ದೌರ್ಜನ್ಯ : ದಲಿತರ ಪರ ಪೇಜಾವರ ಶ್ರೀಗಳ ಉಪವಾಸ

ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಪ್ರಕರಣ ನಡೆದಿತ್ತು. ನಗರದ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಮಧ್ಯಾಹ್ನ 1.45 ರಿಂದ ಉಪವಾಸ ಆರಂಭಿಸಿದ ಶ್ರೀಗಳು ಬುಧವಾರ ಮಧ್ಯಾಹ್ನ 1.45ಕ್ಕೆ ಅಂತ್ಯಗೊಳಿಸಲಿದ್ದಾರೆ. ಸದಾ ಚಟುವಟಿಕೆಯಿಂದಿರುವ ಸ್ವಾಮೀಜಿ ಉಪವಾಸದ ವೇಳೆಯೂ ಸುಮ್ಮನೆ ಕುಳಿತಿಲ್ಲ.
ತಮ್ಮ ಶಿಷ್ಯ ವೃಂದವನ್ನು ಮುಂದೆ ಕೂರಿಸಿಕೊಂಡು ಪ್ರವಚನ ನೀಡುವಲ್ಲಿ ನಿರತರಾಗಿದ್ದಾರೆ. ಜತೆಗೆ ವೇದಾಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಉಪವಾಸ ಯಾರ ವಿರುದ್ದ ಪ್ರತಿಭಟನೆಯೂ ಅಲ್ಲ, ಪಶ್ಚಾತ್ತಾಪವೂ ಅಲ್ಲ. ದೇವರ ಪ್ರಾರ್ಥನೆ. ಎಲ್ಲಿಯೂ ಹಿಂದೂಗಳಲ್ಲಿ ಘರ್ಷಣೆ, ಗಲಾಟೆ, ವೈಮನಸ್ಸು ಆಗಬಾರದು ಎನ್ನುವುದು ಆಶಯ. ಅದಕ್ಕಾಗಿ ಉಪವಾಸ ನಡೆಸುತ್ತಿದ್ದು, ಆ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದರು.












Click it and Unblock the Notifications