ಬೆಂಗಳೂರಿನಿಂದ ದಾವಣಗೆರೆಗೆ ಐರಾವತ ಎಸಿ ಬಸ್
ಬೆಂಗಳೂರು,
ನ.10: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯು ಬೆಂಗಳೂರಿನಿಂದ ದಾವಣಗೆರೆಗೆ ನವೆಂಬರ್ 12ರಿಂದ ಐರಾವತ (ವೋಲ್ವೊ) ಬಸ್ ಸೇವೆಯನ್ನು ಆರಂಭಿಸಲಿದೆ. ಈಗಾಗಲೇ ಲಭ್ಯವಿರುವ ಬೆಂಗಳೂರು-ದಾವಣಗೆರೆ ವೋಲ್ವೊ ಬಸ್ ಸೇವೆಗೆ ಪೂರಕವಾಗಿ ಹೊಸ ಸೇವೆ ಆರಂಭವಾಗಲಿದೆ. ಇದರ ಜೊತೆಗೆ ಆಂಧ್ರಪ್ರದೇಶದ ನೆಲ್ಲೂರಿಗೂ ಹೊಸ ಬಸ್ ಸಂಪರ್ಕ ಕಲ್ಪಿಸಲಾಗಿದೆ. id="toptextpromo">ಈ
ಬಸ್ ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು ತುಮಕೂರು-ಚಿತ್ರದುರ್ಗ ಮಾರ್ಗ ಸಾಗಿ ಸಂಜೆ 7 ಗಂಟೆಗೆ ದಾವಣಗೆರೆ ತಲುಪಲಿದೆ. ರಾತ್ರಿ 11.45ಕ್ಕೆ ದಾವಣಗೆರೆಯಿಂದ ಹೊರಡುವ ಬಸ್ ಬೆಳಗಿನ ಜಾವ 4.45ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ಆಂಧ್ರದ
ವಿಜಯವಾಡಕ್ಕೆ ಇರುವ ಬಸ್ ಸೌಲಭ್ಯಕ್ಕೆ ಪೂರಕವಾಗಿ ನೆಲ್ಲೂರಿಗೂ ಬಸ್ ಸೇವೆಯನ್ನು ವಿಸ್ತರಿಸಲಾಗಿದೆ. ಬೆಂಗಳೂರು ಕೇಂದ್ರ ನಿಲ್ದಾಣದಿಂದ ರಾತ್ರಿ 8.30 ಕ್ಕೆ ಹೊರಟು ನೆಲ್ಲೂರನ್ನು 4.45ಕ್ಕೆ ತಲುಪಲಿದೆ. ನೆಲ್ಲೂರನ್ನು ರಾತ್ರಿ 8 ಗಂಟೆಗೆ ಬಿಟ್ಟು ಬೆಂಗಳೂರನ್ನು ಬೆಳಗಿನ ಜಾವ 4.45ಕ್ಕೆ ಸೇರಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸಲು 30 ದಿನಗಳವರೆಗೆ ಅವಕಾಶ . ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ www.ksrtc.in ನೋಡಬಹುದು ಎಂದು ಕೆ ಎಸ್ ಆರ್ ಟಿಸಿ ಪ್ರಕಟಿಸಿದೆ.











Click it and Unblock the Notifications