ಕೋಲಾರದ ಹಿರಿಯ ಪತ್ರಕರ್ತ ಚಂದ್ರಯ್ಯ ಸನ್ಮಾನ
ಹಿರಿಯರ ಆದರ್ಶಗಳು ಅನುಕರಣೀಯ, ಅವರ ಮಾರ್ಗದರ್ಶನ ಇಂದಿನ ಸಮಾಜಕ್ಕೆ ಅಗತ್ಯ ಎಂದು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಕಲ್ಲೂರು ವೆಂಕಟರೆಡ್ಡಿ ಹೇಳಿದರು. ಚಂದ್ರಯ್ಯ ಶೆಟ್ಟಿ ಅವರ ಜೊತೆ ಸತ್ಯನಾರಾಯಣ ಶೆಟ್ಟಿ ಹಾಗು ಡಾಕ್ಟರ್ ಎಂಬ ಹಮ್ಮಿಲ್ಲದೆ ಸರಳ ಹಾಗು ಸಾಮಾನ್ಯ ಜೀವನ ನಡೆಸುತ್ತ ಸಮಾಜ ಮುಖಿಯಾಗಿರುವ ಡಾ.ಮುರಳಿ ಅವರನ್ನು ಕೂಡ ಸನ್ಮಾನಿಸಲಾಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀನಿವಾಸಪುರದಲ್ಲಿ ಪ್ರಥಮ ವೃತ್ತಪತ್ರಿಕೆ ವಿತರಕರಾಗಿ, ವರದಿಗಾರರಾಗಿದ್ದ ಚಂದ್ರಯ್ಯ ಅವರು ಇಂದಿಗೂ ಇಳಿವಯಸ್ಸಿನಲ್ಲಿ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸರಳ ಸ್ವಾವಲಂಬಿಯಾಗಿ ಗಾಂಧಿ ತತ್ವದಲ್ಲಿಡಿಯಲ್ಲಿ ಜೀವನ ನಡೆಸುತ್ತಿರುವ ಚಂದ್ರಯ್ಯ ಶೆಟ್ಟಿಯವರು ಇಂದಿನ ಪೀಳಿಗೆಗೆ ಮಾದರಿ ಎಂದು ಅವರನ್ನು ರೆಡ್ಡಿ ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶ್ರೀನಿವಾಸಪ್ಪ, ತಾ.ಕ ಸಾ ಪ ಅಧ್ಯಕ್ಷ ನಾ ವೆಂಕೊಬರಾವ್, ಸಮಾಜ ಸೇವಕ ಡಾ.ವೆಂಕಟಾಚಲ, ಶ್ರೀನಿವಾಸ ಹಿಂದುಸ್ತಾನ್ ಸಂಸ್ಥೆ ಅನಿಲ ವಿತರಕ ಸತೀಶ್, ಚ್ಯೆತನ್ಯ ಜನ ಜಾಗೃತಿ ವೇದಿಕೆಯ ಮುಖಂಡರಾದ ಕಾರಬಾಬು, ಎಮ್ ವಿ ಎಸ್ ರಘು, ಗುತ್ತಿಗೇದಾರ ರಮೇಶ್, ಮಂಜು, ನಾಗರಾಜ್, ಕೆಂಪರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.