ಅಯೋಧ್ಯೆ ತೀರ್ಪು : ಬೆಂಗಳೂರು ಜನಗಣಮನ

ಕನಿಷ್ಠಪಕ್ಷ ನೂರು ಮಂದಿಯೊಡನಾದರೂ ನಾನು ಮಾತಾಡಿರಬಹುದು. ಯಾರೊಬ್ಬರೂ ತೀರ್ಪಿನ ನಂತರ ಗಲಭೆಯನ್ನು ಬಯಸಿಲ್ಲ. 'ಇಂತಹ ಸಂದರ್ಭಗಳಲ್ಲಿ ಶಾಂತಿ ಕಾಪಾಡಬೇಕೆಂಬ ನಮ್ಮ ಹಂಬಲವೇ ನಾವು ಭಾರತಮಾತೆಗೆ ಸಲ್ಲಿಸಬಲ್ಲ ಅತಿದೊಡ್ಡ ಗೌರವ, ಮತ್ತು, ಶಾಂತಿ ಕಾಪಾಡುವ ಇಚ್ಛಾಶಕ್ತಿಯೇ ಈ ದೇಶದ ಅತಿ ದೊಡ್ಡ ಶಕ್ತಿ' ಎಂದು ನಾನು ವಿವರಿಸಿದಾಗ ಹಿಂದು ಮುಸ್ಲಿಂ ಎಲ್ಲರೂ ಒಕ್ಕೊರಲಿನಿಂದ ಹೌದೆಂದು ಪ್ರತಿಕ್ರಿಯಿಸಿದ್ದಾರೆ.
'ದಟ್ಸ್ ಕನ್ನಡ'ದಲ್ಲಿ ನಿನ್ನೆ ನಾನು ಬರೆದ ಕಿರುಬರಹಕ್ಕೆ ಸಂಪೂರ್ಣ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಪ್ರತಿಕ್ರಿಯಿಸಿರುವ ಎಲ್ಲ ಓದುಗ ಮಿತ್ರರೂ ಶಾಂತಿಯನ್ನು ಪ್ರತಿಪಾದಿಸಿದ್ದಾರೆ.
ಇದನ್ನೆಲ್ಲ ಕಂಡಾಗ ನನಗೆ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. (1) ಭಾರತದ ಹಿಂದು-ಮುಸ್ಲಿಂ ಎರಡೂ ಕೋಮುಗಳ ಎಲ್ಲ ಶ್ರೀಸಾಮಾನ್ಯರೂ ಶಾಂತಿಯುತ ಸಹಬಾಳ್ವೆಯನ್ನು ಬಯಸುವವರು; (2) ಶಾಂತಿಯ ಬಯಕೆಯು ಸಮಾಜದಲ್ಲಿ ಸದಾ ಹೃದಯಗಳನ್ನು ಬೆಸೆಯುತ್ತದೆ, ಜನರನ್ನು ಒಗ್ಗೂಡಿಸುತ್ತದೆ.
ಈ ಎರಡು ಇತ್ಯಾತ್ಮಕ ವಿಷಯಗಳೇ ನಮ್ಮೀ ದೇಶದ ಮಹಾನ್ ಶಕ್ತಿ. ಅದನ್ನು ಕಾಪಾಡಿಕೊಳ್ಳೋಣ. ಯುದ್ಧ, ಗಲಭೆಗಳಿಂದ ಎರಡೂ ಕಡೆಯವರಿಗೂ ನಷ್ಟ; ಶಾಂತಿ, ಸೌಹಾರ್ದಗಳಿಂದ ಎರಡೂ ಕಡೆಯವರಿಗೂ ಲಾಭ. ಆಂತರಿಕ ಗಲಭೆಗಳಿಂದ ದೇಶಕ್ಕೆ ನಷ್ಟ; ಆಂತರಿಕ ಶಾಂತಿ, ಸೌಹಾರ್ದದಿಂದ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚಿನ ಪ್ರತಿಷ್ಠೆ ಲಭ್ಯ. ಈ ಸತ್ಯವನ್ನು ನಾವೆಲ್ಲ ಸದಾ ನೆನಪಿನಲ್ಲಿಟ್ಟುಕೊಂಡಿರೋಣ.
ಇಂದು ತೀರ್ಪಿನ ನಂತರ ಕೆಲವು ಕುತ್ಸಿತಮತಿಗಳಿಂದಾಗಿ ನಮ್ಮ ಸುತ್ತಮುತ್ತ ಏನಾದರೂ ಗಲಭೆ ಸಂಭವಿಸಿದರೆ ನಾವು ಅದರಲ್ಲಿ ಭಾಗಿಗಳಾಗುವುದು ಬೇಡ. 'ಚಂದ' ನೋಡುತ್ತ ನಿಲ್ಲುವ ಮೂಲಕ ಗಲಭೆ ವಾತಾವರಣಕ್ಕೆ ಸಂಖ್ಯಾಬಲ ನೀಡುವುದೂ ಬೇಡ. ನಮ್ಮ ಸುತ್ತಮುತ್ತಲಿನವರೇ ಯಾರೋ ಕೆಲವರು ಅನ್ಯೋದ್ದೇಶದಿಂದ ಗಲಭೆ ಶುರುಹಚ್ಚಿದರೆಂದರೆ ಆಗ ನಾವು, ಸಾಧ್ಯವಿದ್ದರೆ, ಅವರಿಗೆ ತಿಳಿಹೇಳಿ ಗಲಭೆಯ ಕಿಡಿಯನ್ನು ಆರಿಸುವ ಪ್ರಯತ್ನ ಮಾಡೋಣ.
ಇತರ ಅನೇಕ ಅವಿವೇಕಿ ರಾಷ್ಟ್ರಗಳಂತಲ್ಲದೆ ಭಾರತವು ವಿವೇಕವನ್ನು ಮೆರೆಯುವ ಪ್ರಬುದ್ಧ ರಾಷ್ಟ್ರ ಎಂಬುದನ್ನು ಈ ಸಂದರ್ಭದಲ್ಲಿ ಜಗತ್ತಿಗೆ ತೋರಿಸಿಕೊಡೋಣ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications