ಕೃಷ್ಣಾ ಮೇಲ್ದಂಡೆ ಅಕ್ರಮ, ಗೌಡ್ರ ಮೇಲೆ ಸಿಐಡಿ ತನಿಖೆ

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕವಾಗಿಯೂ ಚರ್ಚೆಯಾಗಿತ್ತು. ಮಾಜಿ ಸಚಿವ ವೈಜನಾಥ್ ಪಾಟೀಲ ಮತ್ತು ದಾತಾರ್ ಸಮಿತಿ ಸಹ ಈ ಬಗ್ಗೆ ಪ್ರಸ್ತಾಪಿಸಿತ್ತು. ಅಲ್ಲದೆ ಸೋಮಶೇಖರ ರೆಡ್ಡಿ ಎನ್ನುವವರು ಕಳೆದ ಜನವರಿಯಲ್ಲಿ ಈ ವಿಷಯವನ್ನು ಹೈಕೋರ್ಟ್ಗೆ ತೆಗೆದುಕೊಂಡು ಹೋಗಿದ್ದರು. ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸಬಹುದು ಎಂದು ಫೆಬ್ರವರಿಯಲ್ಲಿ ತೀರ್ಪು ನೀಡಿದೆ.
ಹೀಗಾಗಿ ತುಂಡು ಗುತ್ತಿಗೆ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ. 1994-96ರ ಅವಧಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವಿವಿಧ ಕಾಮಗಾರಿಗಳಲ್ಲಿ ಒಟ್ಟು 85 ಕೋಟಿ ರೂಪಾಯಿ ಅವ್ಯವಹಾರ ಆಗಿದೆ. ಈ ಪೈಕಿ ಲೋಕೋಪಯೋಗಿ ಇಲಾಖೆಯು ಟೆಂಡರ್ ಕರೆಯುವಾಗ ಕೋಡ್ ಉಲ್ಲಂಘನೆ ಮಾಡಿರುವುದರಿಂದ 73 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಹಾಲೆಕ್ಕಪಾಲರ ವರದಿಯಲ್ಲಿ ಪ್ರಸ್ತಾಪಿಸಿರುವುದು ಪ್ರಮುಖವಾಗಿದೆ ಎಂದು ಆಚಾರ್ಯ ಹೇಳಿದರು.












Click it and Unblock the Notifications