ಸ್ತ್ರೀಲೋಲ, ಬಹುಪತ್ನಿ ವಲ್ಲಭ ವಂಚಕ ಶಿವ ಸೆರೆ

ತಾಲೂಕಿನ ಬನ್ನಿಕುಪ್ಪೆ ಬಳಿಯ ಅಂಕನಹಳ್ಳಿಯ ಶಿವಲಿಂಗಯ್ಯ ಒಂದಲ್ಲ ಎರಡಲ್ಲ ಅಂಥ ನಾಲ್ಕು ಮದುವೆಯಾಗಿ, ವಂಚನೆ ಮಾಡಿ ಭಾನುವಾರ ಸಿಕ್ಕಿಕೊಂಡಿದ್ದಾನೆ. ಈತನ ಬಹುಪತ್ನಿತ್ವದ ಮರ್ಮವನ್ನ ಅರಿತ ಚತುರ್ಥ ಪತ್ನಿ ಈತನ್ನು ಹಿಡಿದು ಕೈ ತುತ್ತಿನ ರುಚಿ ತೋರಿಸಿದ್ದಾಳೆ. ಆಕೆಯಿಂದ ಸಖತ್ ಏಟು ತಿಂದ ಶಿವಲಿಂಗಯ್ಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ನಾನು ಇಬ್ಬರ ಹೆಂಡಿರ ಮುದ್ದಿನ ಗಂಡ ಅಷ್ಟೆ ಅಂತ ಶಿವಲಿಂಗಯ್ಯ ಹೇಳಿದ್ರೆ, ಹಾಗಾದ್ರೆ ನಾನೆಷ್ಟನೇಯವಳು ಅಂತ ಚತುರ್ಥ ಪತ್ನಿ ಪೊಲೀಸರು ಮತ್ತು ಆತನ ತವರಿನ ಜನತೆಯ ಸಮ್ಮುಖದಲ್ಲೇ ಬೆಂಡೆತ್ತಿದಳು.
ಸ್ತ್ರೀಭೂಪಾಲನ ಕತೆ ಹೀಗಿದೆ: ಅಂಕನಹಳ್ಳಿಯ ಶಿವಲಿಂಗಯ್ಯ (40) ಚನ್ನಪಟ್ಟಣದ ತಾಲೂಕಿನ ಮತ್ತೀಕೆರೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಹಲವಾರು ವರ್ಷಗಳ ಹಿಂದಯೇ ಈತ ಅಮಾನತುಗೊಂಡಿದ್ದಾನೆ.
ಸದ್ಯ ರಾಜ್ಯಾದ್ಯಾಂತ ಸಂಚಾರ ಮಾಡುವ ಶಿವಲಿಂಗಯ್ಯ ಆಯಾ ಪ್ರಾಂತ್ಯದಲ್ಲಿ ಹೆಚ್ಚು ಪ್ರಾಬಲ್ಯವನ್ನು ನೋಡಿಕೊಂಡು ನಾನು ನಿಮ್ಮ ಜಾತಿ ಸಮುದಾಯದವನು ಎಂದು ಹೇಳಿಕೊಂಡು ಅದೇ ಸಮುದಾಯದ ಮಹಿಳೆಯರನ್ನ ಮದುವೆಯಾಗಿದ್ದಾನೆ ಎನ್ನುವ ಆರೋಪ ಹೊತ್ತಿದ್ದಾನೆ.
ಕಳೆದ 15 ವರ್ಷಗಳ ಹಿಂದೆ ಸುಜಾತ ಎಂಬಾಕೆಯೊಂದಿಗೆ ವಿವಾಹವಾದ ಶಿವಲಿಂಗಯ್ಯ, ನಂತರ ಹಣವಿರುವ ಮತ್ತು ನೌಕರಿಯಲ್ಲಿರುವ ಮಹಿಳೆಯರನ್ನ ಮರಳು ಮಾಡಿ ಮದುವೆಯಾಗುವ 'ಕೃಷಿ' ಕಾಯಕ ಶುರುವಿಟ್ಟುಕೊಂಡಿದ್ದಾನೆ. ಸುಜಾತಳಿಗೆ ಮಗುವೊಂದನ್ನ ದಯಪಾಲಿಸಿದ ಶಿವಲಿಂಗಯ್ಯ, ನಂತರ ಶಿವಮೊಗ್ಗದ ಹೊಳಲೂರಿನ ಶಿಕ್ಷಕಿ ತಾರಾಳನ್ನ ಮದುವೆ ಮಾಡಿಕೊಂಡಿದ್ದಾನೆ. ತಾರ ಕೊಡಿಸಿದ ದುಡ್ಡಿನಲ್ಲೇ ಒಂದು ಪಲ್ಸರ್ ಬೈಕ್ ಗಿಟ್ಟಿಸಿಕೊಂಡಿದ್ದಾನೆ.
ಮೈಸೂರಿನ ಬ್ರೋಕರ್ ಜಾನಿ ಎಂಬಾತನ ಮೂಲಕ ಮಧು ಎಂಬುವಳನ್ನು ಸಂಪರ್ಕಿಸಿದ ಶಿವಲಿಂಗಯ್ಯ ವೀರಶೈವ ಸಮುದಾಯವೆಂದು ಹೇಳಿಕೊಂಡು ಮದುವೆಯ ಪ್ರಸ್ತಾಪ ಮಾಡಿದ. ನಾನು ಚನ್ನಪಟ್ಟಣ ಬಿಡಿಸಿಸಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದೇನೆಂದು ಹೇಳಿಕೊಂಡಿದ್ದ ಶಿವಲಿಂಗಯ್ಯ ನನಗೆ ಸಂಬಧಿಕರು ಹೆಚ್ಚಾಗಿಲ್ಲವೆಂದು ಹೇಳಿಕೊಂಡು ನನ್ನನ್ನು ನಂಬಿಸಿ ಮದುವೆಯಾದ ಎಂದು ವಂಚನೆಗೊಳಗಾಗಿರುವ ಮಧು ದೂರುತ್ತಾರೆ.
ಮಧುಳನ್ನು ಆಗಸ್ಟ್ ತಿಂಗಳಿನಲ್ಲಿ ಹೋಟೆಲ್ ಶೃಂಗಾರ್ ಇಂಟರ್ನ್ಯಾಷನಲ್ ವಿವಾಹವಾದ. ವಿವಾಹವಾದ ಒಂದು ವಾರದಲ್ಲೇ ಮಧು ಮನೆಯ ತಿಜೋರಿಯಲ್ಲಿದ್ದ 85 ಸಾವಿರ ಲಪಟಾಯಿಸಿ ಫಲಾಯನ ಮಾಡಿದ. ಶಿವಲಿಂಗಯ್ಯನ ನಡವಳಿಕೆಯಿಂದ ಅನುಮಾನಗೊಂಡು ಈತನ 'ಘನಚರಿತ್ರೆ'ಯನ್ನ ಮಧು ಹುಡುಕಿದಾಗಲೇ ಶಿವಲಿಂಗಯ್ಯ ಒಂದಲ್ಲ ಎರಡಲ್ಲ ನಾಲ್ಕೈದು ಮಹಿಳೆಯರಿಗೆ 'ಮದು'ವೇ ಹೆಸರಲ್ಲಿ ಉಂಡೆನಾಮ ಹಾಕಿದ್ದಾನೆಂದು ಖಚಿತ ಪಡಿಸಿಕೊಂಡಿದ್ದಾರೆ. ನಂತರ ಮೈಸೂರಿನ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾಳೆ.
ಶಿವಲಿಂಗಯ್ಯ ಭಾನುವಾರ ಅಂಕನಹಳ್ಳಿಯಲ್ಲೇ ಸಂಬಂಧಿಕರ ಪುಣ್ಯತಿಥಿ ಕಾರ್ಯ ಮುಗಿಸಿ ಹಿಂತಿರುಗುತ್ತಿದ್ದಂತೆ ಮೈಸೂರು ಪೊಲೀಸರು ಎರಡು ಗೂಸಾ ಬಿಟ್ಟು ಕಾರಿಗೆ ಹಾಕಿಕೊಂಡರು. ದಿಢೀರ್ ಬೆಳವಣಿಗೆಯಿಂದ ತಬ್ಬಿಬ್ಬಾದ ಸಂಬಂಧಿಕರು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಆತನನ್ನ ರಾಮನಗರ ಪೊಲೀಸ್ ಠಾಣೆಯ ಮುಂದೆ ಮೈಸೂರು ಪೊಲೀಸರು ಹಾಜರು ಪಡಿಸಿದ್ದರು.
ಅಯ್ಯೋ ನನಗೆ ಇಬ್ಬರೇ...!: ನನಗೆ ಇಬ್ಬರೇ ಹೆಂಡಿರು ಬೇರೆ ಯಾರು ಇಲ್ಲ. ಆದರೆ ಪಾರ್ಟ್ನರ್ಶಿಪ್ನಲ್ಲಿ ಪಲ್ಸರ್ ಬೈಕ್ ತೆಗೆದುಕೊಂಡಿದ್ದಾಗಿ ಶಿವಲಿಂಗಯ್ಯ ಹೇಳುತ್ತಾನೆ. ನನಗೆ ಸುಜಾತಳ ನಂತರ ತಾರಾಳೊಂದಿಗೆ ವಿವಾಹವಾಗಿದ್ದೇನೆ ಇಬ್ಬರಿಗೂ ಮಕ್ಕಳಿದ್ದಾರೆಂದು ಹೇಳುತ್ತಾನೆ. ಆದರೆ ವಾಸ್ತವವಾಗಿ ಶಿವಮೊಗ್ಗದ ಶಿಕ್ಷಕಿ ತಾರಾಳನ್ನ ಮದುವೆಯಾಗಿದ್ದಾನೆಯೇ ಹೊರತು ಮಕ್ಕಳಿಲ್ಲ ಎನ್ನುವುದು ಧೃಢಪಟ್ಟಿದೆ.
ಪತ್ರಿಕೆಗಳಲ್ಲಿ ಸೂಕ್ತ ವಧು ಬೇಕೆಂದು ಜಾಹೀರಾತು ನೀಡಿ ಜಾಹೀರಾತು ನೋಡಿ ಬರುವ ಹೆಣ್ಣು ಮಕ್ಕಳಿಗೆ ಕಾಳು ಹಾಕಿದ್ದಾನೆ. ಮೈಸೂರಿನ ಮಧು ಎಂಬಾಕೆಯೊಂದಿಗೆ ವಿವಾಹವಾಗಿರುವ ಫೋಟೋ ಮತ್ತು ವಿಡಿಯೋ ಸಿಡಿ ಕೂಡ ಇದೆ. ಆದರೆ ಮಧುವಿನೊಂದಿಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದೆಂದು ಸುಳ್ಳಿನ ಕಂತೆಯನ್ನೇ ಕಟ್ಟುತ್ತಾನೆ.
ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಧಿಕೃತವಾಗಿ ಶಿವಮೊಗ್ಗದ ಶಿಕ್ಷಕಿ ತಾರಾ ಮತ್ತು ಮಧು ಇಬ್ಬರನ್ನ ಒಂದು ತಿಂಗಳ ಅವಧಿಯಲ್ಲಿ ರಿಜಿಸ್ಟರ್ ಮಾಡಿಸಿ ವಿವಾಹವಾಗಿದ್ದಾನೆ. ಆದರೆ ಶಿಕ್ಷಕಿ ತಾರಾರನ್ನ 12 ವರ್ಷದ ಹಿಂದೆಯ ಮದುವೆಯಾಗಿದ್ದಾಗಿ ಹೇಳುತ್ತಾನೆ.
ಪೊಲೀಸರೆದುರೇ ತನ್ನ ಚತುರ್ಥ ಪತ್ನಿ ಮಧುವಿಗೆ ಆವಾಜ್ ಹಾಕಿ ಬಾಯಿ ಮುಚ್ಚಿಸುವ ಪ್ರಯತ್ನವನ್ನ ಮಾಡಿದ. ಆದರೆ ವಂಚನೆಗೊಳಗಾದ ಮಧು ಮಾತ್ರ ಶಿವಲಿಂಗನ ಆರ್ಭಟ ಅಬ್ಬರಕ್ಕೆ ಬಗ್ಗದೆ ತನ್ನ ವಂಚಕ ಪತಿ ಶಿವಲಿಂಗಯ್ಯನಿಗೆ ಮನಸೋ ಇಚ್ಛೆ ಸಹಸ್ರನಾಮಾರ್ಚನೆ ಮಾಡಿದರು.
ಸುಸ್ತಾದ ಪೊಲೀಸರು: ಬೆಳಿಗ್ಗೆಯಿಂದ ಶಿವಲಿಂಗಯ್ಯನನ್ನ ತಮ್ಮ ವಶಕ್ಕೆ ತೆಗೆದುಕೊಳ್ಳಲು ಮೈಸೂರು ಪೊಲೀಸರು ಸುಸ್ತಾಗಿ ಹೋಗಿದ್ದರು. ಶಿವಲಿಂಗಯ್ಯನ ಸಂಪೂರ್ಣ ಬಯೋಡೆಟಾ ಹೊರತೆಗೆಯಲು ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅರೇಳು ಮಂದಿ ಇದ್ದಾರಂತೆ?: ಚಿತ್ರದುರ್ಗ ತಾಲೂಕಿನಲ್ಲಿ ಶಿವಲಿಂಗಯ್ಯ ಮೂರನೇ ಮದುವೆಯಾಗಿದ್ದಾನೆ ಎಂದು ಹೆಳಲಾಗಿದೆ. ಶಿವಲಿಂಗಯ್ಯನ ತವರು ಅಂಕನಹಳ್ಳಿಯ ಕೆಲವು ಜನರು ಹೇಳುವಂತೆ ಈತ ಅರೇಳು ಮದುವೆಯಾಗಿದ್ದಾನೆ. ಈ ಹಿಂದೆ ಕೂಡ ಹಲವು ವಂಚನೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿಯನ್ನು ನೀಡುತ್ತಾರೆ. ಈ ಬಗ್ಗೆ ಮೈಸೂರು ಮತ್ತು ರಾಮನಗರ ಪೊಲೀಸರು ಈತ ನಿಖರವಾಗಿ ಆಗಿರುವ ಮದುವೆ ಏಷ್ಟು? ಏಲ್ಲೆಲ್ಲಿ ಯಾರ್ಯಾರನ್ನು ಮದುವೆಯಾಗಿದ್ದಾನೆ ಎನ್ನುವುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications