕಾರ್ಯನಿರತವಾಗಿರುವುದು ಖಚಿತವಾಗಿದೆ. ಹಾಗೆಯೇ ಅವರ ಸಹಿ ಇರುವ 42 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ತಮ್ಮ ಬಳಿಯಿದೆ. ಮುಸ್ಲಿಮರನ್ನು ಗುರಿಯಾಗಿಸಿ ಧಾರ್ಮಿಕ ಸ್ಥಳಗಳಲ್ಲಿ ನಡೆಸುತ್ತಿರುವ ಭಯೋತ್ಪಾದನಾ ದಾಳಿ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಈ ತಪ್ಪೊಪಿಗೆ ಹೇಳಿಕೆ ಬಹಳ ಮುಖ್ಯವಾಗಿದೆ ಎಂದು 'ತೆಹಲ್ಕಾ' ನಿಯತಕಾಲಿಕ ಹೇಳಿಕೊಂಡಿದೆ.
ಹಿಂದಿಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಸ್ವಾಮಿ, ಅಭಿನವ್ ಭಾರತ್ ಸಂಘಟನೆ ಮತ್ತು ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಕೂಡಾ ಇದರಲ್ಲಿ ಪ್ರಮುಖ ಸೂತ್ರಧಾರಿ. 2005ರಲ್ಲಿ ಗುಜರಾತ್ನಲ್ಲಿರುವ ಆಸೀಮಾನಂದರ 'ಶಬರಿಧಾಮ" ಆಶ್ರಮಕ್ಕೆ ಹಲವು ಉನ್ನತ ಆರ್ ಎಸ್ಎಸ್ ಕಾರ್ಯಕರ್ತರೊಡನೆ ಭೇಟಿ ನೀಡಿದ ಇಂದ್ರೇಶ್, ಭಯೋತ್ಪಾದನಾ ದಾಳಿಗೆ ಈಗ ಹತ್ಯೆಗೀಡಾಗಿರುವ ಆರ್ ಎಸ್ಎಸ್ ನಾಯಕ ಸುನೀಲ್ ಜೋಷಿ ಅವರನ್ನು ನಿಯೋಜಿಸಿರುವುದಾಗಿ ಮತ್ತು ಅವರಿಗೆ ಬೇಕಾದ ಹಣಕಾಸು ಸೇರಿ ಎಲ್ಲ ನೆರವು ನೀಡುವ ಭರವಸೆ ಇಂದ್ರೇಶ್ ನೀಡಿದ್ದಾಗಿ ಸ್ವಾಮಿ ಹೇಳಿರುವುದಾಗಿ 'ತೆಹೆಲ್ಕಾ' ಪತ್ರಿಕೆ ಹೇಳಿದೆ.












Click it and Unblock the Notifications