ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ನಾಯಕರು ತೀರ್ಥಯಾತ್ರೆಗೆ ಹೋಗಲಿ
ಗುಲ್ಬರ್ಗ ಕ್ಷೇತ್ರದಲ್ಲಿ ಪಕ್ಷಕ್ಕಾದ ಸೋಲನ್ನು ಒಪ್ಪಿಕೊಳ್ಳುತ್ತೇನೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ತಿಳಿಯಿತು. ಅವರ ರಾಜೀನಾಮೆಯನ್ನು ನಾವು ಸ್ವಾಗತಿಸುತ್ತೇವೆ. ಮುಂದೆ ಯಾವ ಪಕ್ಷಕ್ಕೆ ಹೋಗುತ್ತಾರೋ, ಎಲ್ಲಿರುತ್ತಾರೋ ಆ ಭಗವಂತನೇ ಬಲ್ಲ ಎಂದ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಇನ್ನು ಮುಂದಾದರೂ ಕಾಂಗ್ರೆಸ್ ಪಕ್ಷದ ಧುರೀಣರು ಸರಕಾರದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಪಾದಯಾತ್ರೆಯ ಸಮಯದಲ್ಲಿ ಅವರಾಡಿದ ನಾಟಕವನ್ನು ಜನ ನೋಡಿದ್ದಾರೆ, ಯಾವ ಕೀಳು ಮಟ್ಟದ ಭಾಷೆಯನ್ನು ಅವರು ಬಳಸಿದ್ದಾರೆಂದು ಜನರಿಗೆ ತಿಳಿದಿದೆ. ಈಗ ಕಾಂಗ್ರೆಸ್ ನಾಯಕರು ವಿರಾಮವಾಗಿದ್ದಾರೆ. ಬಳ್ಳಾರಿಯಿಂದ ಮತ್ತೆ ಪಾದಯಾತ್ರೆ ಆರಂಭಿಸಲಿ ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Comments
ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಉಪ ಚುನಾವಣೆ ಕಡೂರು ಸಿದ್ದರಾಮಯ್ಯ ks eshwarappa congress bypoll kadur bjp siddaramaiah
Story first published: Friday, September 17, 2010, 10:15 [IST]