ಪಟಾಕಿ ಸಂಭ್ರಮದ ಜೊತೆಗೆ ಎಚ್ಚರವೂ ಇರಲಿ

India celebrates festival of lights- Diwali
ಬೆಂಗಳೂರು, ನ.5: ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ಸೂಸುವ ಹಬ್ಬ ದೀಪಾವಳಿ. ಇಂದು (ನ.5) ದೇಶದಾದ್ಯಂತ ಸಡಗರ, ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕ್ರಿಶ್ಚಿಯನ್ನರು, ಮುಸ್ಲಿಂಗ್ ಬಾಂಧವರು ಪಟಾಕಿ ಸಿಡಿಸುವ ಮೂಲಕ ದೀಪಾವಳಿ ಹಬ್ಬವ ಬರಮಾಡಿಕೊಂಡು ಸಂಭ್ರಮಿಸಿದ್ದಾರೆ.

ಬೆಂಗಳೂರಿನಲ್ಲಿ ಪಟಾಕಿಗಳು ಭರದಿಂದ ಮಾರಾಟವಾಗುತ್ತಿವೆ. ಮಲ್ಲೇಶ್ವರಂ ಮೈದಾನ, ರಾಜಾಜಿನಗರದ ರಾಮಮಂದಿರ, ಜಯನಗರದ ಮೈದಾನಗಳಲ್ಲಿ ಪಟಾಕಿ ಅಂಗಡಿಗಳು ತಲೆಯೆತ್ತಿವೆ. ಜನತಾ ಬಜಾರ್ ನಲ್ಲಿ ಪಟಾಕಿಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ಶೇ.70ರವರೆಗೂ ರಿಯಾಯಿತಿ ನೀಡಲಾಗುತ್ತಿದೆ ಎಂದು ಜನತಾ ಬಜಾರ್ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ತಿಳಿಸಿದ್ದಾರೆ.

ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಮೈಮರೆಯುವುದು ಬೇಡ. ನಿಮ್ಮ ಉದಾಸೀನತೆ ನಿಮಗೇ ಮುಳುವಾಗಬಹುದು ಅಥವಾ ಮತ್ತೊಬ್ಬರಿಗೆ ಅನಾಹುತಕಾರಿಯಾಗಬಹುದು. ಪಟಾಕಿಯಿಂದ ದೂರವಿರುವುದುದೇ ಕ್ಷೇಮ. ಪರಿಸರ ಮಾಲಿನ್ಯವನ್ನು ತಡೆಯಬಹುದು. ಪಟಾಕಿ ಹೊಡೆಯುವಾಗ ಈ ಕೆಳಗಿನ ಅಂಶಗಳು ನಿಮ್ಮ ಗಮನದಲ್ಲಿರಲಿ.

* ಗಾಜಿನ ಶೀಷೆಗಳಲ್ಲಿ ಪಟಾಕಿ ಸಿಡಿಸುವುದು ಬೇಡ
* ಪಟಾಕಿ ಹೊಡೆಯುವಾಗ ಮಕ್ಕಳೊಂದಿಗೆ ಪೋಷಕರು ಇರಲಿ
* ಕೈಯಲ್ಲಿ ಹಿಡಿದು ಪಟಾಕಿ ಹೊಡೆಯಬೇಡಿ
* ಪಟಾಕಿಯನ್ನು ಇನ್ನೊಬ್ಬರತ್ತ ಎಸೆಯಬೇಡಿ
* ಪಟಾಕಿ ಹೊಡೆಯುವಾಗ ಕಾಟನ್ ಬಟ್ಟೆ ಧರಿಸುವುದು ಉತ್ತಮ
* ಕಣ್ಣಿಗೆ ಕಿಡಿ ಬಿದ್ದರೆ ಉಜ್ಜಲು ಹೋಗಬೇಡಿ; ತಣ್ಣೀರು ಎರಚಿಕೊಳ್ಳಿ

ಪಟಾಕಿ ಸಿಡಿದು ಕಣ್ಣಿಗೆ ತೊಂದರೆಯಾದರೆ ಸಹಾಯವಾಣಿಗೆ ಕೂಡಲೆ ಕರೆಮಾಡಿ:
* ವಿಠಲ್ ಆಸ್ಪತ್ರೆ, ಹೊಸಕೆರೆಹಳ್ಳಿ 94490 32214, 94490 72214, (080) 2672 2214
* ಪ್ರಭಾ ಐ ಕ್ಲಿನಿಕ್, 8ನೇ ಬ್ಲಾಕ್, ಜಯನಗರ 98450 39005, (080) 2244 4131 ರಿಂದ 2244 4141ವರೆಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+