ಪ್ರಣಾಳ ಶಿಶುವಿನ ಜನಕನಿಗೆ ವೈದ್ಯಕೀಯ ನೋಬೆಲ್

ಕೇಂಬ್ರಿಜ್ ವಿಶ್ವವಿದ್ಯಾನಿಯಲದಲ್ಲಿ ಪ್ರೊಫೆಸರಾಗಿರುವ 85 ವರ್ಷದ ಬ್ರಿಟನ್ನಿನ ಲಕ್ಷಾಂತರ ಪ್ರಣಾಳ ಶಿಶುಗಳ 'ಮುದ್ದಿನ ಅಜ್ಜ' 1970ರ ದಶಕದಲ್ಲಿ ಇನ್-ವರ್ಟೋ ಫರ್ಟಿಲೈಸೇಷನ್ ಅಭಿವೃದ್ಧಿಪಡಿಸಿ ಮಕ್ಕಳಿಲ್ಲದೆ ಕೊರಗುತ್ತಿದ್ದ ಹೆಣ್ಣುಮಕ್ಕಳ ಕಂಗಳಲ್ಲಿ ಆನಂದಭಾಷ್ಪ ಉದುರಿಸಿದ್ದರು. ಅವರ ಜೊತೆ ಸಂಶೋಧನೆ ನಡೆಸಿದ ಪ್ಯಾಟ್ರಿಕ್ ಸ್ಟೆಪ್ಟೋ 1988ರಲ್ಲಿ ನಿಧನರಾದರು.
ಈ ಸಂಶೋಧನೆಗೆ ಎಡ್ವರ್ಡ್ಸ್ 1950ರಲ್ಲಿಯೇ ಕೈಹಾಕಿದ್ದರು. ಅವರು ಕಂಡುಹಿಡಿದ ತಂತ್ರಜ್ಞಾನದ ಪ್ರಕಾರ, ಹೆಣ್ಣಿನ ಮೊಟ್ಟೆಯನ್ನು ಹೊರತೆಗೆದು, ಫಲಪ್ರದವಾಗುವಂತೆ ಮಾಡಿ ಮತ್ತೆ ಆಕೆಯ ಹೊಟ್ಟೆಯಲ್ಲಿ ಇಡಲಾಗುವುದು. ಇದು ಎಪ್ಪತ್ತರ ದಶಕದಲ್ಲಿ ಭಾರೀ ಕ್ರಾಂತಿಯನ್ನು ಎಬ್ಬಿಸಿತು. ಈ ತಂತ್ರಜ್ಞಾನ ಬಳಸಿ ಹುಟ್ಟಿಸಿದ ಮೊದಲ ಟೆಸ್ಟ್ ಟ್ಯೂಬ್ ಮಗು ಲೂಯಿಸ್ ಬ್ರೌನ್ ಹುಟ್ಟಿದ್ದು ಜುಲೈ 25ರ 1978ರಂದು.
ಎಡ್ವರ್ಡ್ಸ್ ಅವರ ಸಂಶೋಧನೆಯನ್ನು ಶ್ಲಾಘಿಸಿರುವ ವೈದ್ಯಕೀಯ ಪ್ರಶಸ್ತಿ ಸಮಿತಿ, "ಅವರ ಸಾಧನೆಯಿಂದಾಗಿ ಜಾಗತಿಕವಾಗಿ ಶೇ.10ಕ್ಕಿಂತ ಹೆಚ್ಚಿನ ಬಂಜೆಯರು ಗರ್ಭಧರಿಸುವಂತಾಗಿದೆ. ಇದರಿಂದಾಗಿ ಸುಮಾರು 40 ಲಕ್ಷ ಮಕ್ಕಳು ಇನ್-ವರ್ಟೋ ಫರ್ಟಿಲೈಸೇಶನ್ ನಿಂದ ಹುಟ್ಟಿವೆ" ಎಂದು ಪ್ರಶಂಸಾಪತ್ರದಲ್ಲಿ ತಿಳಿಸಿದೆ.
ಆದರೆ ಈ ಸಂಶೋಧನೆ ಭಾರೀ ವಿವಾದಕ್ಕೂ ಈಡಾಗಿತ್ತು. ಕೆಲ ಧಾರ್ಮಿಕ ಸಂಘಟನೆಗಳು ಮತ್ತು ವೈದ್ಯಕೀಯ ವೃಂದ, ಈ ಸಂಶೋಧನೆ ನೈತಿಕತೆಗೆ ವಿರುದ್ಧವಾಗಿದೆ ಎಂದು ಕೂಗೆಬ್ಬಿಸಿದ್ದವು. ಬ್ರಿಟಿಷ್ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಕೂಡ ಹಣ ನೀಡುವುದಕ್ಕೆ ಹಿಂಜರಿದಿತ್ತು. ಆದರೆ, ದಾನಿಗಳಿಂದ ಹರಿದುಬಂದ ಹಣದ ಸಹಾಯದಿಂದ ಎಡ್ವರ್ಡ್ಸ್ ಸಂಶೋಧನೆ ಮುಂದುವರಿಸಿದರು.
ಸ್ವೀಡನ್ನಿನ ಉದ್ಯಮಿ ಅಲ್ಫ್ರೆಡ್ ನೋಬೆಲ್ ಸ್ಥಾಪಿಸಿದ ಈ ಪ್ರಶಸ್ತಿಯನ್ನು 1901ರಲ್ಲಿ ಮೊದಲಿಗೆ ಕೊಡಲಾಯಿತು. ಪ್ರಶಸ್ತಿ 10 ಮಿಲಿಯನ್ ಸ್ವೀಡಿಶ್ ಕ್ರೋನರ್ (ಅಂದಾಜು 6.6 ಕೋಟಿ ರು.), ಬಂಗಾರದ ಪದಕ ಮತ್ತು ಡಿಪ್ಲೋಮಾ ಪ್ರಶಸ್ತಿ ಹೊಂದಿರುತ್ತದೆ. ಇದು ಈ ವರ್ಷದ ಮೊದಲ ಘೋಷಣೆಯಾಗಿದ್ದು, ಈ ವಾರದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಪ್ರಶಸ್ತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರದ ಪ್ರಶಸ್ತಿಗಳನ್ನು ಘೋಷಣೆಯಾಗಲಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications