ಅಯೋಧ್ಯೆ ತೀರ್ಪು : ಬೆಂಗಳೂರು ಜನಗಣಮನ

ಕನಿಷ್ಠಪಕ್ಷ ನೂರು ಮಂದಿಯೊಡನಾದರೂ ನಾನು ಮಾತಾಡಿರಬಹುದು. ಯಾರೊಬ್ಬರೂ ತೀರ್ಪಿನ ನಂತರ ಗಲಭೆಯನ್ನು ಬಯಸಿಲ್ಲ. 'ಇಂತಹ ಸಂದರ್ಭಗಳಲ್ಲಿ ಶಾಂತಿ ಕಾಪಾಡಬೇಕೆಂಬ ನಮ್ಮ ಹಂಬಲವೇ ನಾವು ಭಾರತಮಾತೆಗೆ ಸಲ್ಲಿಸಬಲ್ಲ ಅತಿದೊಡ್ಡ ಗೌರವ, ಮತ್ತು, ಶಾಂತಿ ಕಾಪಾಡುವ ಇಚ್ಛಾಶಕ್ತಿಯೇ ಈ ದೇಶದ ಅತಿ ದೊಡ್ಡ ಶಕ್ತಿ' ಎಂದು ನಾನು ವಿವರಿಸಿದಾಗ ಹಿಂದು ಮುಸ್ಲಿಂ ಎಲ್ಲರೂ ಒಕ್ಕೊರಲಿನಿಂದ ಹೌದೆಂದು ಪ್ರತಿಕ್ರಿಯಿಸಿದ್ದಾರೆ.
'ದಟ್ಸ್ ಕನ್ನಡ'ದಲ್ಲಿ ನಿನ್ನೆ ನಾನು ಬರೆದ ಕಿರುಬರಹಕ್ಕೆ ಸಂಪೂರ್ಣ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಪ್ರತಿಕ್ರಿಯಿಸಿರುವ ಎಲ್ಲ ಓದುಗ ಮಿತ್ರರೂ ಶಾಂತಿಯನ್ನು ಪ್ರತಿಪಾದಿಸಿದ್ದಾರೆ.
ಇದನ್ನೆಲ್ಲ ಕಂಡಾಗ ನನಗೆ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. (1) ಭಾರತದ ಹಿಂದು-ಮುಸ್ಲಿಂ ಎರಡೂ ಕೋಮುಗಳ ಎಲ್ಲ ಶ್ರೀಸಾಮಾನ್ಯರೂ ಶಾಂತಿಯುತ ಸಹಬಾಳ್ವೆಯನ್ನು ಬಯಸುವವರು; (2) ಶಾಂತಿಯ ಬಯಕೆಯು ಸಮಾಜದಲ್ಲಿ ಸದಾ ಹೃದಯಗಳನ್ನು ಬೆಸೆಯುತ್ತದೆ, ಜನರನ್ನು ಒಗ್ಗೂಡಿಸುತ್ತದೆ.
ಈ ಎರಡು ಇತ್ಯಾತ್ಮಕ ವಿಷಯಗಳೇ ನಮ್ಮೀ ದೇಶದ ಮಹಾನ್ ಶಕ್ತಿ. ಅದನ್ನು ಕಾಪಾಡಿಕೊಳ್ಳೋಣ. ಯುದ್ಧ, ಗಲಭೆಗಳಿಂದ ಎರಡೂ ಕಡೆಯವರಿಗೂ ನಷ್ಟ; ಶಾಂತಿ, ಸೌಹಾರ್ದಗಳಿಂದ ಎರಡೂ ಕಡೆಯವರಿಗೂ ಲಾಭ. ಆಂತರಿಕ ಗಲಭೆಗಳಿಂದ ದೇಶಕ್ಕೆ ನಷ್ಟ; ಆಂತರಿಕ ಶಾಂತಿ, ಸೌಹಾರ್ದದಿಂದ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚಿನ ಪ್ರತಿಷ್ಠೆ ಲಭ್ಯ. ಈ ಸತ್ಯವನ್ನು ನಾವೆಲ್ಲ ಸದಾ ನೆನಪಿನಲ್ಲಿಟ್ಟುಕೊಂಡಿರೋಣ.
ಇಂದು ತೀರ್ಪಿನ ನಂತರ ಕೆಲವು ಕುತ್ಸಿತಮತಿಗಳಿಂದಾಗಿ ನಮ್ಮ ಸುತ್ತಮುತ್ತ ಏನಾದರೂ ಗಲಭೆ ಸಂಭವಿಸಿದರೆ ನಾವು ಅದರಲ್ಲಿ ಭಾಗಿಗಳಾಗುವುದು ಬೇಡ. 'ಚಂದ' ನೋಡುತ್ತ ನಿಲ್ಲುವ ಮೂಲಕ ಗಲಭೆ ವಾತಾವರಣಕ್ಕೆ ಸಂಖ್ಯಾಬಲ ನೀಡುವುದೂ ಬೇಡ. ನಮ್ಮ ಸುತ್ತಮುತ್ತಲಿನವರೇ ಯಾರೋ ಕೆಲವರು ಅನ್ಯೋದ್ದೇಶದಿಂದ ಗಲಭೆ ಶುರುಹಚ್ಚಿದರೆಂದರೆ ಆಗ ನಾವು, ಸಾಧ್ಯವಿದ್ದರೆ, ಅವರಿಗೆ ತಿಳಿಹೇಳಿ ಗಲಭೆಯ ಕಿಡಿಯನ್ನು ಆರಿಸುವ ಪ್ರಯತ್ನ ಮಾಡೋಣ.
ಇತರ ಅನೇಕ ಅವಿವೇಕಿ ರಾಷ್ಟ್ರಗಳಂತಲ್ಲದೆ ಭಾರತವು ವಿವೇಕವನ್ನು ಮೆರೆಯುವ ಪ್ರಬುದ್ಧ ರಾಷ್ಟ್ರ ಎಂಬುದನ್ನು ಈ ಸಂದರ್ಭದಲ್ಲಿ ಜಗತ್ತಿಗೆ ತೋರಿಸಿಕೊಡೋಣ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications