ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದ ಹಿರಿಯ ಪತ್ರಕರ್ತ ಚಂದ್ರಯ್ಯ ಸನ್ಮಾನ

By Prasad
|
Google Oneindia Kannada News

Chandraiah Shetty
ಶ್ರೀನಿವಾಸಪುರ (ಕೋಲಾರ ಜಿಲ್ಲೆ), ಡಿ.3 : ಚ್ಯೆತನ್ಯ ಜನ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸ್ವಾತ್ಯಂತ್ರ ಹೋರಾಟಗಾರ ಹಾಗು ಹಿರಿಯ ಪತ್ರಕರ್ತ ಚಂದ್ರಯ್ಯ ಶೆಟ್ಟಿ ಮತ್ತಿತರರನ್ನು ನಗರದಲ್ಲಿ ಇಂದು ಸನ್ಮಾನಿಸಲಾಯಿತು.

ಹಿರಿಯರ ಆದರ್ಶಗಳು ಅನುಕರಣೀಯ, ಅವರ ಮಾರ್ಗದರ್ಶನ ಇಂದಿನ ಸಮಾಜಕ್ಕೆ ಅಗತ್ಯ ಎಂದು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಕಲ್ಲೂರು ವೆಂಕಟರೆಡ್ಡಿ ಹೇಳಿದರು. ಚಂದ್ರಯ್ಯ ಶೆಟ್ಟಿ ಅವರ ಜೊತೆ ಸತ್ಯನಾರಾಯಣ ಶೆಟ್ಟಿ ಹಾಗು ಡಾಕ್ಟರ್ ಎಂಬ ಹಮ್ಮಿಲ್ಲದೆ ಸರಳ ಹಾಗು ಸಾಮಾನ್ಯ ಜೀವನ ನಡೆಸುತ್ತ ಸಮಾಜ ಮುಖಿಯಾಗಿರುವ ಡಾ.ಮುರಳಿ ಅವರನ್ನು ಕೂಡ ಸನ್ಮಾನಿಸಲಾಯಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀನಿವಾಸಪುರದಲ್ಲಿ ಪ್ರಥಮ ವೃತ್ತಪತ್ರಿಕೆ ವಿತರಕರಾಗಿ, ವರದಿಗಾರರಾಗಿದ್ದ ಚಂದ್ರಯ್ಯ ಅವರು ಇಂದಿಗೂ ಇಳಿವಯಸ್ಸಿನಲ್ಲಿ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸರಳ ಸ್ವಾವಲಂಬಿಯಾಗಿ ಗಾಂಧಿ ತತ್ವದಲ್ಲಿಡಿಯಲ್ಲಿ ಜೀವನ ನಡೆಸುತ್ತಿರುವ ಚಂದ್ರಯ್ಯ ಶೆಟ್ಟಿಯವರು ಇಂದಿನ ಪೀಳಿಗೆಗೆ ಮಾದರಿ ಎಂದು ಅವರನ್ನು ರೆಡ್ಡಿ ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶ್ರೀನಿವಾಸಪ್ಪ, ತಾ.ಕ ಸಾ ಪ ಅಧ್ಯಕ್ಷ ನಾ ವೆಂಕೊಬರಾವ್, ಸಮಾಜ ಸೇವಕ ಡಾ.ವೆಂಕಟಾಚಲ, ಶ್ರೀನಿವಾಸ ಹಿಂದುಸ್ತಾನ್ ಸಂಸ್ಥೆ ಅನಿಲ ವಿತರಕ ಸತೀಶ್, ಚ್ಯೆತನ್ಯ ಜನ ಜಾಗೃತಿ ವೇದಿಕೆಯ ಮುಖಂಡರಾದ ಕಾರಬಾಬು, ಎಮ್ ವಿ ಎಸ್ ರಘು, ಗುತ್ತಿಗೇದಾರ ರಮೇಶ್, ಮಂಜು, ನಾಗರಾಜ್, ಕೆಂಪರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

English summary
Vetaran freedom fighter, journalist Chandraiah Shetty felicitated at Kannada Rajyotsava function in Srinivaspura in Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X